ಮೈಸೂರು : ರೈಲು ಹತ್ತುವಾಗ ಕಾಲುಜಾರಿ ಬಿದ್ದು ಮಹಿಳೆ ಸಾವು
ಮೈಸೂರು, ಜೂನ್ 28 : ರೈಲು ಹತ್ತುವಾಗ ಕಾಲು ಜಾರಿ ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಮೈಸೂರಿನ ಚಾಮರಾಜಪುರಂ ರೈಲು ನಿಲ್ದಾಣದಲ್ಲಿ ನಡೆದಿದೆ. ಮೃತ ಮಹಿಳೆ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಡಿ ಗ್ರೂಪ್ ನೌಕರರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಮೃತಪಟ್ಟವರನ್ನು
ಮೈಸೂರಿನ
ಬೋಗಾದಿ
ನಿವಾಸಿ
ಪ್ರೇಮಮ್ಮ
(54)
ಎಂದು
ಗುರುತಿಸಲಾಗಿದೆ.
ಮಂಗಳವಾರ
ಬೆಳಗ್ಗೆ
7.20ರ
ಸುಮಾರಿಗೆ
ಮೈಸೂರಿನಿಂದ
ಚಾಮರಾಜನಗರಕ್ಕೆ
ಹೋಗುವ
ರೈಲು
ಹತ್ತುವಾಗ
ಕಾಲುಜಾರಿ
ಬಿದ್ದು
ಪ್ರೇಮಮ್ಮ
ಮೃತಪಟ್ಟಿದ್ದಾರೆ.
[ರೈಲು
ಅಪಘಾತ
:
ದೇವದುರ್ಗ
ಶಾಸಕ
ವೆಂಕಟೇಶ್
ನಾಯಕ್
ಸಾವು]
ಪ್ರೇಮಮ್ಮ ಅವರು ಚಾಮರಾಜನಗರ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಡಿಗ್ರೂಪ್ ನೌಕರರಾಗಿ ಕೆಲಸ ಮಾಡುತ್ತಿದ್ದರು. ಪ್ರತಿನಿತ್ಯ ಅವರ ಅಳಿಯ ಚಾಮರಾಜಪುರಂ ರೈಲು ನಿಲ್ದಾಣಕ್ಕೆ ಬಿಟ್ಟು ಹೋಗುತ್ತಿದ್ದರು. ಅಲ್ಲಿಂದ ಅವರು ರೈಲಿನಲ್ಲಿ ತೆರಳುತ್ತಿದ್ದರು. [ರೈಲ್ವೆ ಟಿಕೆಟ್ ಕ್ಯಾನ್ಸಲ್ ಮಾಡಲು 139ಕ್ಕೆ ಡಯಲ್ ಮಾಡಿ]
ಪ್ರೇಮಮ್ಮ ಅವರ ಪತಿ ನಿಧನರಾದ ನಂತರ ಅವರಿಗೆ ಅನುಕಂಪದ ಆಧಾರದ ಮೇಲೆ ಕೆಲಸ ಸಿಕ್ಕಿತ್ತು. ಪ್ರೇಮಮ್ಮ ಅವರಿಗೆ ಒಂದು ಗಂಡು, ಒಂದು ಹೆಣ್ಣು ಮಕ್ಕಳಿದ್ದಾರೆ ಎಂದು ತಿಳಿದುಬಂದಿದೆ. [ಹಾಸ್ಯಪ್ರಜ್ಞೆಯ ಅಪರೂಪದ ವೈದ್ಯರ ದುರಂತ ಸಾವು]