ಭೀಕರ ಅಪಘಾತ, ಪವಾಡ ಸದೃಶ ಪಾರಾದ ಚಾ.ನಗರ ಎಸ್ಪಿ
ತಿ.ನರಸೀಪುರ ತಾಲೂಕಿನಲ್ಲಿ ಟಾಟಾ ಸುಮೋ ಮತ್ತು ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಿದ್ದ ಇನ್ನೊವಾ ಕಾರಿನ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಎಸ್ಪಿ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ.
ಮೈಸೂರು, ಮಾರ್ಚ್ 14: ತಿ.ನರಸೀಪುರ ತಾಲೂಕಿನಲ್ಲಿ ಟಾಟಾ ಸುಮೋ ಮತ್ತು ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಿದ್ದ ಇನ್ನೊವಾ ಕಾರಿನ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಎಸ್ಪಿ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ.
ಮೈಸೂರು ಜಿಲ್ಲೆ ತಿ.ನರಸೀಪುರ ತಾಲೂಕಿನ ಗರ್ಗೇಶ್ವರಿ ಬಳಿ ನಡೆದ ಅಪಘಾತದಲ್ಲಿ ಎಸ್ಪಿ ಕುಲದೀಪ್ ಕುಮಾರ್ ಜೈನ್ ಇದ್ದ ಸರಕಾರಿ ಕಾರು ಟಾಟಾ ಸುಮೋಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ರಭಸಕ್ಕೆ ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ. ಘಟನೆಯಲ್ಲಿ ಕುಲದೀಪ್ ಜೈನ್ ಪಾರಾಗಿದ್ದರೆ ಅವರ ಕಾರಿನ ಚಾಲಕನಿಗೆ ಗಾಯವಾಗಿದ್ದು ಆಸ್ಪತ್ರೆಗೆ ಸೇರಿಸಲಾಗಿದೆ. [ಉತ್ತರ ಪ್ರದೇಶದ ಗೆಲುವು ಬಿಜೆಪಿಗೇ ತಿರುಗು ಬಾಣವಾಗಲಿದೆ-ದೇವನೂರು]
ಇನ್ನು ಟಾಟಾ ಸುಮೋದಲ್ಲಿದ್ದ ಆರು ಮಂದಿ ಪ್ರಯಾಣಿಕರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಹೆಚ್ಚಿನ ಅನಾಹುತವೇನೂ ಸಂಭವಿಸಿಲ್ಲ. ಅಪಘಾತಕ್ಕೆ ಸಂಬಂಧಿಸಿದಂತೆ ತಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. [ಎಸಿಬಿ ಬಲೆಗೆ ಬಿದ್ದ ಚೆಸ್ಕಾಂ ಅಧಿಕಾರಿ]
Comments
English summary
Chamarajanagar Superintendent of Police Kuladeep Kumar Jain’s car got an accident in T Narisipur, Mysuru district. As a miracle, SP got no injuries in the horrible accident.
Story first published: Tuesday, March 14, 2017, 22:15 [IST]