ಬಗೆಹರಿದಿಲ್ಲ ಸಿಎಂ ಕ್ಷೇತ್ರದ ಬಿಸಿಯೂಟ ಸಮಸ್ಯೆ
ಮೈಸೂರು, ಡಿ. 3 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಓದಿದ ಕುಪ್ಪೇಗಾಲದ ಶಾಲೆಯ ಬಿಸಿಯೂಟದ ಸಮಸ್ಯೆ ಇನ್ನೂ ಬಗೆಹರಿದಿಲ್ಲ. 'ಇಂತಹ ಘಟನೆಗಳು ನನ್ನ ಕ್ಷೇತ್ರದಲ್ಲಿ ಮಾತ್ರವಲ್ಲ, ಎಲ್ಲಿಯೂ ನಡೆಯಬಾರದು. ಎರಡು ಗುಂಪಿನವರೊಂದಿಗೆ ಈ ಕುರಿತು ಮಾತನಾಡುತ್ತೇನೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದಾರೆ.
ಮಂಗಳವಾರ
ವಿವಿಧ
ಕಾರ್ಯಕ್ರಮಗಳಿಗಾಗಿ
ಸ್ವ
ಕ್ಷೇತ್ರ
ವರುಣಾಕ್ಕೆ
ಆಗಮಿಸಿದ್ದ
ಸಿಎಂ
ಸಿದ್ದರಾಮಯ್ಯ
ಅವರು,
ಕುಪ್ಪೇಗಾಲದ
ಸರ್ಕಾರಿ
ಹಿರಿಯ
ಪ್ರಾಥಮಿಕ
ಶಾಲೆಯ
ಬಿಸಿಯೂಟ
ವಿವಾದದ
ಬಗ್ಗೆ
ಮಾತನಾಡಿದರು.
ಇಂತಹ
ಘಟನೆ
ಎಲ್ಲಿಯೂ
ನಡೆಯಬಾರದು,
ಈ
ಬಗ್ಗೆ
ಮಾತುಕತೆ
ನಡೆಸುತ್ತೇನೆ
ಎಂದರು.
ಸಿದ್ದರಾಮಯ್ಯ ಅವರನ್ನು ಗ್ರಾಮದ ಕೆಲವು ಮುಖಂಡರು ಭೇಟಿ ಮಾಡಿ ಶಾಲೆಯ ಸಮಸ್ಯೆ ಬಗ್ಗೆ ಮಾತುಕತೆ ನಡೆಸಲು ಪ್ರಯತ್ನ ಮಾಡಿದರು. ಎಲ್ಲರೂ ಒಟ್ಟಾಗಿ ಹೋಗಿ ಗೊಂದಲ ಮಾಡಿಕೊಳ್ಳಬೇಡಿ ಎಂದು ಅವರನ್ನು ಕಳುಹಿಸಿದ ಸಿಎಂ, ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಘಟನೆ ಬಗ್ಗೆ ಮಾಹಿತಿ ಪಡೆದು ಕೆಲವು ಸೂಚನೆಗಳನ್ನು ನೀಡಿದರು.[ಸಿಎಂ ತವರು ಜಿಲ್ಲೆಯಲ್ಲಿ ಸಮಸ್ಯೆ ತಂದ ಬಿಸಿಯೂಟ]
ಸಮಸ್ಯೆ ಏನು : ಸಿಎಂ ಸಿದ್ದರಾಮಯ್ಯ ಅವರು ಓದಿದ ಕುಪ್ಪೇಗಾಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಲಿತ ಮಹಿಳೆಯೊಬ್ಬರು ಅಡುಗೆ ಸಹಾಯಕಿಯಾಗಿ ನೇಮಕಗೊಂಡಿದ್ದಾರೆ. ಇದರಿಂದಾಗಿ ಸವರ್ಣೀಯ ಮಕ್ಕಳು ಬಿಸಿಯೂಟ ಬಹಿಷ್ಕರಿಸಿದ್ದಾರೆ. ಕೆಲವು ಮಕ್ಕಳು ಶಾಲೆಗೆ ಬರುವುದನ್ನು ನಿಲ್ಲಿಸಿದ್ದಾರೆ. ಈ ಬಗ್ಗೆ ಕಳೆದ ಒಂದು ವಾರದಿಂದ ವಿವಾದವೆದ್ದಿದೆ.
ಶಾಲೆಗೆ ಮಕ್ಕಳು ಗೈರು : ಮಂಗಳವಾರವೂ ಕುಪ್ಪೇಗಾಲದ ಶಾಲೆಯಲ್ಲಿ ಸವರ್ಣೀಯ ಸಮುದಾಯದ ಬಹಳಷ್ಟು ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. ಶಾಲೆಗೆ ಬಂದಿದ್ದ ಕೆಲವು ವಿದ್ಯಾರ್ಥಿಗಳು ಬಿಸಿಯೂಟ ಮಾಡಲಿಲ್ಲ. ಶಾಲೆಯ ಒಟ್ಟು 150 ವಿದ್ಯಾರ್ಥಿಗಳಲ್ಲಿ 110 ಮಕ್ಕಳು ಮಾತ್ರ ಹಾಜರಾಗಿದ್ದರು.
ಕಾನೂನಿನಿಂದ ಸಮಸ್ಯೆ ಬಗೆಹರಿಯೋಲ್ಲ : ಸಿಎಂ ಜೊತೆಗೆ ಮೈಸೂರಿಗೆ ಆಗಮಿಸಿದ್ದ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಅವರು ಕುಪ್ಪೇಗಾಲದ ಸಮಸ್ಯೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಕಾನೂನಿನಿಂದ ಸಮಸ್ಯೆಯ ಬಗೆಹರಿಸಲು ಸಾಧ್ಯವಿಲ್ಲ. ಜನರಲ್ಲಿ ಅರಿವು ಮೂಡಿಸಬೇಕಾಗಿದೆ ಎಂದು ಹೇಳಿದ್ದಾರೆ.