ಬೆಂಗಳೂರು, ಆಗಸ್ಟ್ 16: ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್ ) ನ ಜ್ವರ ನಿಧಾನವಾಗಿ ಹಬ್ಬುತ್ತಿದ್ದು, ತಂಡಗಳು ಭರ್ಜರಿಯಾಗಿ ತಯಾರಿ ನಡೆಸಿವೆ.
ಶ್ರೀಲಂಕಾದ ಮಾಜಿ ನಾಯಕ ಹಾಗೂ ಕೋಚ್ ಮಾರ್ವನ್ ಅಟಪಟ್ಟು ಅವರನ್ನು ಬೆಳಗಾವಿ ತಂಡಕ್ಕೆ ಮಾರ್ಗದರ್ಶಿಯಾಗಿ ನೇಮಿಸಲಾಗಿದೆ.
ಮಹಿಳಾ ವಿಶ್ವಕಪ್ ನಲ್ಲಿ ಭಾರತದ ಪರ ಬ್ಯಾಟ್ ಬೀಸಿದ್ದ ಕಡೂರಿನ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಅವರನ್ನು ತಂಡದ ರಾಯಭಾರಿಯಾಗಿ ನೇಮಿಸಲಾಗಿದೆ.
ಅಟಪಟ್ಟು ಅವರು 90 ಟೆಸ್ಟ್ ಹಾಗೂ 268 ಏಕದಿನ ಪಂದ್ಯವಾಡಿದ್ದು, ಟೆಸ್ಟ್ ನಲ್ಲಿ 5,502 ರನ್, 16 ಶತಕ, ಏಕದಿನ ಕ್ರಿಕೆಟ್ ನಲ್ಲಿ 8,529 ರನ್ ಹಾಗೂ 11 ಶತಕ ಬಾರಿಸಿದ್ದಾರೆ. ಯುವ ಆಟಗಾರರಿಗೆ ಮಾರ್ಗದರ್ಶನ ನೀಡಲು ಉತ್ತಮ ಅವಕಾಶ ಸಿಕ್ಕಿದೆ ಎಂದು ಅಟಪಟ್ಟು ಹೇಳಿದ್ದಾರೆ.