ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಂಡ ಕಟ್ಟಲು ನಕಾರ, ಜೈಲಿಗೆ ಹೋಗಲು ಸಿದ್ಧ: ಶ್ರೀಶ್ರೀ ರವಿಶಂಕರ್

By Mahesh
|
Google Oneindia Kannada News

ನವದೆಹಲಿ, ಮಾರ್ಚ್ 10: ರವಿಶಂಕರ್ ಗುರೂಜಿ ಅವರ ಆರ್ಟ್ ಆಫ್ ಲಿವಿಂಗ್ ಆಯೋಜನೆಯ ವಿಶ್ವ ಸಾಂಸ್ಕೃತಿಕ ಉತ್ಸವಕ್ಕೆ ರಾಷ್ಟ್ರೀಯ ಹಸಿರು ಪ್ರಾಧಿಕಾರದಿಂದ ಬುಧವಾರ ಷರತ್ತುಬದ್ಧ ಒಪ್ಪಿಗೆ ಸಿಕ್ಕಿದೆ. ಆದರೆ, ಪರಿಸರ ಹಾನಿಯಾಗಿರುವುದಕ್ಕೆ ಪರಿಹಾರ ರೂಪವಾಗಿ 5 ಕೋಟಿ ರು ದಂಡ ಕಟ್ಟಲು ಎಒಎಲ್ ಗೆ ಸೂಚಿಸಲಾಗಿದ್ದು, ದಂಡ ಕಟ್ಟಲು ರವಿಶಂಕರ್ ಗುರೂಜಿ ನಿರಾಕರಿಸಿ, ಜೈಲಿಗೆ ಹೋಗಲು ಸಿದ್ಧ ಎಂದಿದ್ದಾರೆ.

'ಮಾರ್ಚ್ 11ರಂದು ಯಮುನಾ ನದಿ ತೀರದಲ್ಲೇ ನಿಗದಿಯಂತೆ ಮೂರು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಈ ನಡುವೆ ಆರ್ಟ್ ಆಫ್ ಲಿವಿಂಗ್ ಮೇಲೆ ರಾಷ್ಟೀಯ ಹಸಿರು ಪ್ರಾಧಿಕಾರ (ಎನ್ ಜಿಟಿ) 5 ಕೋಟಿ ರು ದಂಡ ವಿಧಿಸಿರುವುದು ಸರಿಯಿಲ್ಲ. ದಂಡ ಪಾವತಿ ಮಾಡುವುದಿಲ್ಲ. ಈ ವಿಷಯವಾಗಿ ಜೈಲಿಗೆ ಹೋಗಲು ಸಿದ್ಧ' ಎಂದು ಪ್ರತಿಕ್ರಿಯಿಸಿದ್ದಾರೆ. [ಎಒಎಲ್ ಗೆ 5 ಕೋಟಿ ರು ದಂಡ, ಉತ್ಸವಕ್ಕೆ ಗ್ರೀನ್ ಸಿಗ್ನಲ್]

Don't mind going to jail if court wants: Sri Sri Ravi Shankar

ಯಮುನಾ ನದಿ ನೀರು ಹಾನಿಯಾಗಿರುವ ಕಾರಣ ಸುಮಾರು 100 ರಿಂದ 200 ಕೋಟಿ ರು ಪರಿಹಾರಕ್ಕೆ ಆಗ್ರಹಿಸಲಾಗಿತ್ತು. ಆದರೆ, ಪರಿಸರ ನಾಶ ಮಾಡಿದ ಕಾರಣಕ್ಕೆ ಆರ್ಟ್ ಆಫ್ ಲಿವಿಂಗ್ ಗೆ 5 ಕೋಟಿ ರು ದಂಡ ವಿಧಿಸಲಾಗಿದೆ. ಜೊತೆಗೆ ಯಮುನಾ ನದಿ ಪ್ರದೇಶದಲ್ಲಿ ಸಂಪೂರ್ಣವಾಗಿ ಜೀವ ವೈವಿಧ್ಯ ಉದ್ಯಾನ ನಿರ್ಮಿಸುವಂತೆ ಎಒಎಲ್ ಗೆ ಪ್ರಾಧಿಕಾರ ಸೂಚಿಸಿದೆ. [ಏನಿದು? ರವಿಶಂಕರ್ ಗುರೂಜಿ ಯಮುನಾ ನದಿ ತೀರ ವಿವಾದ]

ಹಸಿರು ಪ್ರಾಧಿಕಾರದ ನಿರ್ಣಯದಿಂದ ತೃಪ್ತರಾಗಿಲ್ಲ ಎಂದಿರುವ ರವಿಶಂಕರ್ ಗುರೂಜಿ ಅವರು ನೀಡಿದ ಪ್ರತಿಕ್ರಿಯೆ ಮುಂದಿದೆ...

