ರಸ್ತೆ ದುರಸ್ಥಿಗಾಗಿ ರಸ್ತೆ ಹೊಂಡದಲ್ಲಿ ಈಜಿ ಪ್ರತಿಭಟನೆ
ಉಡುಪಿ, ಆ.08 : ರಸ್ತೆಯ ಹೊಂಡದಲ್ಲಿ ನಿಂತಿರುವ ನೀರಿನಲ್ಲಿ ಈಜಾಡಿ ರಸ್ತೆ ದುರಸ್ಥಿತಿಗಾಗಿ ವಿನೂತನವಾಗಿ ಪ್ರತಿಭಟನೆ ನಡೆಸಲಾಗಿದೆ. ವಿಶ್ವಮಟ್ಟದಲ್ಲಿ ಪ್ರಸಿದ್ಧಿ ಪಡೆದಿರುವ ಮಣಿಪಾಲದಲ್ಲಿ ರಸ್ತೆಯನ್ನು ತಕ್ಷಣ ಸರಿಪಡಿಸಬೇಕು ಎಂದು ಒತ್ತಾಯಿಸಲಾಯಿತು.
ಮಂಗಳೂರಿನಲ್ಲಿ ಮುಗಿಯದ ರಸ್ತೆ ನಾಮಕರಣ ರಗಳೆ
ಈ ಪ್ರತಿಭಟನೆ ನಡೆದಿರುವುದು ಮಣಿಪಾಲದ ಟೈಗರ್ ಸರ್ಕಲ್ ನಲ್ಲಿರುವ ಬಸ್ ನಿಲ್ದಾಣದ ಬಳಿ. ಪ್ರತಿನಿತ್ಯ ಈ ರಸ್ತೆಯಲ್ಲಿ ಸಾವಿರಾರು ಜನರು ಸಂಚಾರ ನಡೆಸುತ್ತಾರೆ. ಆದರೆ, ಜಿಲ್ಲಾಡಳಿತ, ನಗರಸಭೆ ಅಥವಾ ಯಾವುದೇ ಜನ ಪ್ರತಿನಿಧಿಗಳಿಗೂ ಇಲ್ಲಿನ ರಸ್ತೆಗಳ ಸ್ಥಿತಿ ಕಾಣುವುದಿಲ್ಲ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.
ಈ ರಸ್ತೆಯನ್ನು ದುರಸ್ಥಿ ಮಾಡುವಂತೆ ಆಗ್ರಹಿಸಿ ಹಲವು ಬಾರಿ ಪ್ರತಿಭಟನೆ ನಡೆಸಲಾಗಿತ್ತು. ಆದರೆ, ಯಾರೂ ಇತ್ತ ಗಮನ ಹರಿಸಲಿಲ್ಲ. ಆದ್ದರಿಂದ, ಇಂದು ರಸ್ತೆಯ ಹೊಂಡದ ನೀರಿನಲ್ಲಿ ಈಜುವ ಮೂಲಕ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಲಾಯಿತು.
ಮಳೆ ಅವಾಂತರ: ದುರಸ್ತಿಯಾಗದ ಕೊಡಗು-ಕೇರಳ ರಸ್ತೆ
ರಸ್ತೆಯಲ್ಲಿ ಈಜಿ ಪ್ರತಿಣಭಟನೆ ನಡೆಸಿದವರು ನಿತ್ಯಾನಂದ ಒಳಕಾಡು. ನಿತ್ಯಾನಂದ ಅವರ ಪ್ರತಿಭಟನೆಗೆ ಹಲವು ಜನರು ಬೆಂಬಲ ನೀಡಿದರು ಮತ್ತು ರಸ್ತೆ ದುರಸ್ಥಿ ಮಾಡುವಂತೆ ಒತ್ತಾಯಿಸಿದರು.
ರಸ್ತೆಗಾಗಿ ವಿನೂತನ ಪ್ರತಿಭಟನೆ
ಈ ವ್ಯಕ್ತಿ ಆಕಸ್ಮಿಕವಾಗಿ ರಸ್ತೆಯ ಹೊಂಡಕ್ಕೆ ಬಿದಿಲ್ಲ. ಇದು ಈಜುಕೊಳವೂ ಅಲ್ಲ. ರಸ್ತೆ ದುರಸ್ಥಿ ಮಾಡಿ ಎಂದು ಒತ್ತಾಯಿಸಲು ವಿಶಿಷ್ಟವಾಗಿ ಪ್ರತಿಭಟನೆ ನಡೆಸಿದ ರೀತಿ ಇದು.
ಈ ಪ್ರತಿಭಟನೆ ನಡೆದಿದ್ದು ಮಣಿಪಾಲ್ ನಲ್ಲಿ
ಈ ಪ್ರತಿಭಟನೆ ನಡೆದಿರುವುದು ಮಣಿಪಾಲದಲ್ಲಿರುವ ಟೈಗರ್ ಸರ್ಕಲ್ ಬಸ್ ನಿಲ್ದಾಣದ ಬಳಿ. ಪ್ರತಿನಿತ್ಯ ಈ ರಸ್ತೆಯಲ್ಲಿ ಸಾವಿರಾರು ಜನರು ಸಂಚಾರ ನಡೆಸುತ್ತಾರೆ. ಆದರೆ, ರಸ್ತೆ ಮಾತ್ರ ಸಂಪೂರ್ಣವಾಗಿ ಹದಗೆಟ್ಟಿದೆ.
ಪ್ರತಿಭಟನೆ ನಡೆಸಿದ್ದು ನಿತ್ಯಾನಂದ ಒಳಕಾಡು
ಈ ರೀತಿ ವಿಶಿಷ್ಟವಾಗಿ ಪ್ರತಿಭಟನೆ ನಡೆಸುವ ಯೋಜನೆ ಹಾಕಿಕೊಂಡಿದ್ದು ನಿತ್ಯಾನಂದ ಒಳಕಾಡು. ಹಲವು ಸಾರ್ವಜನಿಕರು ಈ ಪ್ರತಿಭಟನೆಗೆ ಸಹಕಾರ ನೀಡಿದರು ಮತ್ತು ರಸ್ತೆ ದುರಸ್ತಿಗೆ ಆಗ್ರಹಿಸಿದರು.
ಇದು ವಿಶಿಷ್ಟ ಪ್ರತಿಭಟನೆ
ಈ ರಸ್ತೆಯನ್ನು ದುರಸ್ಥಿ ಆಡಲು ಆಗ್ರಹಿಸಿ ಹಿಂದೆಯೂ ಪ್ರತಿಭಟನೆ ನಡೆಸಲಾಗಿತ್ತು. ಆದರೆ, ದುರಸ್ಥಿ ಮಾಡದ ಕಾರಣ ಈ ರೀತಿ ವಿನೂತನವಾಗಿ ಪ್ರತಿಭಟಿಸಿ ಗಮನ ಸೆಳೆಯಲಾಯಿತು.