ಅಕ್ಕ ಸಮ್ಮೇಳನ : ರಿಯಾಯಿತಿ ದರ ಅವಧಿ ವಿಸ್ತರಣೆ
ಎಂಟನೇ 'ಅಕ್ಕ' ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸಲಿಚ್ಛಿಸುವ ವಿಶ್ವ ಕನ್ನಡಿಗರಿಗೆ ಇಲ್ಲೊಂದು ಸಂತಸದ ಸುದ್ದಿಯಿದೆ. ಜೂನ್ 15ರೊಳಗೆ ನೋಂದಾಯಿಸಿಕೊಂಡವರಿಗೆ 'ಯುಗಾದಿ ಸಂಭ್ರಮ' ವಿಶೇಷ ಕೊಡುಗೆಯಾದ ಶೇ.30ರಷ್ಟು ರಿಯಾಯಿತಿ ದೊರೆಯಲಿದೆ. ಈ ಕೊಡುಗೆಯನ್ನು ಯಾವುದೇ ಕಾರಣಕ್ಕೂ ವಿಸ್ತರಿಸುವುದಿಲ್ಲ ಎಂದು ಆಯೋಜಕರು ಹೇಳಿದ್ದಾರೆ.
ಕಾರ್ಯಕ್ರಮದ ನಿರ್ದೇಶಕರು, ಅಮೆರಿಕನ್ನಡಿಗರು, ತಮ್ಮ ಮಕ್ಕಳನ್ನು ಬೇಸಿಗೆ ರಜೆಗೆ ಭಾರತಕ್ಕೆ ಕರೆದುಕೊಂಡು ಹೋಗಬೇಕೆಂದಿದ್ದ ಪಾಲಕರ ಆಗ್ರಹದ ಮೇರೆಗೆ 'ಯುಗಾದಿ ಸಂಭ್ರಮ' ವಿಶೇಷ ಕೊಡುಗೆಯನ್ನು ಜೂನ್ 15ರವರೆಗೆ ವಿಸ್ತರಿಸಲಾಗಿದೆ. ಇದರ ಪ್ರಕಾರ ವಯಸ್ಕರು 179 ಡಾಲರ್, ಮಕ್ಕಳು 119 ಡಾಲರ್ ಮತ್ತು ಎಫ್1 ವೀಸಾ ಹೊಂದಿದವರು 129 ಡಾಲರ್ ನೀಡಿ ನೋಂದಾಯಿಸಬಹುದು. [ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ]
ಸಂಕ್ರಾಂತಿಯ ಶುಭದಿನವಾದ ಜನವರಿ 14ರಿಂದ, ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಆಗಸ್ಟ್ 29ರಿಂದ ಮೂರು ದಿನಗಳ ಕಾಲ ನಡೆಯಲಿರುವ ಕನ್ನಡ ಸಾಂಸ್ಕೃತಿಕ ಹಬ್ಬಕ್ಕೆ ನೋಂದಾವಣಿ ಆರಂಭವಾಗಿತ್ತು. ಮೊದಲಿಗೆ ಆರಂಭಿಕ ಆಹ್ವಾನದ ಕೊಡುಗೆಯನ್ನು ಮಾರ್ಚ್ 1ರವರೆಗೆ ಮಾತ್ರ ನಿಗದಿಪಡಿಸಲಾಗಿತ್ತು. ಆದರೆ, ಕನ್ನಡಿಗರ ಆಗ್ರಹದ ಮೇರೆಗೆ ಮೇ 15ರವರೆಗೆ ವಿಸ್ತರಿಸಲಾಗಿತ್ತು.
ಆರಂಭಿಕ ಆಹ್ವಾನವನ್ನು ಪಡೆದವರು ಬಿಸಿನೆಸ್ ಫೋರಂನಂಥ ಕೆಲವೊಂದು ಕಾರ್ಯಕ್ರಮಗಳನ್ನು ಹೊರತುಪಡಿಸಿ, ಮೂರು ದಿನಗಳ ಕಾಲ ಎಲ್ಲ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದು. ಜೊತೆಗೆ ಸುಖ್ರಾಸ ಭೋಜನವನ್ನೂ ಸವಿಯಬಹುದು. ಇದರಲ್ಲಿ ವೈಯಕ್ತಿಕ, ಕೌಟುಂಬಿಕ, ಟಿಕೆಟ್ ಇರುವಂಥ ಕಾರ್ಯಕ್ರಮ ಮತ್ತು ದೇಣಿಗೆ ನೀಡುವವರ ಆಫರುಗಳು ಪ್ರತ್ಯೇಕವಾಗಿವೆ. [ಸಮ್ಮೇಳನಕ್ಕೊಂದು ಸುಂದರ ಆಪ್]
ಸಮ್ಮೇಳನದ ದಿನ ಹತ್ತಿರ ಬಂದಂತೆಲ್ಲ ನೋಂದಾವಣಿಯ ಮೊತ್ತ ಕೂಡ ಜಾಸ್ತಿಯಾಗುತ್ತ ಹೋಗುತ್ತದೆ. ವೈಯಕ್ತಿಕ, ಕೌಟುಂಬಿಕ ಮತ್ತು ಬಿಸಿನೆಸ್ ಫೋರಂ ಪ್ಯಾಕೇಜ್ ಗಳು ಕೂಡ ಇದ್ದು, ಬೇಗನೆ ನೋಂದಾಯಿಸಿಕೊಂಡವರು ರಿಯಾಯಿತಿಯ ಲಾಭ ಪಡೆಯಬಹುದು. ಏಳು ವರ್ಷಕ್ಕಿಂತ ಮಕ್ಕಳಿಗೆ ಶುಲ್ಕವಿರುವುದಿಲ್ಲ. ಎಂಟರಿಂದ ಹದಿನೆಂಟು ವಯಸ್ಸಿನವರನ್ನು ಮಕ್ಕಳೆಂದು ಪರಿಗಣಿಸಲಾಗುತ್ತದೆ.
