ಹೆದ್ದಾರಿಗಳಿಗೆ ಅನುದಾನ, ಸಂಸದರೊಂದಿಗೆ ಸಭೆ
ನವದೆಹಲಿ, ಮಾ.10 : ಕರ್ನಾಟಕದ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಪಡೆಯಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ರಾಜ್ಯದ ಸಂಸದರಲ್ಲಿ ಮನವಿ ಮಾಡಿರುವ ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಅವರು ಶಿರಾಢಿ ಘಾಟ್ ರಸ್ತೆ ಕಾಮಗಾರಿ 6 ತಿಂಗಳಿನಲ್ಲಿ ಮುಕ್ತಾಯಗೊಳ್ಳಲಿದೆ ಎಂದು ಹೇಳಿದ್ದಾರೆ.
ದೆಹಲಿಯ
ಕರ್ನಾಟಕ
ಭವನದಲ್ಲಿ
ಮಂಗಳವಾರ
ರಾಜ್ಯದ
ಸಂಸದರ
ಜೊತೆ
ಉಪಹಾರ
ಕೂಟ
ನಡೆಸಿದ
ಸಚಿವ
ಮಹದೇವಪ್ಪ
ಅವರು,
ಕರ್ನಾಟಕದಲ್ಲಿ
10
ರಾಜ್ಯ
ಹೆದ್ದಾರಿಗಳನ್ನು
ಅಭಿವೃದ್ಧಿಪಡಿಸಲಾಗುತ್ತದೆ.
ಈ
ಯೋಜನೆಗಳಿಗೆ
ಬೇಗ
ಅನುದಾನ
ಮಂಜೂರಾಗುವಂತೆ
ಸರ್ಕಾರದ
ಮೇಲೆ
ಒತ್ತಡ
ಹೇರಬೇಕೆಂದು
ಸಂಸದರಿಗೆ
ಮನವಿ
ಮಾಡಿದರು.
[ಬೆಂಗಳೂರು-ಮೈಸೂರು
ಆರು
ಪಥದ
ರಸ್ತೆ
ವಿಳಂಬ?]
ಗಡ್ಕರಿ ಭೇಟಿ : ಮಂಗಳವಾರ ಮಧ್ಯಾಹ್ನ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದ ರಾಜ್ಯದ ರಸ್ತೆಯ ಅಭಿವೃದ್ಧಿಗಾಗಿ ಹೆಚ್ಚಿನ ನೆರವು ನೀಡುವಂತೆ ಮನವಿ ಮಾಡಲಾಗುತ್ತದೆ ಎಂದು ಸಚಿವರು ತಿಳಿಸಿದರು. [ಶಿರಾಡಿ ರಸ್ತೆ ರಿಪೇರಿಗೆ ಇನ್ನೆಷ್ಟು ದಿನ ಬೇಕು?]
ಶಿರಾಡಿ ಘಾಟ್ 6 ತಿಂಗಳಲ್ಲಿ ಪೂರ್ಣ : ಬೆಂಗಳೂರು-ಮಂಗಳೂರು ನಡುವೆ ಸಂಪರ್ಕ ಕಲ್ಪಿಸುವ ಶಿರಾಡಿ ಘಾಟ್ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, 6 ತಿಂಗಳಿನಲ್ಲಿ ಈ ಕಾಮಗಾರಿಯನ್ನು ಪೂರ್ಣಗೊಳಿಸಲಾಗುತ್ತದೆ ಎಂದು ಸಚಿವರು ಹೇಳಿದರು.
ಸಭೆಯಲ್ಲಿ ಕೇಂದ್ರ ಸಚಿವ ಅನಂತ್ ಕುಮಾರ್, ಜೆ.ಎಂ. ಸಿದ್ದೇಶ್ವರ್, ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಶಿವಮೊಗ್ಗ ಸಂಸದ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಹಲವು ಸಂಸದರು ಪಾಲ್ಗೊಂಡಿದ್ದರು.