ಉಡುಪಿ: ಮೂರು ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಕೆ
ಉಡುಪಿ, ಮೇ 26: ಕುಡಿಯುವ ನೀರಿನ ಸಮಸ್ಯೆಯಿಂದ ಉಡುಪಿ ಜಿಲ್ಲೆ ತತ್ತರಿಸುತ್ತಿದೆ. ಉಡುಪಿ ನಗರಸಭಾ ವ್ಯಾಪ್ತಿಗೆ ಕುಡಿಯುವ ನೀರು ಪೂರೈಸುವ ಸ್ವರ್ಣಾ ನದಿಯ ಬಜೆ ಅಣೆಕಟ್ಟಿನಲ್ಲಿ ಮಳೆಯ ಕೊರತೆ ಕಾರಣದಿಂದ ನೀರಿನ ಮಟ್ಟ ತೀವ್ರವಾಗಿ ಕುಸಿದಿದೆ. ಇನ್ನು 10-12 ದಿನಗಳಲ್ಲಿ ಮುಂಗಾರು ಮಳೆ ಆಗಮನದ ನಿರೀಕ್ಷೆಯಿದೆ ಎಂದು ಉಡುಪಿ ನಗರ ಸಭೆ ಆಶಿಸಿದೆ.
ಹೀಗಾಗಿ,
ಉಡುಪಿ
ನಗರಸಭಾ
ವ್ಯಾಪ್ತಿಯ
35
ವಾರ್ಡ್ಗಳಿಗೆ
ಮೇ
27ರಿಂದ
ಈ
ಮುಂದಿನ
ವೇಳಾಪಟ್ಟಿಯಂತೆ
3
ದಿನಗಳಿಗೊಮ್ಮೆ
ನೀರು
ಪೂರೈಕೆ
ಮಾಡಲಾಗುವುದು
ಎಂದು
ಪೌರಾಯುಕ್ತ
ಡಿ
ಮಂಜುನಾಥಯ್ಯ
ಅವರು
ಹೇಳಿದ್ದಾರೆ.
ಮುಂಜಾನೆ 4:30ರಿಂದ 9:30ರವರೆಗೆ : ಅಜ್ಜರಕಾಡು, ಕಿನ್ನಿಮೂಲ್ಕಿ, ತೆಂಕಪೇಟೆ, ಒಳಕಾಡು, ಬೈಲೂರು, ಶಿರಿಬೀಡು, ಬನ್ನಂಜೆ, ಅಂಬಲಪಾಡಿ, ಚಿಟ್ಪಾಡಿ, ನಿಟ್ಟೂರು, ಕರಂಬಳ್ಳಿ, ಕಕ್ಕುಂಜೆ, ಕಡಿಯಾಳಿ, ಗುಂಡಿಬೈಲು (ದೊಡ್ಡಣಗುಡ್ಡೆ) ಪ್ರದೇಶಗಳಲ್ಲಿ
ಬೆಳಗ್ಗೆ 9:30ರಿಂದ ಮಧ್ಯಾಹ್ನ 1 ಗಂಟೆಯವರೆಗೆ: ಇಂದಿರಾ ನಗರ, ಕಸ್ತೂರ್ಬಾ ನಗರ, ಬಡಗುಬೆಟ್ಟು, ಕುಂಜಿಬೆಟ್ಟು, ಇಂದ್ರಾಳಿ, ಮಂಚಿ, ಸುಬ್ರಹ್ಮಣ್ಯ ನಗರ, ಗೋಪಾಲಪುರ, ಮೂಡುಬೆಟ್ಟು, ಮೂಡುಪೆರಂಪಳ್ಳಿ, ಸಗ್ರಿ, ಕೊಡಂಕೂರು, ಕೊಡವೂರು ಪ್ರದೇಶಗಳಿಗೆ ಪರ್ಕಳ, ಸೆಟ್ಟಿಬೆಟ್ಟು
ಮುಂಜಾನೆ 5:30ರಿಂದ 8:30ರವರೆಗೆ: ಕೊಡವೂರು (ಭಾಗಶಃ), ಕಲ್ಮಾಡಿ, ಈಶ್ವರನಗರ, ಸರಳೇಬೆಟ್ಟು, ಮಲ್ಪೆ ಸೆಂಟ್ರಲ್, ವಡಬಾಂಡೇಶ್ವರ, ಕೊಳ ಈ ಸ್ಥಳಗಳಲ್ಲಿ ಅಪರಾಹ್ನ 2 ರಿಂದ ಸಂಜೆ 6:30ರವರೆಗೆ ಹಾಗೂ ಮಣಿಪಾಲ, ಅನಂತನಗರ, ದುಗ್ಲಿಪದವು ಈ ಭಾಗಗಳಲ್ಲಿ ಮುಂಜಾನೆ 5:30ರಿಂದ 7:30ರವರೆಗೆ ನೀರು ಸರಬರಾಜು ಮಾಡಲಾಗುವುದು, ನೀರನ್ನು ಮಿತವಾಗಿ ಬಳಸಿ ಸಹಕರಿಸುವಂತೆ ಕೇಳಿಕೊಂಡಿದ್ದಾರೆ. (ಒನ್ ಇಂಡಿಯಾ ಸುದ್ದಿ)