ಮೈಸೂರು : ಎಟಿಎಂಗೆ ನುಗ್ಗಿ 2 ಲಕ್ಷ ದೋಚಿ ಪರಾರಿ
ಮೈಸೂರು, ಏ. 21 : ಪಿರಿಯಾಪಟ್ಟಣದಲ್ಲಿ ಬ್ಯಾಂಕ್ ಕಟ್ಟದಲ್ಲಿದ್ದ ಎಟಿಎಂಗೆ ನುಗ್ಗಿದ್ದ ಕಳ್ಳರು 2 ಲಕ್ಷ ಹಣವನ್ನು ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ. ಮೂವರು ಮುಸುಕುಧಾರಿಗಳ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸೋಮವಾರ
ರಾತ್ರಿ
ಪಿರಿಯಾಪಟ್ಟಣದ
ಪಂಚವಳ್ಳಿಯಲ್ಲಿರುವ
ಇಂಡಿಯನ್
ಓವರ್ಸಿಸ್
ಬ್ಯಾಂಕ್
ಎಟಿಎಂಗೆ
ನುಗ್ಗಿದ
ಕಳ್ಳರು
2
ಲಕ್ಷ
ಹಣ
ಮತ್ತು
ಹಣವಿರುವ
ಮತ್ತೊಂದು
ಪೆಟ್ಟಿಗೆಯೊಂದಿಗೆ
ಪರಾರಿಯಾಗಿದ್ದಾರೆ.
[ಹಣದ
ಜೊತೆ
ಎಟಿಎಂ
ವಾಹನ
ಅಪಹರಿಸಿದವರು
ಸಿಕ್ಕಿಬಿದ್ರು]
3 ರಿಂದ 4 ಜನರ ಗುಂಪು ಈ ದರೋಡೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಮೂವರು ಮುಸುಕುಧಾರಿಗಳು ಎಟಿಎಂಗೆ ನುಗ್ಗುವ ಮತ್ತು ಎಟಿಎಂ ಯಂತ್ರ ಜಖಂಗೊಳಿಸುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. [ಮಿತಿ ಮೀರಿದ ಎಟಿಎಂ ಬಳಕೆ ಕೈ ಕಚ್ಚಲಿದೆ]
ಬ್ಯಾಂಕ್ ಕಟ್ಟಡದಲ್ಲಿಯೇ ಎಟಿಎಂ ಇದೆ ಎಂಬ ಕಾರಣಕ್ಕೆ ಭದ್ರತಾ ಸಿಬ್ಬಂದಿಯನ್ನು ನಿಯೋಜನೆ ಮಾಡಿರಲಿಲ್ಲ. ಇದನ್ನು ಅರಿತ ಕಳ್ಳರು ಎರಡು ಲಕ್ಷ ಹಣವನ್ನು ದೋಚಿದ್ದಾರೆ. ಪಿರಿಯಾಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಬ್ಯಾಂಕ್ಗೆ ನುಗ್ಗಲು ಯತ್ನಿಸಿದ್ದರು : ಮೊದಲು ಕಳ್ಳರು ಬ್ಯಾಂಕ್ಗೆ ನುಗ್ಗಲು ಪ್ರಯತ್ನ ನಡೆಸಿದ್ದಾರೆ. ಬ್ಯಾಂಕ್ ಹಿಂಬದಿಯ ಕಿಟಕಿಗಳ ಸರಳುಗಳನ್ನು ಕಟ್ ಮಾಡಲು ಯತ್ನಿಸಿದ್ದಾರೆ. ಆದರೆ, ನಂತರ ಎಟಿಎಂಗೆ ನುಗ್ಗಿ ಅಲ್ಲಿರುವ ಹಣ ದೋಚಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.