ಆರ್ಟ್ ಆಫ್ ಲಿವಿಂಗ್ ನ ಪ್ರತಿನಿಧಿಗಳು ಸ್ಪಷ್ಟನೆ

ಆರ್ಟ್ ಆಫ್ ಲಿವಿಂಗ್ ನ ಪ್ರತಿನಿಧಿಗಳು ಸ್ಪಷ್ಟನೆ

ಈ ಕಾರ್ಯಕ್ರಮದ ಆಯೋಜನೆಯಿಂದ ಯಮುನಾ ನದಿ ಕಲುಷಿತಗೊಂಡಿದೆ ಎಂದು ಪರಿಸರವಾದಿಗಳು ಆರೋಪಿಸಿ, ರಾಷ್ಟ್ರೀಯ ಹಸಿರು ಪ್ರಾಧಿಕಾರಕ್ಕೆ ದೂರು ನೀಡಿದ್ದರು. ಈ ಬಗ್ಗೆ ಬುಧವಾರ ಆರ್ಟ್ ಆಫ್ ಲಿವಿಂಗ್ ನ ಪ್ರತಿನಿಧಿಗಳು ಸ್ಪಷ್ಟನೆ ನೀಡಿ ಕಾರ್ಯಕ್ರಮಕ್ಕೆ ವೇದಿಕೆ ನಿರ್ಮಿಸಲು 15.63 ಕೋಟಿ ರು ವೆಚ್ಚವಾಗಿದ್ದು, ಅಲಂಕಾರಕ್ಕಾಗಿ 10 ಕೋಟಿ ರು ಖರ್ಚು ಮಾಡಲಾಗಿದೆ ಎಂದು ಹೇಳಿದ್ದರು.

ವಿಶ್ವ ಸಾಂಸ್ಕೃತಿಕ ಉತ್ಸವದ ಬಗ್ಗೆ ಶ್ರೀಶ್ರೀ ಟ್ವೀಟ್

172 ಕ್ಕೂ ಅಧಿಕ ಅಂತಾರಾಷ್ಟ್ರೀಯ ಪ್ರತಿನಿಧಿಗಳು, ಪದಾಧಿಕಾರಿಗಳು, ಸಂಸದರು ವಿಶ್ವ ಸಾಂಸ್ಕೃತಿಕ ಉತ್ಸವ 2016ದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಲಕ್ಷಾಂತರ ಜನ ಆಗಮಿಸುವ ನಿರೀಕ್ಷೆಯಿದೆ

155 ದೇಶಗಳಿಂದ 20,000ಕ್ಕೂ ಅಧಿಕ ಗಣ್ಯರು ಸೇರಿದಂತೆ ಲಕ್ಷಾಂತರ ಮಂದಿ ವಿಶ್ವಶಾಂತಿಗಾಗಿ ಪ್ರಾರ್ಥಿಸುವ ಕಾರ್ಯಕ್ರಮ ಇದಾಗಿದೆ.

ದೆಹಲಿಗರೇ, ಜಮೀನು ನೀಡಿ ಸ್ವರ್ಗ ನಿರ್ಮಿಸೋಣ

ದೆಹಲಿಗರೇ, ಯಮುನಾ ನದಿ ತೀರದಲ್ಲಿ ಸ್ವಲ್ಪ ಜಮೀನು ನೀಡಿ ಸ್ವರ್ಗ ನಿರ್ಮಿಸೋಣ

ನಮ್ಮ ಮೇಲೆ ದಂಡ ವಿಧಿಸಲಾಗಿದೆ

ನಮ್ಮ ಮೇಲೆ ದಂಡ ವಿಧಿಸಲಾಗಿದೆ. ನಾವು ಈ ನಿರ್ಣಯದಿಂದ ಸಂತುಷ್ಟರಾಗಿಲ್ಲ. ಸತ್ಯಮೇವ ಜಯತೇ

English summary
Art of Living founder Sri Sri Ravi Shankar on Thursday said he does not mind going to jail if the court wants him to.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X