ಮೈಸೂರು: ಹೆಚ್ಚು ಹಾಲು ಕರೆದವರಿಗೆ ಪ್ರಶಸ್ತಿ ವಿತರಿಸಿದ ದರ್ಶನ್
ಮೈಸೂರಿನ ಜೆ.ಕೆ.ಮೈದಾನದಲ್ಲಿ ಮೈಸೂರು ಗೋಪಾಲಕರ ಸಂಘದಿಂದ ಆಯೋಜಿಸಲಾದ ರಾಜ್ಯಮಟ್ಟದ ಅಧಿಕ ಹಾಲು ಕರೆಯುವ ಸ್ಪರ್ಧೆಯಲ್ಲಿ ಬೆಂಗಳೂರಿನ ಗೋಪಾಲಕರು ಅತಿ ಹೆಚ್ಚು ಹಾಲು ಕರೆಯುವ ಮೂಲಕ ಪ್ರಶಸ್ತಿ ಬಾಚಿಕೊಂಡಿದ್ದಾರೆ.
ಮೈಸೂರು, ಫೆಬ್ರವರಿ 6 : ಮೈಸೂರಿನ ಜೆ.ಕೆ.ಮೈದಾನದಲ್ಲಿ ಮೈಸೂರು ಗೋಪಾಲಕರ ಸಂಘದಿಂದ ಆಯೋಜಿಸಲಾದ ರಾಜ್ಯಮಟ್ಟದ ಅಧಿಕ ಹಾಲು ಕರೆಯುವ ಸ್ಪರ್ಧೆಯಲ್ಲಿ ಬೆಂಗಳೂರಿನ ಗೋಪಾಲಕರು ಅತಿ ಹೆಚ್ಚು ಹಾಲು ಕರೆಯುವ ಮೂಲಕ ಪ್ರಶಸ್ತಿ ಬಾಚಿಕೊಂಡಿದ್ದಾರೆ.
ಬೆಂಗಳೂರಿನ ಪಾದರಾಯಪುರದ ಚೌಡೇಶ್ವರಿ ಡೇರಿ ಫಾರಂನ ಸಿ.ಸತೀಶ್ ಕುಮಾರ್ ಚೌಡಯ್ಯ ದಿನಕ್ಕೆ 42.2ಕೆ.ಜಿ ಹಾಲು ಕರೆಯುವ ಮೂಲಕ ಪ್ರಥಮ ಬಹುಮಾನ ಪಡೆದರು. ಈ ಮೂಲಕ 1 ಲಕ್ಷ ರೂಪಾಯಿ ನಗದು ಹಾಗೂ 2ಕೆ.ಜಿ ಬೆಳ್ಳಿದೀಪ ತಮ್ಮದಾಗಿಸಿಕೊಂಡರು. ಬೆಂಗಳೂರಿನ ನೆಟ್ಟಕಲ್ಲಪ್ಪ ವೃತ್ತದ ಎಂ.ಜಿ.ಸೋಮಣ್ಣ 40.6 ಕೆ.ಜಿ ಹಾಲು ಕರೆದು ದ್ವಿತೀಯ ಬಹಮಾನ ಜತೆಗೆ ರೂ. 75 ಸಾವಿರ ನಗದು ಹಾಗೂ 1.1/2 ಕೆಜಿ ಬೆಳ್ಳಿ ದೀಪವನ್ನು ಪಡೆದುಕೊಂಡರು. ಈ ಮೂಲಕ ಮೊದಲ ಎರಡೂ ಬಹುಮಾನಗಳು ಬೆಂಗಳೂರು ನಗರದವರ ಪಾಲಾಯಿತು.[ಮೈಸೂರಿನ ಶ್ವಾನಪ್ರದರ್ಶನ ಸಕತ್ ಆಗಿತ್ತು ಕಣ್ರೀ...]
ಇನ್ನು ಮಂಡ್ಯದ ಹೊಸಹಳ್ಳಿಯ ಡಿ.ದ್ರುವಕುಮಾರ್ ಹೊನ್ನೇಗೌಡ 39.9 ಕೆ.ಜಿ ಹಾಲು ಕರೆಯುವ ಮೂಲಕ 50ಸಾವಿರ ರೂಪಾಯಿ ನಗದು ಹಾಗೂ 1ಕೆಜಿ ಬೆಳ್ಳಿ ದೀಪ ಜೇಬಿಗಿಳಿಸಿದರು. ಬೆಂಗಳೂರಿನ ಬೇಗೂರಿನ ಲಕ್ಷ್ಮಣ ಹೊಗೆಬಂಡಿ 39.7 ಕೆ.ಜಿ.ಹಾಲು ಕರೆಯುವ ಮೂಲಕ ನಾಲ್ಕನೇ ಸ್ಥಾನ ಪಡೆದು 30 ಸಾವಿರ ರೂಪಾಯಿ ಮತ್ತು ಅರ್ಧ ಕೆ.ಜಿ ಬೆಳ್ಳಿ ದೀಪ ಪಡೆದುಕೊಂಡರು.[ನಂಜನಗೂಡು ಉಪ ಚುನಾವಣೆ: ಕಾಂಗ್ರೆಸ್ ಟಿಕೆಟ್ ಕದನ ಕುತೂಹಲ]
ವಿಜೇತರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ನಟ ಸೃಜನ್ ಲೋಕೇಶ್ ಪ್ರಶಸ್ತಿ ವಿತರಿಸಿದರು.