ಹಣಕ್ಕಾಗಿ ಮೈಸೂರಿನಲ್ಲಿ ವೃದ್ಧೆಯ ಕೊಲೆ
ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿದ ದುಷ್ಕರ್ಮಿಗಳು ವೃದ್ಧೆಯನ್ನು ಕೊಂದು ಚಿನ್ನಾಭರಣ ಲೂಟಿ ಮಾಡಿ ಪರಾರಿಯಾಗಿರುವ ಘಟನೆ ಹುಣಸೂರಿನ ಹೊರಭಾಗದಲ್ಲಿ ಬುಧವಾರ ಹಾಡಹಗಲೇ ನಡೆದಿದೆ.
ಮೈಸೂರು, ಏಪ್ರಿಲ್ 27: ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿದ ದುಷ್ಕರ್ಮಿಗಳು ವೃದ್ಧೆಯನ್ನು ಕೊಂದು ಚಿನ್ನಾಭರಣ ಲೂಟಿ ಮಾಡಿ ಪರಾರಿಯಾಗಿರುವ ಘಟನೆ ಹುಣಸೂರಿನ ಹೊರಭಾಗದಲ್ಲಿ ಬುಧವಾರ ಹಾಡಹಗಲೇ ನಡೆದಿದೆ. ಕೊಲೆಯಾದ ಮಹಿಳೆಯನ್ನು ಜೋಸೆಫ್ ಎಂಬುವವರ ಪತ್ನಿ ಫಿಲೋಮಿನಾ ಎಂದು ಗುರುತಿಸಲಾಗಿದೆ. ಮೃತರಿಗೆ ಇಬ್ಬರು ಮಕ್ಕಳಿದ್ದಾರೆ.
ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿದ ದುಷ್ಕರ್ಮಿಗಳು ಫಿಲೋಮಿನಾರ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದಾರೆ. ತಲೆಯ ಹಿಂಬದಿಗೆ ಬರ್ಬರವಾಗಿ ಹೊಡೆದು ಅವರ ಕತ್ತಿನಲ್ಲಿದ್ದ 30 ಗ್ರಾಂ ಚಿನ್ನದ ಸರ ಮತ್ತು ಕೈಯಲ್ಲಿದ್ದ ಒಂದು ಚಿನ್ನದ ಬಳೆಯನ್ನು ಕದ್ದೊಯ್ದಿದ್ದಾರೆ. ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.[ಅಶ್ಲೀಲ ವೆಬ್ ಸೈಟ್ ಪ್ರಕರಣ: ಮೈಸೂರು ವಿವಿ ಪ್ರಾಧ್ಯಾಪಕರ ಕೈವಾಡ?]
ಅಪಘಾತ:
ಒಬ್ಬ
ಸಾವು
ಚಲಿಸುತ್ತಿದ್ದ
ದ್ವಿಚಕ್ರವಾಹನಕ್ಕೆ
ಹಿಂದಿನಿಂದ
ಬಂದ
ಲಾರಿಯೊಂದು
ಗುದ್ದಿದ
ಪರಿಣಾಮ
ವಾಹನ
ಸವಾರ
ಸ್ಥಳದಲ್ಲೇ
ಮೃತಪಟ್ಟು,
ಇನ್ನೋರ್ವ
ಸಣ್ಣಪುಟ್ಟ
ಗಾಯಗಳೊಂದಿಗೆ
ಅಪಾಯದಿಂದ
ಪಾರಾದ
ಘಟನೆ
ಮೈಸೂರಿನ
ರಿಂಗ್
ರಸ್ತೆ
ಬಳಿ
ನಡೆದಿದೆ.
ಮೃತರನ್ನು
ಮೈಸೂರು
ನಿವಾಸಿ
ಆರೋಗ್ಯ
ಇಲಾಖೆಯಲ್ಲಿ
ಕಾರ್ಯನಿರ್ವಹಿಸುತ್ತಿದ್ದ
ಗೋವಿಂದ
ಶೆಟ್ಟಿ
(45)
ಎಂದು
ಗುರುತಿಸಲಾಗಿದೆ.
ಗಾಯಗೊಂಡವರು
ಅದೇ
ಇಲಾಖೆಯಲ್ಲಿ
ಕಾರ್ಯನಿರ್ವಹಿಸುತ್ತಿದ್ದ
ಸುದರ್ಶನ್
ಎಂದು
ಗುರುತಿಸಲಾಗಿದೆ.
