ಕಾಂಗ್ರೆಸ್ ನಿದ್ದೆ ಓಡಿಸಲು ಬಿಜೆಪಿಯಿಂದ 75 ಸಮಾವೇಶ
ಶಿವಮೊಗ್ಗ, ಆಗಸ್ಟ್ 7 : ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರಿಗೆ ಆತ್ಮಸ್ಥೈರ್ಯ ತುಂಬಲು ಹಾಗೂ ಕಾಂಗ್ರೆಸ್ ಸರ್ಕಾರವನ್ನು ಎಚ್ಚರಿಸಲು ಕರ್ನಾಟಕ ಬಿಜೆಪಿ 75 ತಾಲೂಕುಗಳಲ್ಲಿ ಸಮಾವೇಶಗಳಲ್ಲಿ ಹಮ್ಮಿಕೊಂಡಿದೆ. ಆ.31ರಿಂದ ಸಮಾವೇಶಗಳು ಆರಂಭವಾಗಲಿವೆ.
ಶಿವಮೊಗ್ಗದಲ್ಲಿ
ಶುಕ್ರವಾರ
ಪತ್ರಿಕಾಗೋಷ್ಠಿ
ನಡೆಸಿದ
ವಿಧಾನಪರಿಷತ್
ಪ್ರತಿಪಕ್ಷ
ನಾಯಕ
ಕೆ.ಎಸ್.ಈಶ್ವರಪ್ಪ
ಅವರು
ಈ
ಕುರಿತು
ಮಾಹಿತಿ
ನೀಡಿದರು.
ಈ
ಸಮಾವೇಶದಲ್ಲಿ
ರಾಜ್ಯದ
ಪ್ರಮುಖ
ನಾಯಕರು
ಪಾಲ್ಗೊಳ್ಳಲಿದ್ದಾರೆ
ಎಂದು
ಹೇಳಿದರು.
[ಈಶ್ವರಪ್ಪ
ಅವರು
ಹೇಳಿದ
ಕಥೆ
ಓದಿ]
'ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸರ್ಕಾರ ಮಲಗಿದ್ದು ಅದನ್ನು ಎಚ್ಚರಿಸಲು ಬಿಜೆಪಿಯಿಂದ 75 ತಾಲೂಕುಗಳಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಆ.31ರಿಂದ ಸೆಪ್ಟೆಂಬರ್ 14 ರವರೆಗೆ ಈ ಸಮಾವೇಶಗಳು ನಡೆಯಲಿವೆ. ರೈತರಲ್ಲಿ ಆತ್ಮಸ್ಥೈರ್ಯ ತುಂಬುವ ಜೊತೆಗೆ, ಸರ್ಕಾರಕ್ಕೆ ಎಚ್ಚರಿಕೆ ನೀಡಲು ಈ ಸಮಾವೇಶಗಳನ್ನು ಹಮ್ಮಿಕೊಳ್ಳಲಾಗಿದೆ' ಎಂದರು. [ರೈತ ಆತ್ಮಹತ್ಯೆ, ಲೋಕಸಭೆಯಲ್ಲಿ ಯಡಿಯೂರಪ್ಪ ಘರ್ಜನೆ]
ಬರಪೀಡಿತ ತಾಲೂಕು ಘೋಷಣೆ ಮಾಡಿ : ರಾಜ್ಯದಲ್ಲಿ ಬರ ತಾಂಡವವಾಡುತ್ತಿದೆ ಆದ್ದರಿಂದ ಸರ್ಕಾರ ಕೂಡಲೇ ಎಷ್ಟು ತಾಲೂಕುಗಳು ಬರಪೀಡಿತವಾಗಿದೆ ಎನ್ನುವುದನ್ನು ಘೋಷಣೆ ಮಾಡಬೇಕು ಎಂದು ಈಶ್ವರಪ್ಪ ಒತ್ತಾಯಿಸಿದರು.
ಬಂಧನ ಭೀತಿಯಿಂದ ರಾಜೀನಾಮೆ ಕೊಡುತ್ತಿಲ್ಲ : 'ಲೋಕಾಯುಕ್ತ ಸಂಸ್ಥೆ ಜನರ ನಂಬಿಕೆಯನ್ನು ಕಳೆದುಕೊಂಡಿದೆ ಎಂದು ಹೇಳಿದ ಈಶ್ವರಪ್ಪ ಅವರು, ರಾಜೀನಾಮೆ ಕೊಟ್ಟರೆ ಬಂಧನವಾಗುತ್ತೇನೆ ಎಂಬ ಭಯದಲ್ಲಿ ಲೋಕಾಯುಕ್ತ ನ್ಯಾ.ಭಾಸ್ಕರರಾವ್ ರಾಜೀನಾಮೆ ಕೊಡುತ್ತಿಲ್ಲ' ಎಂದು ಈಶ್ವರಪ್ಪ ಆರೋಪಿಸಿದರು.