ರೈತರಿಗಾಗಿ ದೇವೇಗೌಡರ ಉಪವಾಸಕ್ಕೆ ವ್ಯಾಪಕ ಬೆಂಬಲ
ನವದೆಹಲಿ, ಜುಲೈ 27: ರೈತರ ಆತ್ಮಹತ್ಯೆ ಕುರಿತಂತೆ ಸಂಸತ್ತಿನಲ್ಲಿ ಚರ್ಚೆಗೆ ಅವಕಾಶ ನೀಡುವಂತೆ ಆಗ್ರಹಿಸಿ ಮಾಜಿ ಪ್ರಧಾನಿ ದೇವೇಗೌಡ ಅವರು ಸೋಮವಾರ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ದೇವೇಗೌಡರ ಉಪವಾಸ ಸತ್ಯಾಗ್ರಹಕ್ಕೆ ಜೆಡಿಯು, ಸಿಪಿಐಂ ಪಕ್ಷದಿಂದ ವ್ಯಾಪಕಬೆಂಬಲ ವ್ಯಕ್ತವಾಗಿದೆ.
ಕರ್ನಾಟಕ ಸೇರಿದಂತೆ ದೇಶದ ಎಲ್ಲಾ ರಾಜ್ಯಗಳ ರೈತರು ಬೆಳೆ ನಷ್ಟ, ಸಾಲಬಾಧೆ, ಬೆಲೆ ಕುಸಿತ ಸೇರಿದಂತೆ ನಾನಾ ಕಾರಣಗಳಿಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅನ್ನದಾತನ ಬಗ್ಗೆ ಮಾತನಾಡಲು ಯಾರಿಗೂ ಪುರುಸೊತ್ತಿಲ್ಲ ಎಂದು ದೇವೇಗೌಡರು ವ್ಯಥೆ ವ್ಯಕ್ತಪಡಿಸಿದರು. [ಉತ್ತರ ಕರ್ನಾಟಕದಲ್ಲಿ ಮೋಡ ಬಿತ್ತನೆ, ಕೃತಕ ಮಳೆ?]
ರೈತರ ಬಗ್ಗೆ ಚರ್ಚಿಸಲು ಸಮಯ ನಿಗದಿಪಡಿಸುವವರೆಗೂ ನಾನು ಉಪವಾಸ ಸತ್ಯಾಗ್ರಹ ಕೈಬಿಡುವುದಿಲ್ಲ. ಆಡಳಿತ ಪಕ್ಷದ ನಾಯಕರು ಇಲ್ಲವೇ ಸ್ಪೀಕರ್ ಅವರು ಕರೆಯುವವರೆಗೂ ಉಪವಾಸ ಮುಂದುವರೆಸುತ್ತೇನೆ ಎಂದಿದ್ದಾರೆ.
ಜೆಡಿಎಸ್
ರಾಷ್ಟ್ರೀಯ
ಅಧ್ಯಕ್ಷ
ಎಚ್.ಡಿ.ದೇವೇಗೌಡರು
ಜಂತರ್
ಮಂತರ್
ನಲ್ಲಿ
ನಡೆಸುತ್ತಿರುವ
ಉಪವಾಸ
ಸತ್ಯಾಗ್ರಹಕ್ಕೆ
ಜೆಡಿಯು
ಹಿರಿಯ
ನಾಯಕ
ಶರದ್ಯಾದವ್
ಹಾಗೂ
ಕಮ್ಯುನಿಸ್ಟ್
ಪಕ್ಷದ
ಸೀತಾರಾಂ
ಯಚೂರಿ,
ಸಿಪಿಐ
ನಾಯಕ
ಡಿ
ರಾಜ,
ಸಮಾಜವಾದಿ
ಪಕ್ಷದ
ನಾಯಕ
ಮುಲಾಯಂ
ಸಿಂಗ್
ಬೆಂಬಲ
ವ್ಯಕ್ತಪಡಿಸಿದ್ದಾರೆ.
