ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರವಿ ಬೆಳಗೆರೆಗೆ ವಿಧಿಸಿದ ಶಿಕ್ಷೆ ಖಂಡನಾರ್ಹ: ಸನತ್ ಕುಮಾರ್ ಬೆಳಗಲಿ

|
Google Oneindia Kannada News

ಬೆಂಗಳೂರು, ಜೂನ್ 24: ವಿಧಾನಾಮಂಡಲದ ಕೆಲಸ ಕಾನೂನು ರಚನೆ ಮಾಡುವುದೇ ಹೊರತು, ಶಿಕ್ಷೆ ನೀಡುವುದಲ್ಲ. ಪತ್ರಕರ್ತ ರವಿ ಬೆಳಗೆರೆ ಅವರ ವಿರುದ್ಧ ಜೈಲು ಶಿಕ್ಷೆ ಹಾಗೂ ದಂಡ ವಿಧಿಸುವುದಕ್ಕೆ ಸೂಚನೆ ಮಾಡಿರುವುದು ದಮನಕಾರಿ ನೀತಿ. ಇದನ್ನು ಖಂಡಿಸುತ್ತೇನೆ ಎಂದು ಹಿರಿಯ ಪತ್ರಕರ್ತರಾದ ಸನತ್ ಕುಮಾರ್ ಬೆಳಗಲಿ ಅವರು ಶನಿವಾರ ಪ್ರತಿಕ್ರಿಯಿಸಿದ್ದಾರೆ.

ಶರಣಾಗುವ ಸ್ಥಿತಿ ಬಂದರೆ ಆತ್ಮಹತ್ಯೆ ಮಾಡಿಕೊಳ್ತ್ತೀನಿ: ರವಿ ಬೆಳಗೆರೆಶರಣಾಗುವ ಸ್ಥಿತಿ ಬಂದರೆ ಆತ್ಮಹತ್ಯೆ ಮಾಡಿಕೊಳ್ತ್ತೀನಿ: ರವಿ ಬೆಳಗೆರೆ

ನಮ್ಮ ಸಂವಿಧಾನವೇ ಈ ವಿಚಾರವನ್ನು ಸ್ಪಷ್ಟಪಡಿಸುತ್ತದೆ ಶಾಸಕಾಂಗದ ಕೆಲಸ ಕಾನೂನು ರಚನೆ ಮಾಡುವುದೇ ವಿನಾ ಜಾರಿಯ ಜವಾಬ್ದಾರಿ ನ್ಯಾಯಾಂಗದ್ದಾಗಿರುತ್ತದೆ. ಬಹಳ ಹಿಂದಿನಿಂದಲೂ ಈ ವಿಚಾರದಲ್ಲಿ ಸಂಘರ್ಷಗಳು ನಡೆದುಕೊಂಡು ಬರುತ್ತಿವೆ. ಈ ರೀತಿಯ ಕ್ರಮಗಳು ಪತ್ರಿಕಾ ಸ್ವಾತಂತ್ರ್ಯ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ದಮನಕಾರಿ ನೀತಿ ಎಂದು ಒನ್ ಇಂಡಿಯಾ ಕನ್ನಡಕ್ಕೆ ತಿಳಿಸಿದರು.

ರವಿ ಬೆಳಗೆರೆಗೆ ಎದೆನೋವು: ಧಾರವಾಡದಲ್ಲಿ ಆಸ್ಪತ್ರೆಗೆ ದಾಖಲುರವಿ ಬೆಳಗೆರೆಗೆ ಎದೆನೋವು: ಧಾರವಾಡದಲ್ಲಿ ಆಸ್ಪತ್ರೆಗೆ ದಾಖಲು

Senior Journalist Sanath Kumar Belagali condemns assembly decision against Ravi Belagere

ಸದನದಿಂದ ರಚನೆಯಾದ ಸಮಿತಿಯ ಮುಂದೆ ರವಿ ಬೆಳಗೆರೆಯವರು ಹಾಜರಾಗಿ ತಮ್ಮ ಅಭಿಪ್ರಾಯ ಅಥವಾ ಉತ್ತರ ದಾಖಲಿಸಬೇಕಿತ್ತು ಅನ್ನೋದು ನಿಜ. ಆದರೆ ಅದು ಸಣ್ಣ ಮಟ್ಟದ ತಾಂತ್ರಿಕ ದೋಷ ಅಷ್ಟೇ. ಅಂಥ ಸಣ್ಣ ದೋಷಕ್ಕೆ ಇಂಥ ಶಿಕ್ಷೆ ವಿಧಿಸುವುದು ಯಾವ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

English summary
Senior Journalist Sanath Kumar Belagali condemns Karnataka Legislative Assembly order to imprison editors of two Kannada tabloids for a year with a fine of Rs. 10,000 for breach of privilege.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X