'ಜಾರಕಿಹೊಳಿ ರಾಜೀನಾಮೆಯಿಂದ ಸರ್ಕಾರ ಅಭದ್ರವಾಗಿಲ್ಲ'
ತುಮಕೂರು, ಜ.29 : ಅಬಕಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ರಾಜೀನಾಮೆಯಿಂದ ಸರ್ಕಾರದ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲ. ಅವರಿಗೆ ಯಾವ ವಿಚಾರದಲ್ಲಿ ಅಸಮಾಧಾನವಿದೆ ಎಂಬುದು ತಿಳಿದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಗುರುವಾರ
ತುಮಕೂರಿನಲ್ಲಿ
ಮಾಧ್ಯಮಗಳೊಂದಿಗೆ
ಮಾತನಾಡಿದ
ಸಿಎಂ
ಸಿದ್ದರಾಮಯ್ಯ
ಅವರು,
ಜಾರಕಿಹೊಳಿ
ಅವರ
ರಾಜೀನಾಮೆಯಿಂದ
ರಾಜ್ಯ
ಸರ್ಕಾರ
ಅಭದ್ರವಾಗಿಲ್ಲ,
ಸಚಿವ
ಸಂಪುಟದಲ್ಲಿ
ಯಾವುದೇ
ಬಿಕ್ಕಟ್ಟಿಲ್ಲ
ಎಂದು
ಸ್ಪಷ್ಟಪಡಿಸಿದರು.
'ರಾಜೀನಾಮೆ ನೀಡಿದ ಸತೀಶ್ ಜಾರಕಿಹೊಳಿ ಅವರ ಬಳಿ ನಾನು ಕೆಂಪಯ್ಯ ಅವರನ್ನು ಸಂಧಾನ ಮಾಡಲು ಕಳಿಸಿಲ್ಲ, ಜಾರಕಿಹೊಳಿ ಅವರಿಗೆ ಯಾವ ವಿಚಾರದಲ್ಲಿ ಅಸಮಾಧಾನವಿದೆ ಎಂಬುದು ನನಗೆ ತಿಳಿದಿಲ್ಲ. ಈ ಬಗ್ಗೆ ನಾನು ಅವರ ಜೊತೆ ಸಂಜೆ ಮಾತುಕತೆ ನಡೆಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು. [ಪ್ರಮುಖ ಖಾತೆಗೆ ಬೇಡಿಕೆ ಇಟ್ಟ ಸತೀಶ್ ಜಾರಕಿಹೊಳಿ?]
ರಾಜೀನಾಮೆ ಅಂಗೀಕರಿಸದಂತೆ ಒತ್ತಡ : ಅಬಕಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ರಾಜೀನಾಮೆಯನ್ನು ಅಂಗೀಕರಿಸ ಬಾರದು ಎಂದು ರಾಜ್ಯ ಮದ್ಯ ಮಾರಾಟಗಾರರ ಒಕ್ಕೂಟ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದೆ. [ರಾಜೀನಾಮೆ : ಬುಧವಾರದ ಬೆಳವಣಿಗೆಗಳು]
ಗುರುವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಗೋವಿಂದರಾಜ ಹೆಗಡೆ ಅವರು, ಸತೀಶ್ ಜಾರಕಿಹೊಳಿ ಅವರ ರಾಜೀನಾಮೆಯನ್ನು ಅಂಗೀಕರಿಸಬಾರದು ಎಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.
ಅಬಕಾರಿ ಖಾತೆಯ ಜೊತೆಗೆ ಮತ್ತೊಂದು ಖಾತೆಯನ್ನು ನೀಡಿದರೂ ನಿಭಾಯಿಸುವ ಸಾಮರ್ಥ್ಯ ಜಾರಕಿಹೊಳಿ ಅವರಿಗೆ ಇದೆ. ಮದ್ಯ ಮಾರಾಟಗಾರರ ಅನೇಕ ಬೇಡಿಕೆಗಳನ್ನು ಅವರು ಈಡೇರಿಸಿದ್ದಾರೆ. ಆದ್ದರಿಂದ ಅವರ ರಾಜೀನಾಮೆಯನ್ನು ಅಂಗೀಕರಿಸಬಾರದು ಎಂದರು.