ಕಾಶ್ಮೀರಿ ನಿರಾಶ್ರಿತರ ಸಮಸ್ಯೆ ಬಗೆಹರಿಸ್ತೇವೆ : ಮೋದಿ
ಕಿಸ್ತ್ವಾರ್, ನ. 22: ಭಾರತೀಯ ಜನತಾ ಪಕ್ಷ ಜಮ್ಮು ಕಾಶ್ಮೀರ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದರೆ ರಾಜ್ಯ ನಿರಾಶ್ರಿತರ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಲಾಗುವುದು...
ಇದು ಪ್ರಧಾನಿ ನರೇಂದ್ರ ಮೋದಿ ಅವರು ಕಾಶ್ಮೀರ ಜನತೆಗೆ ನೀಡಿದ ಭರವಸೆ. ಜಮ್ಮು ಕಾಶ್ಮೀರ ಚುನಾವಣೆ ನಿಮಿತ್ತ ಕಿಸ್ತ್ವಾರ್ ನಗರದಲ್ಲಿ ಶನಿವಾರ ನಡೆಸಿದ ಚುನಾವಣೆ ಪ್ರಚಾರ ಸಭೆಯಲ್ಲಿ ಅವರು ಈ ಭರವಸೆ ನೀಡಿದರು. 50 ವರ್ಷಗಳಿಂದಲೂ ಕಾಶ್ಮೀರವನ್ನು ಕಾಡುತ್ತಿರುವ ನಿರಾಶ್ರಿತರ ಸಮಸ್ಯೆಯನ್ನು ನಾನು ಬಗೆಹರಿಸುತ್ತೇನೆಂದು ಹೇಳಿದರು.
ತಮ್ಮ ಅಭಿವೃದ್ಧಿ ಮಂತ್ರವಾದ "ಸಬ್ಕಾ ಸಾಥ್, ಸಬ್ಕಾ ವಿಕಾಸ್" ಪುನರುಚ್ಛರಿಸಿದ ನರೇಂದ್ರ ಮೋದಿ, ಜಮ್ಮು ಕಾಶ್ಮೀರ ರಾಜ್ಯದಲ್ಲಿ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿ ಆಗಬೇಕಾಗಿದೆ ಎಂದು ವಿವರಿಸಿದರು. [ಕಾಶ್ಮೀರದಲ್ಲಿ ಕೇಸರಿ ಕ್ರಾಂತಿಗೆ ಕರೆ]
ಪಾಠ ಕಲಿಸಿ: ಅಲ್ಲದೆ, ರಾಜ್ಯದ ಅಭಿವೃದ್ಧಿಗಾಗಿ ನೀಡಿದ್ದ ಅನುದಾನವನ್ನು ದುರುಪಯೋಗಪಡಿಸಿಕೊಂಡ ಆರೋಪ ಹೊತ್ತಿರುವ ನ್ಯಾಶನಲ್ ಕಾನ್ಫರೆನ್ಸ್ ಹಾಗೂ ಪಿಡಿಪಿ ಪಕ್ಷಗಳಿಗೆ ಬುದ್ಧಿ ಕಲಿಸಿ ಎಂದರು.
ಗುಜರಾತ್ನಲ್ಲಿ ನೀರು ಸಾಗಿಸಲು ಅಳವಡಿಸಿರುವ ಪೈಪ್ಲೈನ್ನಲ್ಲಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಸಂಸಾರ ಸಮೇತ ಕಾರ್ನಲ್ಲಿ ಕುಳಿತು ಸಂಚರಿಸಬಹುದೆಂದು ಟಾಂಗ್ ನೀಡಿದರು.
ನರೇಂದ್ರ ಮೋದಿ ಅವರು 'ಮಿಶನ್ 44 ಪ್ಲಸ್' ಸಾಧಿಸಲು ಕಾಶ್ಮೀರದಲ್ಲಿ ಕನಿಷ್ಠ 7 ಪ್ರಚಾರ ಸಭೆ ನಡೆಸುವರು ಎಂದು ಬಿಜೆಪಿ ಮೂಲಗಳು ತಿಳಿಸಿವೆ.