ಮೈಸೂರು: ಕೊಳೆತ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ
ಮೈಸೂರು, ಡಿಸೆಂಬರ್ 16 : ದೇವರಾಜ ಮೊಹಲ್ಲಾದಲ್ಲಿರುವ ನಂಜರಾಜಬಹದ್ದೂರ್ ಛತ್ರದ ಆವರಣದಲ್ಲಿದ್ದ ಮಾದರಿ ಹಿರಿಯ ಪ್ರಾಥಮಿಕ ಶಾಲೆಯೊಳಗೆ ಕೊಳೆತ ಸ್ಥಿತಿಯಲ್ಲಿ 25ರಿಂದ 30 ವರ್ಷದ ಅಪರಿಚಿತ ಯುವಕನೊಬ್ಬನ ಶವ ಪತ್ತೆಯಾಗಿದೆ.
ಪ್ರಾಥಮಿಕ ಶಾಲೆಯನ್ನು ಮುಚ್ಚಲ್ಪಟ್ಟಿದ್ದು, 4-5 ದಿನಗಳ ಹಿಂದೆ ಈ ವ್ಯಕ್ತಿ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಶುಕ್ರವಾರದಂದು ಕೊಳೆತ ವಾಸನೆ ಬಂದ ಹಿನ್ನೆಲೆಯಲ್ಲಿ ಸಾರ್ವಜನಿಕರು ನೀಡಿದ ದೂರಿನ ಮೇರೆಗೆ ದೇವರಾಜ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ನಾಗೇಶ್, ಸಬ್-ಇನ್ಸ್ ಪೆಕ್ಟರ್ ಲೇಪಾಕ್ಷ ಸ್ಥಳ ಮಹಜರು ನಡೆಸಿ, ಶವವನ್ನು ಕೆ.ಆರ್. ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದರು.[ಕಾಸರಗೋಡು: ನಾಪತ್ತೆಯಾಗಿದ್ದ ಸಹೋದರರಿಬ್ಬರ ಶವ ಬಾವಿಯಲ್ಲಿ ಪತ್ತೆ]
ಶವ ಕೊಳೆತಿರುವುದರಿಂದ ಗುರುತು ಹಿಡಿಯುವುದು ಕಷ್ಟವಾಗಿದ್ದು, ದೇವರಾಜ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ವ್ಯಕ್ತಿಯು ಪಾನಮತ್ತನಾಗಿ ಬಂದು ಮೃತಪಟ್ಟಿದ್ದಾನೆ ಎನ್ನಲಾಗಿದೆ.
ರೈತನ
ಮೇಲೆ
ಕರಡಿ
ದಾಳಿ
ಮೈಸೂರು:
ಬೆಳೆ
ವೀಕ್ಷಣೆಗೆ
ಜಮೀನಿಗೆ
ತೆರಳಿದ
ರೈತನ
ಮೇಲೆ
ಕರಡಿ
ದಾಳಿ
ನಡೆಸಿದ
ಘಟನೆ
ಶುಕ್ರವಾರ
ವರದಿಯಾಗಿದೆ.
ಎಚ್.ಡಿ.ಕೋಟೆ
ತಾಲೋಕಿನ
ಮೊಸರಳ್ಳ
ಗ್ರಾಮದ
ಬಳಿ
ಈ
ಘಟನೆ
ನಡೆದಿದ್ದು,
ಅಂಕನಾಯ್ಕ(65)
ಕರಡಿ
ದಾಳಿಯಿಂದ
ಗಾಯಗೊಂಡ
ರೈತ.
ಅವರ
ಎರಡು
ಕೈಗಳಿಗೆ
ತೀವ್ರ
ಗಾಯಗಳಾಗಿದ್ದು,
ಜಿಲ್ಲಾಸ್ಪತ್ರೆಗೆ
ದಾಖಲಾಗಿದ್ದಾರೆ.
ಸರಗೂರು
ಪೊಲೀಸ್
ಠಾಣಾ
ವ್ಯಾಪ್ತಿಯಲ್ಲಿ
ಈ
ಘಟನೆ
ನಡೆದಿದ್ದು,
ಸ್ಥಳಕ್ಕೆ
ಎನ್.ಬೇಗೂರು
ಅರಣ್ಯ
ಇಲಾಖೆ
ಅಧಿಕಾರಿಗಳು
ಭೇಟಿ
ನೀಡಿ
ಪರಿಶೀಲಿಸಿದ್ದಾರೆ.