ಗಂಧರ್ವಲೋಕಕ್ಕೆ ಕರೆದೊಯ್ದ ಸಂಗೀತ ಸಂಜೆ
ಹರಿಣಿಯವರು ಕನ್ನಡದವರಲ್ಲದಿದ್ದರೂ ಕಡಿಮೆ ಸಮಯದಲ್ಲಿ ಕನ್ನಡ ಹಾಡುಗಳನ್ನು ಅಭ್ಯಾಸ ಮಾಡಿ ಶ್ರೋತೃಗಳನ್ನು ಗೆಲ್ಲುವಲ್ಲಿ ಸಫಲರಾದರು. ಎಸ್. ಜಾನಕಿಯವರ ಅನೇಕ ಹಾಡುಗಳನ್ನು ಹಾಡಿದ ಅವರು, ತಮ್ಮ ಮೊದಲ ಹಾಡು - ಪೂಜಿಸಲೆಂದೇ ಹೂಗಳ ತಂದೆ, ಅದೊಂದರಲ್ಲೇ ತಮ್ಮ ಗಾನ ನೈಪುಣ್ಯತೆಯನ್ನು ಪ್ರದರ್ಶಿಸಿದರು. ಸುರೇಶ್ ಅವರು ಹಾಡಿದ ಎಲ್ಲೋ ಜೋಗಪ್ಪ, ಎಲ್ಲಕ್ಕಿಂತ ಹೆಚ್ಚು ಚಪ್ಪಾಳೆಗಳನ್ನು ಗಿಟ್ಟಿಸಿಕೊಂಡಿದ್ದೂ ಅಲ್ಲದೇ ವೇದಿಕೆಯ ಮೇಲೆ ಮಕ್ಕಳೂ ಹಾಗೂ ದೊಡ್ಡವರಲೆಲ್ಲ ಕುಣಿಯುವಂತೆ ಮಾಡಿತು.
ಯೂಥ್ ಕಮಿಟಿ : ಈ ವಾರ್ಷಿಕೋತ್ಸವದ ಸಂದರ್ಭದಲ್ಲಿ ಬೃಂದಾವನದ ಮೈತ್ರಿ ತಂಡದವರು ಹೊಸದಾಗಿ ಯೂತ್ ಕಮಿಟಿಯೊಂದನ್ನು ಆಯೋಜಿಸಿರುವುದು ವಿಶೇಷ. ಯೂತ್ ಕಮಿಟಿಯಲ್ಲಿ ಒಟ್ಟು ಹತ್ತು ಜನ ಕಾರ್ಯಕರ್ತರನ್ನು ಅವರವರ ಆಯ್ಕೆಗೆ ತಕ್ಕಂತೆ ಸಮಾರಂಭದ ಪ್ಲಾನಿಂಗ್ನಿಂದ ಹಿಡಿದು, ಪೂರ್ಣ ಸಮಾರಂಭವನ್ನು ಆಯೋಜಿಸಿ ನಡೆಸಿಕೊಡುವಲ್ಲಿ ಸಹಕಾರಿಯಾಗುವಂತೆ ಮಾರ್ಗದರ್ಶನ ನೀಡಲಾಗಿತ್ತು. ಯೂತ್ ಕಮಿಟಿಯ ಸದಸ್ಯರು ಬಹಳ ಉತ್ಸಾಹದಿಂದ ತಮ್ಮ ಪಾಲಿನ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟು ಈ ಕಾರ್ಯಕ್ರಮವನ್ನು ಯಶಸ್ವಿಯಾಗಿಸುವಲ್ಲಿ ಕಾರಣಕರ್ತರಾಗಿದ್ದಾರೆ ಎಂದರೆ ತಪ್ಪಾಗಲಾರದು.
ಯೂತ್ ಕಮಿಟಿಯ ಸದಸ್ಯರುಗಳು: ಸಂಹಿತಾ ಮೂರ್ತಿ, ಸುಹಾಸ್ ಕುಮಾರ್, ಅಮೂಲ್ಯ ಕಟ್ಟಿಮನಿ, ಶಿವ ದರ್ಶನ್, ಅವಿನಾಶ್ ದರ್ಶನ್, ರುತ್ವಿಕ್ ಕುಮಾರ್, ಆಕಾಶ್ ಮುತ್ತು, ನೂಪುರ್ ಮೂರ್ತಿ, ಮತ್ತು ಅಭಯ್ ಆರಾಧ್ಯ.