ಹವಾಲಾ ಹಣದ ಕುರಿತು ಮಹತ್ವದ ಸುಳಿವು ನೀಡಲಿರುವ ಶಬ್ಬೀರ್ ಶಾ
ನವದೆಹಲಿ, ಜುಲೈ 26: ಕಾಶ್ಮೀರಿ ಪ್ರತ್ಯೇಕತಾವಾದಿ ಶಬ್ಬೀರ್ ಶಾ ಬಂಧನ ಜಾರಿ ನಿರ್ದೇಶನಾಲಯಕ್ಕೆ ಹವಾಲಾ ಹಣದ ಕುರಿತಂತೆ ಮಹತ್ವದ ಸುಳಿವು ನೀಡುವ ನಿರೀಕ್ಷೆಯಿದೆ. ಅಲ್ಲದೇ, ಭಯೋತ್ಪಾದನಾ ಕೃತ್ಯಕ್ಕಾಗಿ ಕಾಶ್ಮೀರಿ ಕಣಿವೆಗೆ ಸರಬರಾಜಾಗುತ್ತಿರುವ ಹಣದ ಬಗ್ಗೆಯೂ ಮಾಹಿತಿ ದೊರೆಯುವ ಸೂಚನೆಯಿದೆ.
ಕಾಶ್ಮೀರ ಭಯೋತ್ಪಾದನೆಗೆ ದುಡ್ಡು ಕೊಡುತ್ತಿದ್ದ ಆರೋಪ: 7 ಬಂಧನ
ಅಕ್ರಮ ಆಸ್ತಿ ಗಳಿಕೆಯ ಆರೋಪದ ಮೇಲೆ ಶಾ ಅವರಿಗೆ ಜಾರಿ ನಿರ್ದೇಶನಾಲಯ ಒಟ್ಟು 8 ಬಾರಿ ಸಮನ್ಸ್ ನೀಡೀದ್ದರೂ ವಿಚಾರಣೆಗೆ ಹಾಜರಾಗದ ಕಾರಣಕ್ಕಾಗಿ, ಅವರಿಗೆ ಜಾಮೀನು ರಹಿತ ವಾರೆಂಟ್ ನೀಡಲಾಗಿತ್ತು. ಇದೀಗ ಅವರನ್ನು ಬಂಧಿಸಲಾಗಿದ್ದು, ಅವರಿಂದ ಕಾಶ್ಮೀರಿ ಪ್ರತ್ಯೇಕತಾವಾದಿಗಳ ಕುರಿತು ಮತ್ತು ಕಾಶ್ಮೀರಕ್ಕೆ ಪೂರೈಕೆಯಾಗುತ್ತಿರುವ ಹವಾಲಾ ಹಣದ ಕುರಿತು ಮಾಹಿತಿ ಕಲೆಹಅಕಲಾಗುವುದಾಗಿ ಜಾರಿ ನಿರ್ದೇಶನಾಲಯ ಹೇಳಿದೆ.
2005 ರಲ್ಲಿ ಹವಾಲಾ ಡೀಲರ್ ಒಬ್ಬನನ್ನು ದೆಹಲಿ ಪೊಲೀಸರು ಬಂಧಿಸಿದ್ದಾಗ ಆತನ ಬಳಿ ಸಿಕ್ಕ 63 ಲಕ್ಷ ರೂ. ನಗದು ಹಣವನ್ನು ನೀಡಿದ್ದು ಇದೇ ಶಾ ಎಂದು ಆತ ಹೇಳಿದ್ದ. ಆತನ ಹೇಳಿಕೆಯ ಮೇರೆಗೆ ಶಾ ವಿರುದ್ಧ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ್ದರು.