ತುಮಕೂರಿನಲ್ಲಿ ರು 2000 ಮುಖಬೆಲೆ 3 ಲಕ್ಷ ಹಣ ವಶ
ತುಮಕೂರು, ನವೆಂಬರ್26: ತುಮಕೂರಿನ ಶ್ರೀರಾಜ್ ಚಿತ್ರ ಮಂದಿರದ ಬಳಿ 3 ಲಕ್ಷಕ್ಕೂ ಹೆಚ್ಚಿನ ರು 2000 ಮುಖಬೆಲೆಯ ನೋಟನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಚೋಳಮಂಡಲ ಫೈನಾನ್ಸ್ ಕಂಪನಿಯ ಪದ್ಮರಾಜು ತೆಗೆದುಕೊಂಡು ಹೋಗುತ್ತಿದ್ದ ದಾಖಲೆಯಿಲ್ಲದ ಹಣವನ್ನು ತುಮಕೂರಿನ ಕ್ಯಾತ್ಸಂದ್ರ ಪೊಲೀಸರು ವಶಪಡಿಸಿಕೊಂಡಿದ್ದು. ಅಲ್ಲದೆ ಕೇಸನ್ನು ದಾಖಲಿಸಿದ್ದಾರೆ.[ನಾಲ್ವರು ಸರಕಾರಿ ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ]
ಈ ಹಣವನ್ನು ಕಮಿಷನ್ ಆಧಾರದ ಮೇಲೆ ಹಳೇ ನೋಟನ್ನು ಬದಲಾಯಿಸಿಕೊಳ್ಳಲು ತರಲಾಗಿತ್ತು ಎಂಬ ಶಂಕೆ ವ್ಯಕ್ತವಾಗಿದೆ.
ಇನ್ನು ಈಪ್ರಕರಣ ಸಂಬಂಧ ಪದ್ಮರಾಜು ಅವರನ್ನು ಕ್ಯಾತ್ಸಂದ್ರ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
Comments
English summary
Tumkuru sriraj theater near the 2000 rupee note 3 lakh is seized. The padmaraj business men is arrested.