ಮೈಸೂರಿನಲ್ಲಿ ಡೆಂಗ್ಯೂ ಕಾಯಿಲೆಗೆ ಮತ್ತೊಂದು ಬಲಿ
ಮೈಸೂರು, ಜುಲೈ, 24: ಮೈಸೂರಿನ ನಂಜನಗೂಡಿನಲ್ಲಿ ಶಂಕಿತ ಡೆಂಗ್ಯೂ ಜ್ವರಕ್ಕೆ ಶಫೀಜ್ ಅಹಮದ್ ಪತ್ನಿ ನಫೀಜಾ ಫಾತೀಮಾ (೪೪) ಎಂಬ ಗೃಹಿಣಿಯೊಬ್ಬರು ಸಾವನ್ನಿಪ್ಪಿದ್ದಾರೆ.
ಇವರು, ನಂಜನಗೂಡು ಹೌಸಿಂಗ್ ಬೋರ್ಡ್ ಕಾಲೋನಿಯ ನಿವಾಸಿ. ಫಾತೀಮಾ ಕಳೆದ ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು. ಹಾಗಾಗಿ, ಅವರನ್ನು ಉದಯಗಿರಿಯ ಅಲ್ ಆನ್ಸರ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಫಾತೀಮಾ ಸಾವನ್ನಪ್ಪಿದ್ದಾರೆ.
ಅನ್ನಾದತ ನೇಣಿಗೆ ಶರಣು: ಸಾಲ ಭಾದೆ ತಾಳಲಾರದೆ ರೈತ ವಿಷದ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೆ.ಆರ್.ನಗರ ತಾಲೂಕಿನಲ್ಲಿ ಇಂದು ನಡೆದಿದೆ.
ತಾಲೂಕಿನ ಕೆಸ್ತೂರು ಕೊಪ್ಪಲು ಗ್ರಾಮದ ಕಾಂತರಾಜು (45) ಆತ್ಮಹತ್ಯೆಗೆ ಶರಣಾದ ರೈತ. ಕೆ.ಆರ್.ನಗರದ ಕಾರ್ಪೂರೆಷನ್ ಬ್ಯಾಂಕ್ ನಲ್ಲಿ 60 ಸಾವಿರ ರೂ. ಹಾಗೂ 2 ಲಕ್ಷಕ್ಕೂ ಅಧಿಕ ಕೈ ಸಾಲ ಮಾಡಿದ್ದ ಈತ 30 ಗುಂಟೆ ಜಮೀನಿನಲ್ಲಿ ತಂಬಾಕು ಬೆಳೆದಿದ್ದ. ಬೆಳೆ ನಷ್ಟದಿಂದ ತನ್ನ ಜಮೀನಿನ ಬಳಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.