ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ದೇವರ ಆಜ್ಞೆ ಅಂತ ಮಗಳ ಕಿವಿ ಕತ್ತರಿಸಿದ ಭೂಪ
ದೆಹಲಿ, ಜೂನ್ 23: ದೇವರ ಆಜ್ಞೆ ಎಂದು ಹೇಳಿ ಕಿರಾತಕನೊಬ್ಬ ಮಗಳ ಕಿವಿಯನ್ನೇ ಕತ್ತರಿಸಿದ್ದಾನೆ. ದೆಹಲಿಯ ಜಿಟಿಬಿ ನಗರದಲ್ಲಿ ಈ ಘಟನೆ ನಡೆದಿದೆ. ಅತೀಂದ್ರಿಯ ಶಕ್ತಿಯೊಂದು ನನಗೆ ಕಿವಿ ಕತ್ತರಿಸಲು ಹೇಳಿತು ಎಂದು ಆತ ಹೇಳಿದ್ದಾನೆ.
ಇದೀಗ ತಂದೆಯನ್ನು ಬಂಧಿಸಲಾಗಿದ್ದು ಆತನ ಮೇಲೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಕಿವಿ ಕತ್ತರಿಸಿಕೊಂಡ ಮಗುವನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
ಈ ಕುರಿತು ಹೇಳಿಕೆ ನೀಡಿರುವ ಡಿಸಿಪಿ ಶಹದರಾ ನೂಪುರ್ ಪ್ರಸಾದ್, "ಈ ಸಂಬಂಧ ಪ್ರಕರಣವನ್ನು ದಾಖಲಿಸಲಾಗಿದೆ. ಕಿವಿ ಕತ್ತರಿಸಿದ ತಂದೆಯನ್ನು ಬಂಧಿಸಿ ಕೇಸು ದಾಖಲಿಸಲಾಗಿದೆ. ಮಗುವನ್ನು ಏಮ್ಸ್ ಆಸ್ಪತ್ರೆಗೆ ಸೇರಿಸಲಾಗಿದೆ," ಎಂದು ಹೇಳಿದ್ದಾರೆ.
Comments
English summary
Man in Delhi's GTB Nagar arrested for chopped off daughter’s ears after 'hallucinations', claimed that a supernatural power asked him to do so. A case has been registered and child has been referred to AIIMS.
Story first published: Friday, June 23, 2017, 9:39 [IST]