ಚುನಾವಣಾ ವೆಚ್ಚ ಹೆಚ್ಚಿಸಲು ಪಕ್ಷಗಳ ಮನವಿ
ನವದೆಹಲಿ, ಫೆ.4 : ಲೋಕಸಭೆ ಚುನಾವಣೆಗೆ ಸಿದ್ಧತೆ ಆರಂಭಿಸಿರುವ ಕೇಂದ್ರ ಚುನಾವಣಾ ಆಯೋಗ ಮಂಗಳವಾರ ಸರ್ವ ಪಕ್ಷಗಳ ಸಭೆ ನಡೆಸಿತು. ಸಭೆಯಲ್ಲಿ ಚುನಾವಣಾ ವೆಚ್ಚದ ಮಿತಿ ನಿರ್ಭಂದವನ್ನು ಹೆಚ್ಚಿಸಬೇಕೆಂದು ವಿವಿಧ ಪಕ್ಷಗಳು ಮುಖ್ಯ ಚುನಾವಣಾಧಿಕಾರಿ ವಿ.ಎಸ್.ಸಂಪತ್ ಅವರಿಗೆ ಮನವಿ ಸಲ್ಲಿಸಿದವು.
ನವದೆಹಲಿಯಲ್ಲಿ
ಮಂಗಳವಾರ
ಮುಖ್ಯ
ಚುನಾವಣಾ
ಆಯುಕ್ತ
ವಿ.ಎಸ್.ಸಂಪತ್
ಅಧ್ಯಕ್ಷತೆಯಲ್ಲಿ
ಸರ್ವಪಕ್ಷಗಳ
ಸಭೆ
ನಡೆಯಿತು.
ಸಭೆಯಲ್ಲಿ
ಕಾಂಗ್ರೆಸ್,
ಬಿಜೆಪಿ
ಸೇರಿದಂತೆ
ಐದು
ರಾಷ್ಟ್ರೀಯ
ಪಕ್ಷಗಳು,
47
ಪ್ರಾದೇಶಿಕ
ಪಕ್ಷದ
ಪ್ರತಿನಿಧಿಗಳು
ಭಾಗವಹಿಸಿದ್ದರು.
[ಮತದಾರರ
ಪಟ್ಟಿಗೆ
ಹೆಸರು
ಸೇರಿಸಿ]
ಲೋಕಸಭೆ ಚುನಾವಣೆ ವೇಳಾಪಟ್ಟಿ ಪ್ರಕಟಿಸುವ ಕುರಿತು ಎಲ್ಲಾ ಪಕ್ಷಗಳಿಂದ ಮುಖ್ಯ ಚುನಾವಣಾಧಿಕಾರಿಗಳು ಅಭಿಪ್ರಾಯ ಸಂಗ್ರಹಿಸಿದರು. ಈ ಸಂದರ್ಭದಲ್ಲಿ ಚುನಾವಣಾ ವೆಚ್ಚದ ಮಿತಿಯನ್ನು ಹೆಚ್ಚಿಸುವಂತೆ ವಿವಿಧ ಪಕ್ಷಗಳು ವಿ.ಎಸ್.ಸಂಪರ್ ಅವರಿಗೆ ಮನವಿ ಮಾಡಿದವು.
ಫೆಬ್ರವರಿ ಅಂತ್ಯ ಅಥವಾ ಮಾರ್ಚ್ ಮೊದಲ ವಾರದಲ್ಲಿ ಚುನಾವಣಾ ವೇಳಾಪಟ್ಟಿ ಪ್ರಕಟಿಸಲು ಕೇಂದ್ರ ಚುನಾವಣಾ ಆಯೋಗ ಈಗಾಗಲೇ ತಯಾರಿ ಆರಂಭಿಸಿದೆ. ಐದು ಅಥವಾ ಏಳು ಹಂತಗಳಲ್ಲಿ ಚುನಾವಣೆ ನಡೆಸಲು ತೀರ್ಮಾನಿಸಿದ್ದು, ಪಕ್ಷಗಳ ಅಭಿಪ್ರಾಯಗಳನ್ನು ಸಂಗ್ರಹಿಸಿದೆ.
ಲೋಕಸಭೆ ಚುಣಾವಣೆ ಜೊತೆಗೆ ಆಂಧ್ರ ಪ್ರದೇಶ, ಒರಿಸ್ಸಾ ಮತ್ತು ಸಿಕ್ಕಿಂಗಳಲ್ಲಿ ವಿಧಾನಸಭಾ ಕ್ಷೇತ್ರದ ಚುನಾವಣೆಗಳೂ ನಡೆಯುವುದರಿಂದ ಆಯಾ ರಾಜ್ಯಗಳ ಸ್ಥಳೀಯ ಪಕ್ಷಗಳ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಎಲ್ಲಾ ಪಕ್ಷದ ಮನವಿಗಳನ್ನು ಆಲಿಸಿದ ಚುನಾವಣಾ ಆಯುಕ್ತರು ಪಕ್ಷಗಳ ಮನವಿಯನ್ನು ಪರಿಶೀಲಿಸುವ ಭರವಸೆ ನೀಡಿದ್ದಾರೆ.
ಮತದಾರರ ಪಟ್ಟಿ ಪರಿಷ್ಕರಣೆ ಮಾಡುವುದು, ಹೊಸ ಮತದಾರರ ಸೇರ್ಪಡೆ, ಚುನಾವಣಾ ನೀತಿ ಸಂಹಿತೆ ಮಾರ್ಪಾಡುಗಳು, ಪ್ರಚಾರ ಸಂದರ್ಭದ ನೀತಿ-ನಿಯಮಗಳು ಸೇರಿದಂತೆ ಆಯಾ ರಾಜ್ಯದ ಸ್ಥಿತಿಗತಿಗಳ ಬಗ್ಗೆಯೂ ಪಕ್ಷಗಳು ತಮ್ಮದೇ ಆದ ಮನವಿಗಳನ್ನೂ ಸಲ್ಲಿಸಿದವು.