ಆರ್ಮಿ ಕ್ಯಾಂಟೀನ್ ನಿಂದ ಪತಂಜಲಿ ನೆಲ್ಲಿ ಜ್ಯೂಸ್ ಗೆ ಕೊಕ್
ಬಾಬಾ ರಾಮ್ ದೇವ್ ಅವರು ಪ್ರಚಾರ ಮಾಡುತ್ತಿರುವ ಪತಂಜಲಿ ಆಯುರ್ವೇದ ಉತ್ಪನ್ನಗಳ ಪೈಕಿ ನೆಲ್ಲಿ ಜ್ಯೂಸ್ ಮಾರಾಟ ಮಾಡುವುದನ್ನು ಆರ್ಮಿ ಕ್ಯಾಂಟೀನ್ ನಲ್ಲಿ ನಿಲ್ಲಿಸಲಾಗಿದೆ. ಅದಕ್ಕೆ ಕಾರಣ ತಿಳಿಯಲು ಈ ವರದಿ ಓದಿ
ನವದೆಹಲಿ, ಏಪ್ರಿಲ್ 24: ಭಾರತೀಯ ಸೇನೆಗೆ ಸರಬರಾಜು ಮಾಡುತ್ತಿರುವ ದ ಕ್ಯಾಂಟೀನ್ ಸ್ಟೋರ್ಸ್ ಪತಂಜಲಿ ಆಯುರ್ವೇದದವರ ನೆಲ್ಲಿಕಾಯಿ ಜ್ಯೂಸ್ ಮಾರಾಟವನ್ನು ನಿಲ್ಲಿಸಿದೆ. ಪ್ರಯೋಗಾಲಯದ ಪರೀಕ್ಷೆಯಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಆದರೆ, ಯೋಗ ಗುರು ಬಾಬಾ ರಾಮದೇವ್ ಪ್ರಚಾರ ಮಾಡುತ್ತಿರುವ ಗ್ರಾಹಕ ವಸ್ತು ಮಾರಾಟ ಕಂಪೆನಿಯ ಹೇಳಿಕೆ ಪ್ರಕಾರ, ನೆಲ್ಲಿಕಾಯಿ ಜ್ಯೂಸ್ ಮಾರುಕಟ್ಟೆಯಲ್ಲಿರುವ ಉಳಿದ ಉತ್ಪನ್ನಗಳಂತಲ್ಲ. ಮನುಷ್ಯರ ಸೇವನೆಗೆ ಇದು ಯೋಗ್ಯವಾಗಿದೆ. ಇದು ವೈದ್ಯಕೀಯ ಉತ್ಪನ್ನ ಎಂದು ಹೇಳಲಾಗಿದೆ.[ಚಂಡಿಘಡದ ಪೌಷ್ಠಿಕ್ ಹೊಟೇಲ್ ಬಾಬಾ ರಾಮ್ ದೇವ್ ಗೆ ಸೇರಿದ್ದಾ?!]
ರಕ್ಷಣಾ ಸಚಿವಾಲಯದ ಮೂಲಗಳ ಪ್ರಕಾರ, ಪ್ರಯೋಗಾಲಯ ಪರೀಕ್ಷೆಯಲ್ಲಿ ವಿಫಲವಾದ ನಂತರ ಕಂಪೆನಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಪಶ್ಚಿಮ ಬಂಗಾಲದ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯದಲ್ಲಿ ನೆಲ್ಲಿಕಾಯಿ ಜ್ಯೂಸ್ ನ ಪರೀಕ್ಷೆ ನಡೆಸಲಾಗಿತ್ತು.
ನಿಯಮಗಳ ಪ್ರಕಾರ ಆ ನಿರ್ದಿಷ್ಟ ಬ್ಯಾಚ್ ನ ಮಾರಾಟವನ್ನು ನಿಲ್ಲಿಸಲಾಗಿದೆ. ಮತ್ತು ಈ ರೀತಿ ತಪ್ಪಾಗಲು ಕಾರಣಗಳ ಬಗ್ಗೆ ಪರಿಶೀಲನೆ ನಡೆಸಿ, ಆ ಬಗ್ಗೆ ವಿವರಣೆ ನೀಡುವಂತೆ ಶೋಕಾಸ್ ನೋಟಿಸ್ ನೀಡಲಾಗಿದೆ. ಉತ್ತರ ಬಂದ ನಂತರ ಮುಂದಿನ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಲಾಗಿದೆ.[ಚೀನಾ, ಮ್ಯಾನ್ಮಾರ್, ಬಾಂಗ್ಲಾಕ್ಕೆ ರಾಮದೇವ್ ಪತಂಜಲಿ ಉತ್ಪನ್ನ!]
ಆಮ್ಲಾ ಜ್ಯೂಸ್ ನ ಇಂಡೆಕ್ಸ್ ಸಂಖ್ಯೆ 85417, ಬ್ಯಾಚ್ ಸಂಖ್ಯೆ GH1502 ಅನ್ನು ಕೋಲ್ಕತ್ತಾದ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಪತಂಜಲಿ ಆಯುರ್ವೇದದವರು ಈ ಬಗ್ಗೆ ಮಾತನಾಡಿದ್ದು, ನೆಲ್ಲಿಕಾಯಿ ಜ್ಯೂಸ್ ಆಯುರ್ವೇದ ಔಷಧ. ಆಯುಷ್ ಅಚಿವಾಲಯದ ನಿಯಮಾವಳಿ ಪ್ರಕಾರವೇ ಪರೀಕ್ಷೆ ನಡೆಸಲಾಗಿದೆ. ಎಫ್ಎಸ್ಎಸ್ಎಐ ನಿಯಮಗಳು ಈ ಜ್ಯೂಸ್ ಗೆ ಅನ್ವಯ ಆಗಲ್ಲ ಎಂದಿದ್ದಾರೆ.