ಯಾರ್ಯಾರು
ಬರುತ್ತಿದ್ದಾರೆ
:
ಈ
ನಡುವೆ,
ಎರಡು
ವರ್ಷಕ್ಕೊಮ್ಮೆ
'ಅಕ್ಕ'ನ
ಮುಂದಾಳತ್ವದಲ್ಲಿ
ಅಮೆರಿಕದಲ್ಲಿ
ನಡೆಯುವ
ಕನ್ನಡ
ಸಮ್ಮೇಳನಕ್ಕೆ
ಭರ್ಜರಿಯಾಗಿ
ತಯಾರಿ
ನಡೆದಿದ್ದು,
ಅಂಬಾಸಿಡರ್
ಆಗಿ
'ಪವರ್
ಸ್ಟಾರ್'
ಪುನೀತ್
ರಾಜ್
ಕುಮಾರ್,
'ಭಾರತರತ್ನ'
ಪ್ರೊ.
ಸಿಎನ್ಆರ್
ರಾವ್,
ಖ್ಯಾತ
ಲೇಖಕ
ಎಸ್ಎಲ್
ಭೈರಪ್ಪ,
'ಚಾಲೇಂಜಿಂಗ್
ಸ್ಟಾರ್'
ದರ್ಶನ್
ತೂಗುದೀಪ,
ಎಂದಿನಂತೆ
ಸಂಗೀತ
ನಿರ್ದೇಶಕ
ಗುರು
ಕಿರಣ್
ಭಾಗವಹಿಸುತ್ತಿರುವುದು
ಸಮ್ಮೇಳನಕ್ಕೆ
ಭಾರೀ
ಕಳೆ
ತರಲಿದೆ.
ವಿಶೇಷ ಆಕರ್ಷಣೆಗಳು : ಜೊತೆಗೆ ವಿಶೇಷ ಆಕರ್ಷಣೆಗಳು ಕನ್ನಡಿಗರನ್ನು ಸೆಳೆಯುತ್ತಿವೆ. ವಿದ್ಯಾಲತಾ ಜೀರಗೆ ಅವರ ಕಲಾ ನಿರ್ದೇಶನದಲ್ಲಿ, ಡಾ. ಸಂಜಯ್ ಶಾಂತಾರಾಂ ಅವರ ಕಲ್ಪನೆ ಮತ್ತು ನೃತ್ಯ ಸಂಯೋಜನೆ ಇರುವ 'ರೂಪ ವಿರೂಪ' ಎಂಬ ನೃತ್ಯ ರೂಪಕ ಆಕರ್ಷಣೆಯ ಕೇಂದ್ರಬಿಂದುವಾಗಲಿದೆ. ಅದ್ಭುತ ಸೆಟ್ಟಿಂಗ್ ಮತ್ತು ಆಕರ್ಷಕ ಕಾಸ್ಟ್ಯೂಮ್ ಗಳು ಜನರನ್ನು ಸೆಳೆಯುವುದರಲ್ಲಿ ಸಂಶಯವೇ ಇಲ್ಲ.
ಕನ್ನಡ ಸಣ್ಣಕಥೆ, ಕವನ, ಹನಿಗವನ, ಪ್ರಬಂಧ, ಪ್ರವಾಸ ಕಥನ, ಪದಬಂಧ ಇತ್ಯಾದಿ ಯಾವುದೇ ಸಾಹಿತ್ಯ ಪ್ರಕಾರದಲ್ಲಿರುವ ಅತ್ಯಮೂಲ್ಯ ಲೇಖನಗಳನ್ನು, ಸಮಾಜದ ಧುರೀಣರ ಸಂದೇಶಗಳನ್ನು, ಸಾಹಿತ್ಯ ಪ್ರಪಂಚದ ದಿಗ್ಗಜರ ಹಾರೈಕೆಗಳನ್ನೂ, ಸಮ್ಮೇಳನದ ಸವಿ ನೆನಪುಗಳನ್ನೂ ಹೊತ್ತು ವಿಶೇಷ ಸಂಚಿಕೆಯನ್ನು ತರಲಾಗುತ್ತಿದೆ. ಲೇಖನ ಕಳಿಸಲು ಮೇ 31 ಕೊನೆಯ ದಿನವಾಗಿತ್ತು. [ಲೇಖನಗಳಿಗೆ ಆಹ್ವಾನ]