ಅನೇಕ
ನಾಯಕರು
ಸ್ಥಳಕ್ಕೆ
ಆಗಮಿಸಿ
ಹುರಿದುಂಬಿಸಿದರು.
ದೇವೇಗೌಡರ ಜೊತೆ ಕೈ ಜೋಡಿಸಿದ ನಾಯಕರು
ದೇವೇಗೌಡರ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಅವರು ಪ್ರಧಾನಿಯಾಗಿದ್ದ ಕಾಲದಲ್ಲಿ ರೈತರಿಗಾಗಿ ಹಲವಾರು ಜನಪರ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದ್ದರು. ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಎನ್ಡಿಎ ಸರ್ಕಾರ ರೈತ ವಿರೋಧಿಯಾಗಿದ್ದು, ರೈತರ ಬಗ್ಗೆ ಎಳ್ಳಷ್ಟೂ ಕಾಳಜಿ ಇಲ್ಲ ಎಂದು ಶರದ್ ಯಾದವ್ ಹೇಳಿದರು.
ನರೇಂದ್ರ ಮೋದಿಯವರು ಮೌನೇಂದ್ರಮೋದಿ
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಮೌನಸಿಂಗ್ ಎಂದು ಎನ್ಡಿಎ ನಾಯಕರು ಟೀಕಿಸಿದ್ದರು. ಇಂದಿನ ಪ್ರಧಾನಿ ನರೇಂದ್ರ ಮೋದಿಯವರು ಮೌನೇಂದ್ರಮೋದಿಯಾಗಿದ್ದಾರೆ ಎಂದು ಶರದ್ ಯಾದವ್ ಹೇಳಿದರು.
ಅನ್ನದಾತನ ಬದುಕು ಅಯೋಮಯ
ಎರಡೂ ರಾಷ್ಟ್ರೀಯ ಪಕ್ಷಗಳ ಹಿತಾಸಕ್ತಿಯಿಂದ ಅನ್ನದಾತನ ಬದುಕು ಅಯೋಮಯವಾಗಿದೆ. ಸತ್ವಯುತವಾದ ಚರ್ಚೆಗೆ ಕಾಂಗ್ರೆಸ್ ಅಡ್ಡಿಪಡಿಸುತ್ತಿದೆ. ನಮ್ಮಂಥ ಸಣ್ಣ-ಪುಟ್ಟ ಪ್ರಾದೇಶಿಕ ಪಕ್ಷಗಳ ಸದಸ್ಯರಿಗೆ ಮಾತನಾಡಲು ಸಾಧ್ಯವಾಗುತ್ತಿಲ್ಲ ಎಂದು ದೇವೇಗೌಡರು ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕದ ರೈತರ ಆತ್ಮಹತ್ಯೆ ಪ್ರಕರಣ
ಜೆಡಿಎಸ್ ಶಾಸಕರಾದ ಚಲುವರಾಯಸ್ವಾಮಿ ಪಕ್ಷದ ಕಾರ್ಯಕರ್ತರು ಸೇರಿದಂತೆ ಹಲವಾರು ಗಣ್ಯರು ಕರ್ನಾಟಕದ ಮತ್ತಿತರರು ಜಂತರ್ ಮಂತರ್ ಗೆ ಆಗಮಿಸಿ ಬೆಂಬಲ ವ್ಯಕ್ತಪಡಿಸಿದರು. ಕರ್ನಾಟಕದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪರಸ್ಪರ ಕಚ್ಚಾಟದಿಂದಾಗಿ ರೈತರ ನೋವು ಕೇಳುವವರು ಇಲ್ಲದ್ದಂತಾಗಿದೆ. ಒಂದೇ ದಿನ 13ಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತಲೆತಗ್ಗಿಸುವಂತಾಗಿದೆ ಎಂದು ಎಚ್ ಡಿ ಕುಮಾರಸ್ವಾಮಿ ಹೇಳಿದರು.