ಕೋಮು ಗಲಭೆಗೆ ಕುಮ್ಮಕ್ಕು ಎಎಪಿ ಶಾಸಕ ತ್ರಿಪಾಠಿ ಬಂಧನ
ಎಎಪಿ ಶಾಸಕಿ ಅಲ್ಕಾ ಲಂಬಾ ವಿರುದ್ಧ ಅವಾಚ್ಯ ಶಬ್ದ ಬಳಕೆ ಮಾಡಿದ ಆರೋಪದ ಮೇಲೆ ಬಿಜೆಪಿ ಶಾಸಕ ಒಪಿ ಶರ್ಮ ಅವರು ಸದನದಿಂದ ಹೊರ ಬಿದ್ದ ಘಟನೆ ಬಳಿಕ ಎಎಪಿ ಶಾಸಕರೊಬ್ಬರ ಬಂಧನ ಸುದ್ದಿ ಬಂದಿದೆ.
2013ರಲ್ಲಿ ದೆಹಲಿಯಲ್ಲಿ ಕೋಮುಗಲಭೆಗೆ ಪ್ರಚೋದನೆ ನೀಡಿದ ಆರೋಪ ಹೊತ್ತಿದ್ದ ದೆಹಲಿಯ ಮಾಡೆಲ್ ಟೌನ್ ಕ್ಷೇತ್ರದ ಶಾಸಕ ಅಖಿಲೇಶ್ ತ್ರಿಪಾಠಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ರೋಹಿಣಿ ಕೋರ್ಟ್ ಕಳಿಸಿದೆ.
ಆಮ್
ಆದ್ಮಿ
ಪಕ್ಷದ
ಶಾಸಕಿ
ಸರಿತಾ
ಸಿಂಗ್
ಅವರು
ಕರ್ತವ್ಯ
ನಿರತ
ಪೊಲೀಸ್
ಸಬ್
ಇನ್ಸ್ಪೆಕ್ಟರ್
ಅವರ
ಜೊತೆ
ಅನುಚಿತವಾಗಿ
ವರ್ತಿಸಿ,
ನಿಂದಿಸಿ,
ಕಿರುಕುಳ
ನೀಡಿದ
ಆರೋಪ
ಹೊತ್ತುಕೊಂಡಿದ್ದಾರೆ.
ಶಾಸಕಿ
ಸರಿತಾ
ವಿರುದ್ಧ
ಪ್ರಕರಣ
ದಾಖಲಿಸಿಕೊಳ್ಳಲಾಗಿದೆ.[ಶಾಸಕಿ
ಸರಿತಾ
ಸಿಂಗ್
ವಿರುದ್ಧ
ಕೇಸ್
]
ಅರವಿಂದ್ ಕೇಜ್ರಿವಾಲ್ ಸೇರಿದಂತೆ 21 ಆಪ್ ಶಾಸಕರ ವಿರುದ್ಧ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಚಾರ್ಜ್ ಶೀಟ್ ಹಾಕಲು ದೆಹಲಿ ಪೊಲೀಸರು ಸಜ್ಜಾಗಿದ್ದಾರೆ ಎಂಬ ಸುದ್ದಿಯಿದೆ. [ಎಎಪಿ ಶಾಸಕರಿಗೆ ಪೊಲೀಸ್ ಭೀತಿ]
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ವಿರುದ್ಧ ರಾಜಕೀಯ ಸಂಬಂಧ 6 ಪ್ರಕರಣಗಳು ಸೇರಿದಂತೆ 25ಕ್ಕೂ ಅಧಿಕ ಕ್ರಿಮಿನಲ್ ಕೇಸುಗಳು ಬಾಕಿ ಉಳಿದಿವೆ. ನಕಲಿ ಪದವಿ, ಕೌಟುಂಬಿಕ ದೌರ್ಜನ್ಯ ಪ್ರಕರಣಗಳ ನಂತರ ನಕಲಿ ಮದ್ಯ ಸಂಗ್ರಹದಲ್ಲೂ ಎಎಪಿ ಮುಖಂಡರ ಹೆಸರು ತಗುಲಿ ಹಾಕಿಕೊಂಡಿದೆ.