ರಾಜರಾಜೇಶ್ವರಿ ನಗರ ದಟ್ಟಗಳ್ಳಿಯಿಂದ ಬರುತ್ತಿದ್ದಾಗ ಆರ್.ಟಿ.ನಗರ ಬಳಿ ಹಿಂದಿನಿಂದ ಬಂದ ಲಾರಿ ಇವರಿದ್ದ ದ್ವಿಚಕ್ರ ವಾಹನಕ್ಕೆ ಗುದ್ದಿದೆ. ಬಿದ್ದ ರಭಸಕ್ಕೆ ಸ್ಥಳದಲ್ಲೇ ಗೋವಿಂದ ಶೆಟ್ಟಿ ಮೃತಪಟ್ಟಿದ್ದಾರೆ. ಕುವೆಂಪುನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.[ಮೈಸೂರು: ಕಳ್ಳರಿಂದ ರಕ್ಷಿಸಲ್ಪಟ್ಟ ಮಕ್ಕಳಿನ್ನೂ ಅನಾಥ]
ಲೈಂಗಿಕ
ಕಿರುಕುಳ
ನೀಡಿದ
ವೈದ್ಯನಿಗೆ
ಜೈಲು
ಶಿಕ್ಷೆ
ಲೈಂಗಿಕ
ಕಿರುಕುಳಕ್ಕೆ
ಮನನೊಂದು
ಯುವತಿ
ಆತ್ಮಹತ್ಯೆ
ಪ್ರಕರಣಕ್ಕೆ
ಸಂಬಂಧಿಸಿದಂತೆ
ಡಾ.
ಹರೀಶ್
ಎಂಬುವವರಿಗೆ
ಎರಡು
ವರ್ಷಗಳ
ಕಾಲ
ಕಠಿಣ
ಶಿಕ್ಷೆ
ವಿಧಿಸಿ
ಎರಡನೇ
ಜಿಲ್ಲಾ
ಸತ್ರ
ನ್ಯಾಯಾಲಯ
ಆದೇಶ
ನೀಡಿದೆ.
ಜನವರಿ
1
,
2010
ರಂದು
ಮಾತ್ರೆ
ಸೇವಿಸಿ
ಹನಗೋಡು
ಆಸ್ಪತ್ರೆಯಲ್ಲಿ
ಶುಶ್ರೂಷಕಿ
ಮಮತಾ
ಎಂಬವವರು
ಆತ್ಮಹತ್ಯೆ
ಮಾಡಿಕೊಂಡಿದ್ದರು.
ವೈದ್ಯ
ಹರೀಶ್
ಎಂಬುವರು
ತನಗೆ
ಲೈಂಗಿಕ
ಕಿರುಕುಳ
ನೀಡುತ್ತಿದ್ದಾರೆ
ಎಂದು
ಆರೋಗ್ಯ
ಅಧಿಕಾರಿಗಳಿಗೆ
ದೂರು
ನೀಡಿದ್ದರು.
ಆದರೆ
ಅಧಿಕಾರಿಳು
ಯಾವುದೇ
ಕ್ರಮ
ಕೈಗೊಂಡಿರಲಿಲ್ಲ.
ಇದರಿಂದ
ಬೇಸತ್ತು
ಆಕೆ
ಆತ್ಮಹತ್ಯೆ
ಹಾದಿ
ಹಿಡಿದಿದ್ದರು.
ಈ
ಪ್ರಕರಣದ
ಬಗ್ಗೆ
ವಾದ
ಮಂಡಿಸಿ
ಮೃತಳ
ಕುಟುಂಬಕ್ಕೆ
ಸರ್ಕಾರಿ
ಅಭಿಯೋಜಕ
ಡಾ.
ಆನಂದ್
ನ್ಯಾಯ
ದೊರಕಿಸಿಕೊಟ್ಟಿದ್ದಾರೆ.
ನ್ಯಾಯಾಧೀಶರು
ಐಪಿಸಿ
ಸೆಕ್ಷನ್
354
ರ
ಅನ್ವಯ
2
ವರ್ಷ
ಕಾರಾಗೃಹ,
3.25
ಲಕ್ಷರೂ.
ದಂಡ
ಹಾಗೂ
ಎರಡು
ವರ್ಷದಲ್ಲಿ
ಆರು
ತಿಂಗಳು
ಕಠಿಣ
ಕಾರಾಗೃಹವಾಸದ
ತೀರ್ಪನ್ನು
ನೀಡಿ
ಆದೇಶ
ಹೊರಡಿಸಿದ್ದಾರೆ.
ಮಮತಾ
ಕುಟುಂಬಕ್ಕೆ
3
ಲಕ್ಷ
ನೀಡುವಂತೆ
ಸೂಚಿಸಲಾಗಿದೆ.