ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಷ್ಟ್ರಪತಿ ಚುನಾವಣೆ: ವಿಪಕ್ಷಗಳತ್ತಲೂ ಬಲೆಬೀಸುತ್ತಿದೆಯಾ ಬಿಜೆಪಿ?

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಜೂನ್ 15: ರಾಷ್ಟ್ರಪತಿ ಚುನಾವಣೆಗೆ ಸಂಬಂಧಿಸಿದಂತೆ ಆಡಲಿತ ಮತ್ತು ವಿಪಕ್ಷಗಳಲ್ಲಿ ಬಿರುಸಿನ ಚಟುವಟಿಕೆ ಆರಂಭವಾಗಿದ್ದು, ಇದೇ ಜೂನ್ 16 ರಂದು ಬಿಜೆಪಿ ಮುಖಂಡರಾದ ರಾಜನಾಥ್ ಸಿಂಗ್ ಮತ್ತು ವೆಂಕಯ್ಯ ನಾಯ್ಡು ಸೋನಿಯಾ ಗಾಂಧಿಯವರನ್ನು ಭೇಟಿಯಾಗುವ ಸಾಧ್ಯತೆ ಇದೆ.

ಜುಲೈ 17ಕ್ಕೆ ರಾಷ್ಟ್ರಪತಿ ಚುನಾವಣೆ, 20 ರಂದು ಮತ ಎಣಿಕೆಜುಲೈ 17ಕ್ಕೆ ರಾಷ್ಟ್ರಪತಿ ಚುನಾವಣೆ, 20 ರಂದು ಮತ ಎಣಿಕೆ

ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಕಾಂಗ್ರೆಸ್ಸನ್ನು ಅವರು ಮನವಿ ಮಾಡಿಕೊಳ್ಳಲಿದ್ದಾರೆ ಎಂದು ಬಲ್ಲಮೂಲಗಳು ತಿಳಿಸಿವೆ. ಈ ಬಗ್ಗೆ ತಿಳಿಯುತ್ತಿದ್ದಂತೆಯೇ ಎಡಪಕ್ಷಗಳು ಚುರುಕಾಗಿವೆ. ಬಿಜೆಪಿ ತನ್ನ ಸ್ವಾರ್ಥಕ್ಕಾಗಿ ವಿಪಕ್ಷಗಳತ್ತ ಬಲೆ ಬೀಸುತ್ತಿದೆ, ಹುಷಾರಾಗಿ ಎಂದು ಕಾಂಗ್ರೆಸ್ ಅನ್ನು ಅದು ಎಚ್ಚರಿಸಿದೆ.

Next President of India: How BJP set a trap for the opposition party

ಆಡಳಿತ ಪಕ್ಷ ಬಿಜೆಪಿ, ಬುಡಕಟ್ತು ಜನಾಂಗದ ಪ್ರತಿನಿಧಿಯಾದ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಸೂಚಿಸಲಿದೆ ಎಂದು ವಿಪಕ್ಷಗಳೂ ನಂಬಿವೆ. ಹಲವು ವಿಪಕ್ಷಗಳು ಬುಡಕಟ್ಟು ಜನಾಂಗದ ಅಭ್ಯರ್ಥಿಗೆ ಮತ ಹಾಕದೇ ಇರುವುದಕ್ಕೆ ಕಷ್ಟ. ಆದ್ದರಿಂದಲೇ ಬಿಜೆಪಿ ಮುರ್ಮು ಅವರನ್ನೇ ಅಭ್ಯರ್ಥಿಯನ್ನಾಗಿ ಘೋಷಿಸುವ ಸಾಧ್ಯತೆ ಇದೆ.
ಈ ಬೆಳವಣಿಗೆ ಎಡಪಕ್ಷಗಳಿಗೆ ತೀವ್ರ ಹಿನ್ನಡೆ ಉಂಟುಮಾಡಬಹುದು.

ಜುಲೈ 17 ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದ್ದು, ಜು.20 ರಂದು ಫಲಿತಾಂಶ ಹೊರಬೀಳಲಿದೆ.

English summary
On Friday, Union Ministers and senior BJP leaders Rajnath SIngh and Venkaiah Naidu will meet with Congress president Sonia Gandhi to discuss a candidate to be elected as the next President of India. The Left parties which were part of the opposition meet on Friday however warned the Congress that the BJP is trying to set a trap. Left parties felt that the meeting with the BJP should not take place as it was a trap being set by the ruling party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X