ಮೈಸೂರಿನಲ್ಲಿ ಐಐಟಿ, ಸ್ಮೃತಿ ಇರಾನಿ ಭೇಟಿಯಾದ ಪ್ರತಾಪ್ ಸಿಂಹ
ಮೈಸೂರು, ಆಗಸ್ಟ್ 4 : ಕರ್ನಾಟಕದಲ್ಲಿ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ)ಯನ್ನು ಎಲ್ಲಿ ಸ್ಥಾಪಿಸಲಾಗುತ್ತದೆ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಮೈಸೂರಿನಲ್ಲಿ ಐಐಟಿ ಸ್ಥಾಪನೆ ಮಾಡಬೇಕು ಎಂದು ಸಂಸದರ ಪ್ರತಾಪ್ ಸಿಂಹ ಅವರು ಕೇಂದ್ರ ಸಚಿವರಿಗೆ ಮನವಿ ಮಾಡಿದ್ದಾರೆ.
ಮೈಸೂರು-ಕೊಡಗು
ಸಂಸದ
ಪ್ರತಾಪ್
ಸಿಂಹ
ಮತ್ತು
ಚಾಮರಾಜನಗರ
ಸಂಸದ
ಧ್ರುವ
ನಾರಾಯಣ
(ಕಾಂಗ್ರೆಸ್)
ಅವರು
ಸೋಮವಾರ
ಕೇಂದ್ರ
ಮಾನವ
ಸಂಪನ್ಮೂಲ
ಖಾತೆ
ಸಚಿವೆ
ಸ್ಮೃತಿ
ಇರಾನಿ
ಅವರನ್ನು
ಭೇಟಿ
ಮಾಡಿ
ಮೈಸೂರಿನಲ್ಲಿ
ಐಐಟಿ
ಸ್ಥಾಪಿಸುವಂತೆ
ಮನವಿ
ಮಾಡಿದರು.[ಮೈಸೂರಿನಲ್ಲಿ
ಐಐಟಿ
ಸ್ಥಾಪಿಸಿವಂತೆ
ಪ್ರಧಾನಿಗೆ
ಪ್ರತಾಪ್
ಸಿಂಹ
ಪತ್ರ]
ಮೈಸೂರು ನಗರದ ಸಮೀಪದ ತಾಂಡವಪುರದಲ್ಲಿ ಐಐಟಿ ಸ್ಥಾಪನೆಗಾಗಿ ಜಿಲ್ಲಾಡಳಿತ 499 ಎಕರೆ ಭೂಮಿಯನ್ನು ