ಶಿವಕುಮಾರ ಸ್ವಾಮೀಜಿಗಳಿಗೆ ಶುಭ ಕೋರಿದ ಮೋದಿ
ತುಮಕೂರು, ಏಪ್ರಿಲ್ 01 : 109 ವರ್ಷ ತುಂಬಿದ ನಡೆದಾಡುವ ದೇವರು, ತ್ರಿವಿಧ ದಾಸೋಹಿ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಗಳು ಇನ್ನೂ ನೂರೆಂಟು ಕಾಲ ಬಾಳಲಿ ಎಂಬ ಆಶಯದೊಂದಿಗೆ ಏ.1ರಂದು ಅವರ ಹುಟ್ಟುಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ.
ಶುಕ್ರವಾರ
ತುಮಕೂರಿನ
ಸಿದ್ಧಗಂಗಾ
ಮಠದಲ್ಲಿ
ಶಿವಕುಮಾರ
ಶ್ರೀಗಳ
109ನೇ
ಹುಟ್ಟು
ಹಬ್ಬದ
ಅಂಗವಾಗಿ
ಹಲವು
ಕಾರ್ಯಕ್ರಮಗಳನ್ನು
ಹಮ್ಮಿಕೊಳ್ಳಲಾಗಿದೆ.
ಮುಂಜಾನೆ
3
ಗಂಟೆಗೆ
ಶ್ರೀಗಳು
ಶಿವಪೂಜೆ
ನೆರವೇರಿಸಿದ್ದಾರೆ.
ಬೆಳಗ್ಗೆ
8.30ರ
ನಂತರ
ಸಾರ್ವಜನಿಕರಿಗೆ
ದರ್ಶನ
ನೀಡಲಿದ್ದಾರೆ.
[ಲೋಕ
ಜಂಗಮ:
ಸಿದ್ದಗಂಗಾಶ್ರೀ
ಸಾಕ್ಷ್ಯಚಿತ್ರ
ಲೋಕಾರ್ಪಣೆ]
ಶ್ರೀಗಳ ಹುಟ್ಟುಹಬ್ಬವನ್ನು ಸ್ಮರಣೀಯಗೊಳಿಸಲು ಅಭಿವಂದನಾ ಸಮಿತಿ ತಯಾರಿ ಮಾಡಿಕೊಂಡಿದೆ. ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ಶ್ರೀ ಮಠಕ್ಕೆ ಆಗಮಿಸಿದ್ದಾರೆ. [ನೂರೆಂಟು ವಸಂತ ಕಂಡ ತ್ರಿವಿಧ ದಾಸೋಹಿಗೆ ಕೋಟಿ ವಂದನೆ]
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಡಾ.ಶಿವಕುಮಾರ ಸ್ವಾಮೀಜಿಗಳಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದ್ದಾರೆ.
Warm birthday wishes to the venerable Sree Sree Shivakumar Swamiji, whose distinguished service & noble deeds have impacted so many lives.
— Narendra Modi (@narendramodi) April 1, 2016
ಮಠಕ್ಕೆ ಮುಖ್ಯಮಂತ್ರಿಗಳ ಭೇಟಿ : ಶುಕ್ರವಾರ ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು. [ಶಿವಕುಮಾರ ಶ್ರೀಗಳಿಗೆ ಪದ್ಮಭೂಷಣ ಪ್ರಶಸ್ತಿ ಪ್ರದಾನ]
ಚಿತ್ರಗಳು ಶ್ರೀಗಳನ್ನು ಭೇಟಿ ಮಾಡಿದ ಸಿದ್ದರಾಮಯ್ಯ
ಪದ್ಮಭೂಷಣ, ಪರಮಪೂಜ್ಯ ಡಾ. ಶ್ರೀಶ್ರೀ ಶಿವಕುಮಾರ ಸ್ವಾಮಿಜಿಗಳ 109ನೇ ಜನ್ಮದಿನದ ಪ್ರಯುಕ್ತ ಅವರಿಗೆ ಶುಭ ಹಾರೈಸಿ ಗೌರವ ಸಲ್ಲಿಸಿದೆ. pic.twitter.com/gq04gSbKPZ
— CM of Karnataka (@CMofKarnataka) April 1, 2016
ಸದ್ದಿಲ್ಲದೇ ಸಾಧನೆ ಮಾಡಿದರು : 01.04.1908ರಲ್ಲಿ ಜನಿಸಿದ ಡಾ.ಶಿವಕುಮಾರ ಸ್ವಾಮೀಜಿ ಅವರು, ವಿರಕ್ತಾಶ್ರಮ ದೀಕ್ಷೆ ಪಡೆದು 1930ರಲ್ಲಿ ಸಿದ್ಧಗಂಗಾ ಕ್ಷೇತ್ರ ಪ್ರವೇಶಿಸಿದರು. ಅಂದಿನಿಂದ ಸಿದ್ಧಗಂಗಾ ಮಠಕ್ಕೆ ಹೊಸ ಬೆಳಕು ಮೂಡಿಬಂತು.
ಜಂಗಮ ಮೂರ್ತಿಗಳಾದ ಶಿವಕುಮಾರ ಮಹಾಸ್ವಾಮಿಗಳು ಉದ್ಧಾನ ಶಿವಯೋಗಿಗಳ ಅಣತಿಯಂತೆ 1941ರಲ್ಲಿ ಸಿದ್ಧಗಂಗಾ ಮಠದ ಉತ್ತರಾಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡರು. ನಂತರ ಸಿದ್ಧಗಂಗಾ ಕ್ಷೇತ್ರದ ಸ್ವರೂಪ ಆಮೂಲಾಗ್ರವಾಗಿ ಬದಲಾವಣೆಯಾಯಿತು. [ಶ್ರೀಗಳ ಬಗ್ಗೆ ಓದಿ]