ಸೌದಿಯಲ್ಲಿ ತಮಿಳು ಮಹಿಳೆ ಕೈ ಕಟ್, ಭಾರತದಿಂದ ಪ್ರತಿಭಟನೆ
ರಿಯಾದ್, ಅ.10: ಸೌದಿ ಪ್ರಜೆಯೊಬ್ಬರ ಮನೆಯಲ್ಲಿ ಕೆಲಸಕ್ಕಿದ್ದ ತಮಿಳುನಾಡು ಮೂಲದ ಭಾರತೀಯ ಮಹಿಳೆಯ ಕೈ ಕತ್ತರಿಸಿದ್ದ ಮನೆ ಒಡತಿಯನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ. ಅದರೆ, ಈ ಪ್ರಕರಣದ ಬಗ್ಗೆ ಹೆಚ್ಚಿನ ಸ್ಪಷ್ಟನೆ ಅಗತ್ಯ, ಈ ಅಮಾನವೀಯ ಕೃತ್ಯದ ವಿರುದ್ಧ ಭಾರತ ತನ್ನ ಪ್ರತಿಭಟನೆ ಮುಂದುವರೆಸಲಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಶುಕ್ರವಾರ ಹೇಳಿದ್ದಾರೆ.
ತಮಿಳುನಾಡು
ಮೂಲದ
55ರ
ಹರೆಯದ
ಭಾರತೀಯ
ಮಹಿಳೆ
ಕಸ್ತೂರಿ
ಮುನಿರತ್ನಂ
ಅವರ
ಕೈಯನ್ನು
ಕಸೌದಿ
ಮಹಿಳೆ
ಕತ್ತರಿಸಿದ್ದರು.
ಕಸ್ತೂರಿ
ಅವರಿಗೆ
ರಿಯಾದ್
ಆಸ್ಪತ್ರೆಯಲ್ಲಿ
ಚಿಕಿತ್ಸೆ
ಕೊಡಿಸಲಾಗುತ್ತಿದೆ.
ಕಸ್ತೂರಿ
ಅವರು
ಆಸ್ಪತ್ರೆಯಲ್ಲಿ
ಮಲಗಿರುವ
ವಿಡಿಯೊ
ದೃಶ್ಯ
ಕಳೆದ
ಎರಡು
ದಿನಗಳಿಂದ
ಸಾಮಾಜಿಕ
ಜಾಲ
ತಾಣಗಳಲ್ಲಿ
ಹರಿದಾಡಿ
ಭಾರಿ
ಕೋಲಾಹಲ
ಉಂಟಾಗಿತು.
ಕಸ್ತೂರಿಯವರನ್ನು
ಭಾರತಕ್ಕೆ
ಕರೆತರಲು
ರಾಯಭಾರ
ಕಚೇರಿ
ಮೇಲೆ
ಒತ್ತಡ
ಹೇರಲಾಗಿತ್ತು.[ರೇಪ್
ಆರೋಪಿತ
ರಾಯಭಾರಿ
ಭಾರತದಿಂದ
ಪರಾರಿ?]
'ಸೌದಿ
ಪ್ರಜೆಯೊಬ್ಬರ
ನಿವಾಸದಲ್ಲಿ
ಕಸ್ತೂರಿ
ಮನೆಗೆಲಸ
ಮಾಡಿಕೊಂಡಿದ್ದರು.
ತಿಂಗಳಿಗೆ
ಸುಮಾರು
180
ಡಾಲರ್
ನಷ್ಟು
ಸಂಬಳ
ನೀಡುವ
ಭರವಸೆ
ಸಿಕ್ಕಿತ್ತು.
ಆದರೆ,
ಕಸ್ತೂರಿಗೆ
ಸರಿಯಾದ
ಊಟ,
ನೀಡುತ್ತಿರಲಿಲ್ಲ,
ನಿರಂತರವಾಗಿ
ಕಿರುಕುಳ
ನೀಡಲಾಗುತ್ತಿತ್ತು.
ದೌರ್ಜನ್ಯದಿಂದ
ಪಾರಾಗಲು
ಕಸ್ತೂರಿ
ಯತ್ನಿಸಿದ್ದರು.
ಈ
ಬಗ್ಗೆ
ಅಧಿಕಾರಿಗಳಿಗೆ
ದೂರನ್ನೂ
ಸಲ್ಲಿಸಿದ್ದರು.
ಇದರಿಂದ
ಆಕ್ರೋಶಗೊಂಡಿದ್ದ
ಸೌದಿ
ಮಹಿಳೆ
ಮನೆಗೆಲಸದಾಕೆಯ
ಕೈಯನ್ನೇ
ಕತ್ತರಿಸಿದ್ದಾರೆ'
ಎಂದು
ಕಸ್ತೂರಿ
ಅವರ
ಸೋದರಿ
ವಿಜಯಕುಮಾರಿ
ಹೇಳಿದ್ದಾರೆ.
Chopping
of
hand
of
Indian
lady
-
We
are
very
much
disturbed
over
the
brutal
manner
in
which
Indian
lady
has
been
treated
in
Saudi
Arabia.
—
Sushma
Swaraj
(@SushmaSwaraj)
October
9,
2015
'ಸೌದಿ ಅರೇಬಿಯದಲ್ಲಿ ಭಾರತೀಯ ಮೂಲದ ಮನೆಗೆಲಸದಾಕೆಯ ಕೈಕತ್ತರಿಸಿರುವುದು ಅತ್ಯಂತ ಅಮಾನವೀಯ ಕೃತ್ಯ, ಈ ಬಗ್ಗೆ ಈಗಾಗಲೇ ಸೌದಿ ಅರೇಬಿಯಾ ರಾಯಭಾರಿ ಕಚೇರಿ ಜೊತೆ ಮಾತುಕತೆ ನಡೆಸಲಾಗಿದೆ.ಭಾರತೀಯ ರಾಯಭಾರಿ ಅಧಿಕಾರಿಗಳು ಸಂತ್ರಸ್ತ ಮಹಿಳೆಯ ಜೊತೆ ಸತತ ಸಂಪರ್ಕದಲ್ಲಿದ್ದು, ಸ್ವದೇಶಕ್ಕೆ ಕರೆತರುವ ವ್ಯವಸ್ಥೆ ಮಾಡಲಾಗುತ್ತಿದೆ' ಎಂದು ವಿದೇಶಾಂಗ ಕಚೇರಿ ವಕ್ತಾರ ವಿಕಾಸ್ ಸ್ವರೂಪ್ ಪ್ರತಿಕ್ರಿಯಿಸಿದ್ದಾರೆ.
ಇತ್ತೀಚೆಗೆ ನೇಪಾಳಿ ಮಹಿಳೆಯ ಮೇಲೆ ಅತ್ಯಾಚಾರ ಹೊತ್ತ ಭಾರತದಲ್ಲಿರುವ ಸೌದಿ ಅರೇಬಿಯಾ ರಾಯಭಾರಿ ಪರಾರಿಯಾಗಿರುವ ಘಟನೆ ನಡೆದಿದ್ದನ್ನು ಇಲ್ಲಿ ಸ್ಮರಿಸಬಹುದು.