ನಾಯಿ ಚರ್ಮಕ್ಕೆ ಬಣ್ಣ ಬಳಿದು ಹುಲಿ ಚರ್ಮ ಅಂದ್ರು!
ಮೈಸೂರು, ಮೇ 25 : ನಾಯಿ ಚರ್ಮಕ್ಕೆ ಬಣ್ಣ ಬಳಿದು ಹುಲಿ ಚರ್ಮವೆಂದು ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರನ್ನು ಮೈಸೂರಿನಲ್ಲಿ ಬಂಧಿಸಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಆರೋಪಿಗಳನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಕೇರಳ
ಮೂಲದ
ಸುಭಾಷ್,
ಬೆಂಗಳೂರಿನ
ನಾಗರಾಜ್
ಹಾಗೂ
ಮೋಹನ್
ಬಂಧಿತ
ಆರೋಪಿಗಳು.
ಸೋಮವಾರ
ಬೆಳಗ್ಗೆ
ಅರಣ್ಯ
ಇಲಾಖೆ
ಅಧಿಕಾರಿಗಳು
ಮೈಸೂರಿನ
ಜಗನ್ಮೋಹನ
ಅರಮನೆ
ಬಳಿ
ಮೂವರನ್ನು
ವಶಕ್ಕೆ
ಪಡೆದುಕೊಂಡು
ನಂತರ
ದೇವರಾಜ
ಠಾಣೆ
ಪೊಲೀಸರಿಗೆ
ಒಪ್ಪಿಸಿದ್ದಾರೆ.
[ಪಿಲಿಕುಳ
ನಿಸರ್ಗಧಾಮದ
'ರಾಜ'
ಇನ್ನು
ನೆನಪು
ಮಾತ್ರ]
ನಾಯಿ ಚರ್ಮಕ್ಕೆ ಬಣ್ಣ : ಬಂಧಿತ ಆರೋಪಿಗಳು ನಾಯಿ ಚರ್ಮಕ್ಕೆ ಬಣ್ಣ ಬಳಿದು ಹುಲಿಯ ಚರ್ಮವೆಂದು ಮಾರಾಟ ಮಾಡಲು ಯತ್ನಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇಂದು ಬೆಳಗ್ಗೆ ಅರಮನೆ ಬಳಿ ಅನುಮಾಸ್ಪದವಾಗಿ ಓಡಾಡುತ್ತಿದ್ದ ಇವರನ್ನು ಅರಣ್ಯ ಇಲಾಖೆಯ ಗಸ್ತು ಸಿಬ್ಬಂದಿ ವಶಕ್ಕೆ ಪಡೆದು ವಿಚಾರಣೆ ನಡೆಸಿದರು. [ದೇಶದ ಹುಲಿಗಳ ಸಂಖ್ಯೆಯಲ್ಲಿ ಕರ್ನಾಟಕವೇ ನಂ.1]
ನಂತರ
ಆರೋಪಿಗಳನ್ನು
ದೇವರಾಜ
ಠಾಣೆ
ಪೊಲೀಸರಿಗೆ
ಒಪ್ಪಿಸಿದರು.
ಆರೋಪಿಗಳಿಂದ
ಬಣ್ಣ
ಬಳಿದ
ಎರಡು
ಚರ್ಮಗಳನ್ನು
ವಶಕ್ಕೆ
ಪಡೆದುಕೊಳ್ಳಲಾಗಿದೆ.
ಪೊಲೀಸರು
ಆರೋಪಿಗಳನ್ನು
ನ್ಯಾಯಾಲಯಕ್ಕೆ
ಹಾಜರುಪಡಿಸಿ
ತಮ್ಮ
ವಶಕ್ಕೆ
ಪಡೆದುಕೊಂಡು
ಹೆಚ್ಚಿನ
ವಿಚಾರಣೆ
ನಡೆಸುತ್ತಿದ್ದಾರೆ.