ನಿವೃತ್ತ ಐಎಎಸ್ ಅಧಿಕಾರಿ ಪುತ್ರಿ ಮೇಲೆ ಅತ್ಯಾಚಾರ, ಸಿಐಡಿ ತನಿಖೆ
ಮೈಸೂರು, ಮೇ 14 : ನಿವೃತ್ತ ಐಎಎಸ್ ಅಧಿಕಾರಿ ಪುತ್ರಿ ಮೇಲೆ ನಡೆದ ಅತ್ಯಾಚಾರ ಪ್ರಕರಣದ ತನಿಖೆಯನ್ನು ಸರ್ಕಾರ ಸಿಐಡಿಗೆ ವಹಿಸಿ ಆದೇಶ ಹೊರಡಿಸಿದೆ. ಅತ್ಯಾಚಾರ ನಡೆದ ಕುರಿತು ಬೆಂಗಳೂರಿನಲ್ಲಿ ದೂರು ದಾಖಲಾಗಿತ್ತು, ನಂತರ ಅದನ್ನು ಮೈಸೂರಿಗೆ ವರ್ಗಾವಣೆ ಮಾಡಲಾಗಿತ್ತು.
ಅತ್ಯಾಚಾರ
ಪ್ರಕರಣವನ್ನು
ಸಿಐಡಿ
ತನಿಖೆಗೆ
ವಹಿಸಿ
ಸರ್ಕಾರ
ಆದೇಶ
ಹೊರಡಿಸಿದೆ
ಎಂದು
ಮೈಸೂರು
ನಗರ
ಪೊಲೀಸ್
ಆಯುಕ್ತರಾದ
ಬಿ.ದಯಾನಂದ
ತಿಳಿಸಿದ್ದಾರೆ.
ಹಿಂದೆ
ನಗರ
ಪೊಲೀಸ್
ಆಯುಕ್ತರಾಗಿದ್ದ
ಡಾ.ಎಂ.ಎ.ಸಲೀಂ
ಪ್ರಕರಣವನ್ನು
ಸಿಐಡಿಗೆ
ವಹಿಸಲು
ಸರ್ಕಾರಕ್ಕೆ
ಶಿಫಾರಸು
ಮಾಡಿದ್ದರು.
[ನಿವೃತ್ತ
ಐಎಎಸ್
ಅಧಿಕಾರಿ
ಮಗಳ
ಮೇಲೆ
ಅತ್ಯಾಚಾರ]
ಈಗಾಗಲೇ ತನಿಖೆ ನಡೆಸುತ್ತಿದ್ದ ಮೈಸೂರು ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿದ್ದರು. ಇಬ್ಬರೂ ಕೋರ್ಟ್ನಿಂದ ಜಾಮೀನು ಪಡೆದಿದ್ದಾರೆ. ಮುಂದಿನ ತನಿಖೆಯನ್ನು ಸಿಐಡಿ ಅಧಿಕಾರಿಗಳು ನಡೆಸಲಿದ್ದಾರೆ ಎಂದು ಬಿ.ದಯಾನಂದ ಅವರು ಹೇಳಿದ್ದಾರೆ.
ಏನಿದು ಪ್ರಕರಣ : ಪತಿಯ ಸಹೋದರ ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ನಿವೃತ್ತ ಐಎಎಸ್ ಅಧಿಕಾರಿಯೊಬ್ಬರ ಪುತ್ರಿ ಬೆಂಗಳೂರಿನ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಆದರೆ, ಈ ಪ್ರಕರಣ ಮೈಸೂರಿನಲ್ಲಿ ನಡೆದಿದ್ದರಿಂದ ಕೇಸನ್ನು ಮೈಸೂರಿಗೆ ವರ್ಗಾವಣೆ ಮಾಡಲಾಗಿತ್ತು.
2015ರ ಏಪ್ರಿಲ್ 18ರಂದು ಪ್ರಕರಣ ಮೈಸೂರಿಗೆ ವರ್ಗಾವಣೆಗೊಂಡಿತ್ತು ಮತ್ತು ಪೊಲೀಸರು ತನಿಖೆ ಆರಂಭಿಸಿದ್ದರು. ಮೈಸೂರು ಪೊಲೀಸ್ ಆಯುಕ್ತರ ಶಿಫಾರಸಿನ ಅನ್ವಯ ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸಲಾಗಿದೆ.