ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪ್ಸರೆಯ ಅಹಂಭಾವ

By ಡಾ. ಕೃಷ್ಣಮೂರ್ತಿ ಜೊಯಿಸ್; ವರ್ಜೀನಿಯ, ಯುಯಸ್ಎ
|
Google Oneindia Kannada News

Kannada poem by Krishnamurthy Jois
ಚಿತ್ತಾರದ ಬಾನಿನಲಿ ಹುಣ್ಣಿಮೆಯ ಚಂದಿರ
ನೋಡವನ ಸ್ವಚ್ಛ ಸುಂದರ ರೂಪ ಎಂದೆ
ಮೋಡದ ಕರಿ ಮುಸುಕಿನಲಿ ಮಸುಕಾಗಿ
ಎಲ್ಲಿಯ ಸ್ವಚ್ಛತೆ ಎಂದಳು ನನ್ನ ರೂಪ

ಕತ್ತಲಿನ ಬಾನಿನಲಿ ಹುಣ್ಣಿಮೆಯ ಚಂದಿರ
ನೋಡವನ ಬಣ್ಣದ ಕಾಂತಿಯನು ಎಂದೆ
ಅರಿಸಿನದ ಓಕುಳಿಯಲಿ ಮಸುಕಾಗಿ ನಿಂತು
ಎಲ್ಲಿಯ ಮೈ ಕಾಂತಿ ಎಂದಳು ನನ್ನ ರೂಪ

ಎತ್ತರದ ಬಾನಿನಲಿ ಹುಣ್ಣಿಮೆಯ ಚಂದಿರ
ನೋಡವನ ಮಂಜಿನ ಮೈ ಬಣ್ಣವನು ಎಂದೆ
ಅತಿಯಾದ ಕಪ್ಪು ಕಲೆಯ ಕೂಪದಲಿ ನಿಂತು
ಎಲ್ಲಿಯ ಮಂಜಿನ ಮೈ ಎಂದಳು ನನ್ನ ರೂಪ

ತಾರೆಗಳ ಬಾನಿನಲಿ ಹುಣ್ಣಿಮೆಯ ಚಂದಿರ
ನೋಡವನ ಅಪ್ಸರೆ ಸೌಂದರ್ಯ ಎಂದೆ
ಹುಣ್ಣಿಮೆ ಕರಗಿ ಕತ್ತಲೆಯ ಭೀತಿಯಲಿ ನಿಂತು
ಎಲ್ಲಿಯ ಅಪ್ಸರೆ ಎಂದಳು ನನ್ನ ರೂಪ

ನವಜಾತ ಭಾಸ್ವಾತೆ ಬಾನಿನಲಿ ಚಂದಿರ
ಅವನಿಗಿಲ್ಲದ ಅಹಂಭಾವ ನಿನಗೇಕೆ ಎಂದೆ
ಎನ್ನ ಕರ್ಪೂರ ಗೌರ ಸುಂದರದ ಸಾಟಿ ಆ
ಕಲೆ ಪೂರಿತ ಚಂದಿರನಲ್ಲವೆಂದಳು ನನ್ನ ರೂಪ

English summary
Kannada poem by Dr. Krishnamurthy Jois, Virginia, USA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X