ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಜಾರಿ ನಿರ್ದೇಶನಾಲಯದಿಂದ ನಳಿನಿ ಚಿದಂಬರಂಗೆ ಸಮನ್ಸ್
ನವದೆಹಲಿ, ಆಗಸ್ಟ್ 24: ಬಹುಕೋಟಿ ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಿಂದ ನಳಿನಿ ಚಿದಂಬರಂ ಅವರಿಗೆ ಸಮನ್ಸ್ ಜಾರಿ ಮಾಡಲಾಗಿದೆ. ಕೇಂದ್ರದ ಮಾಜಿ ವಿತ್ತ ಸಚಿವ ಪಿ ಚಿದಂಬರಂ ಅವರ ಪತ್ನಿ ನಳಿನಿ ಅವರನ್ನು ವಿಚಾರಣೆಗೊಳಪಡಿಸುವ ಸಾಧ್ಯತೆಯಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಳಿನಿ ಅವರ ವಿಚಾರಣೆ ನಡೆಸಲು ಸಮನ್ಸ್ ನೀಡಲಾಗಿದೆ. ಇದಕ್ಕೂ ಮುನ್ನ ಸಿಬಿಐ ತಂಡ ನಳಿನಿ ಅವರ ವಿರುದ್ಧ ಚಾರ್ಜ್ ಶೀಟ್ ಹಾಕಿದ್ದಾರೆ. [ಕೊಚ್ಚಿ ಸೆಕ್ಸ್ ಹಗರಣ ಕೊಚ್ಚೆಯಲ್ಲಿ ಚಿದಂಬರಂ?]
ಆದರೆ, ಹಗರಣದಲ್ಲಿ ನಳಿನಿ ಅವರ ಪಾತ್ರದ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ. ಆರೋಪಿ ಅಥವಾ ಸಾಕ್ಷಿಯಾಗಿ ಹೆಸರಿಸಿಲ್ಲ, ಮಾಹಿತಿದಾರರಾಗಿ ಬಳಕೆಯಾಗಿರುವ ಸಾಧ್ಯತೆಯಿದೆ.[ಚಿಟ್ ಫಂಡ್ ಹಗರಣ : ನಟ ಮಿಥುನ್ ಹಣ ವಾಪಸ್ ಮಾಡಿದ್ದೇಕೆ?]
2013ರ
ಶಾರದಾ
ಚಿಟ್
ಫಂಡ್
ಹಗರಣ
ಪಶ್ಚಿಮ
ಬಂಗಾಲ
ರಾಜ್ಯದಿಂದ
ದೇಶದ
ವಿವಿಧೆಡೆ
ಹಬ್ಬಿದ್ದು,
ಅನೇಕ
ಗಣ್ಯರಿಗೆ
ಹಣ
ಸಂದಾಯವಾಗಿದೆ.
ಸುಮಾರು 20,000 ಕೋಟಿ ರು ಮೌಲ್ಯ ಹಗರಣದ ರುವಾರಿಗಳಾದ ಪಶ್ಚಿಮ ಬಂಗಾಳದ ಬ್ಲೇಡ್ ಕಂಪನಿ ಸ್ಥಾಪಕರು ಸದ್ಯ ಜೈಲಿನಲ್ಲಿದ್ದಾರೆ. ತನಿಖೆ ಮುಂದುವರೆದಿದೆ.
English summary
In a major development, Enforcement Directorate has issued summons to former finance minister P Chidambaram's wife Nalini Chidambaram in connection with Saradha scam.