ಭದ್ರಾ ಅಭಯಾರಣ್ಯದಲ್ಲಿ 2 ಹುಲಿಗಳಿಗೆ ವಿಷವಿಟ್ಟು ಕೊಂದರಾ?
ಶಿವಮೊಗ್ಗ, ಡಿಸೆಂಬರ್ 9: ಶಿವಮೊಗ್ಗಾದ ಭದ್ರಾ ಅಭಯಾರಣ್ಯ ವ್ಯಾಪ್ತಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಎರಡು ಹುಲಿಗಳ ಮೃತದೇಹ ಪತ್ತೆಯಾಗಿವೆ. ವಿಷ ಹಾಕಿ ಹುಲಿಗಳನ್ನು ಕೊಂದಿರುವ ಶಂಕೆ ವ್ಯಕ್ತವಾಗಿದೆ.
ಭದ್ರಾವತಿ ತಾಲೂಕಿನ ಭದ್ರಾ ಅಭಯಾರಣ್ಯ ವ್ಯಾಪ್ತಿಯಲ್ಲಿ ಹುಲಿಗಳ ಶವಗಳು ಕಂಡುಬಂದಿವೆ ಇಲ್ಲಿಗೆ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಎರಡು ಹುಲಿಗಳು ಮೃತವಾಗಲು ಸರಿಯಾದ ಕಾರಣ ತಿಳಿಸಿಲ್ಲ ಅದರೆ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯ ಸಂಸ್ಕಾರ ಮಾಡಲಾಗಿದೆ.[ಬಂಡೀಪುರದಲ್ಲಿ 'ಪ್ರಿನ್ಸ್' ಹುಲಿ ಕಂಡಾಗ ಕುಪ್ಪಳಿಸಿದ ಮನ]
ಹುಲಿಗಳು ಸಾವಿಗೀಡಾಗಿ ಹಲವು ದಿನಗಳು ಆಗಿವೆ ಆದರೆ ಅವುಗಳ ಸಾವು ಸಂಭವಿಸಲು ಪರಸ್ಪರ ಆಕ್ರಮಣ ನಡೆದಿಲ್ಲ. ಯಾರು ಗುಂಡಿಟ್ಟು ಕೊಂದಿಲ್ಲ. ಆದರೂ ದೃಢಕಾಯವನ್ನು ಹೊತ್ತಿರುವ ಹುಲಿಗಳು ಹೇಗೆ ಮೃತವಾದವು ತಿಳಿಯದಾಗಿದೆ ಮೂಲಗಳು ಹೇಳುವ ಪ್ರಕಾರ ಹುಲಿಗಳಿಗೆ ಯಾರೋ ವಿಷವನ್ನಿಟ್ಟಿದ್ದಾರೆ ಹೀಗಾಗಿ ಅವು ಸಾವಿಗೀಡಾಗಿವೆ ಎನ್ನಲಾಗಿದೆ. ಆದರೆ ಸೂಕತ ರೀತಿಯ ತನಿಖೆ ನಡೆದಾಗ ಮಾತ್ರ ಸತ್ಯ ಹೊರಬೀಳಲಿದೆ.