ಮೈಸೂರಿನಲ್ಲಿ ಒಡೆಯರ್ ಪುಣ್ಯಾರಾಧನೆ
ಮೈಸೂರು, ಡಿ.1 : ಯದುವಂಶದ ಕೊನೆಯ ಕುಡಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಪ್ರಥಮ ವರ್ಷದ ಪುಣ್ಯಾರಾಧನೆ ಇಂದು ಅಂಬಾವಿಲಾಸ ಅರಮನೆ ಮತ್ತು ಒಡೆಯರ್ ಸಮಾಧಿ ಇರುವ ಮಧುವನದಲ್ಲಿ ನಡೆಯಿತು. ಎರಡು ಕಡೆ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಅರಮನೆಯ
ಕಲ್ಯಾಣಮಂಟಪದಲ್ಲಿ
ಸೋಮವಾರ
ಮುಂಜಾನೆಯಿಂದಲೇ
ಪುಣ್ಯಾರಾಧನೆಯ
ವಿಧಿವಿಧಾನಗಳು
ಆರಂಭಗೊಂಡವು.
ಅರಮನೆಯ
ಎಲ್ಲ
ದೇವಾಲಯಗಳ
ಪುರೋಹಿತರು,
ಆಗಮಿಕರು
ಇವುಗಳನ
ನೇತೃತ್ವ
ವಹಿಸಿದ್ದರು.
ಮಧ್ಯಾಹ್ನ 12 ಗಂಟೆಗೆ ಒಡೆಯರ್ ಅಂತ್ಯ ಸಂಸ್ಕಾರ ನೆರವೇರಿಸಿದ್ದ ಕಾಂತರಾಜೇ ಅರಸ್ ಅರಮನೆಯಲ್ಲಿ ಶ್ರೀರಾಮನ ಪಟ್ಟಾಭಿಷೇಕ ಮಾಡಿದರು. ನಂತರ ವಿವಿಧ ಮಠ ವಿವಿಧ ಮಠಗಳ ಗುರುಗಳ ಪಾದಪೂಜೆ ಮಾಡಿದರು. ಮೂರು ದಿನಗಳಿಂದ ನಡೆಯುತ್ತಿದ್ದ ಪುಣ್ಯಾರಾಧನೆಯ ಕಾರ್ಯಕ್ರಮಗಳು ಇಂತು ಅಂತ್ಯಗೊಂಡಿದ್ದು, ರಾಣಿ ಪ್ರಮೋದಾ ದೇವಿ ಅವರು ಎಲ್ಲಾ ಕಾರ್ಯಕ್ರಮಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. [ಅಳಿವಿನ ಅಂಚಿನಲ್ಲಿ ಮೈಸೂರಿನ ಆಳರಸರ ಮಧುವನ]
ಒಡೆಯರ್ ಅವರ ಪತ್ನಿ ಪ್ರಮೋದಾದೇವಿ ಒಡೆಯರ್ ಅವರು ಮೈಸೂರು-ನಂಜನಗೂಡು ರಸ್ತೆಯಲ್ಲಿರುವ ಮಧುವನದಲ್ಲಿ ಒಡೆಯರ್ ಅವರ ಸಮಾಧಿಗೆ ಪೂಜೆ ಸಲ್ಲಿಸಿದರು. ಒಡೆಯರ್ ಅಂತ್ಯಕ್ರಿಯೆ ನಡೆದ ಸ್ಥಳದಲ್ಲಿ ಕಪ್ಪು ಗ್ರಾನೈಟ್ ಬಳಸಿ ಒಡೆಯರ್ ಸಮಾಧಿಯನ್ನು ನಿರ್ಮಿಸಲಾಗಿದೆ. [ಒಡೆಯರಿಗೆ ಚಿತ್ರನಮನ]
ಸಾರ್ವಜನಿಕರಿಗೆ ಅನ್ನ ಸಂತರ್ಪಣೆ : ಕೋಟೆ ಆಂಜನೇಯ ದೇವಸ್ಥಾನ ಬಳಿ ಹಾಗೂ ಒಡೆಯರ್ ಅವರ ಸಮಾಧಿ ಇರುವ ಸ್ಥಳ ಮಧುವನದ ಬಳಿ ಸಾರ್ವಜನಿಕರಿಗೆ ಅನ್ನಸಂತರ್ಪಣೆ ನಡೆಯಿತು. ಧಾರ್ಮಿಕ ಕಾರ್ಯಕ್ರಮಗಳ ಹಿನ್ನಲೆಯಲ್ಲಿ ಇಂದು ಅರಮನೆಗೆ ಸಾರ್ವನಿಕರ ಪ್ರವೇಶ ನಿಷೇಧಿಸಲಾಗಿತ್ತು.
ಸರ್ಕಾರದ ಪರವಾಗಿ ಗೃಹ ಸಚಿವ ಕೆ.ಜೆ.ಜಾರ್ಜ್, ಶಾಸಕರಾದ ವಾಸು, ಎಂ.ಕೆ.ಸೋಮಶೇಖರ್, ಜಿ.ಟಿ.ದೇವೇಗೌಡ, ಕೆಎಸ್ಸಿಎ ಕಾರ್ಯದರ್ಶಿ ಬಿಜ್ರೇಶ್ ಪಟೇಲ್ ಮುಂತಾದವರು ಇಂದಿನ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು.
ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಕಳೆದ ವರ್ಷದ ಡಿಸೆಂಬರ್ 10ರಂದು ಬೆಂಗಳೂರಿನಲ್ಲಿ ವಿಧಿವಶರಾಗಿದ್ದರು. ಹಿಂದೂ ಪಂಚಾಗದ ಪ್ರಕಾರ ಮೂರು ದಿನಗಳ ಹಿಂದೆ ಪುಣ್ಯಾರಾಧನೆ ಕಾರ್ಯಕ್ರಮಗಳನ್ನು ಅರಮನೆಯಲ್ಲಿ ಆರಂಭಿಸಲಾಗಿತ್ತು. ಇಂದು ಅದು ಮುಕ್ತಾಯಗೊಂಡಿದೆ.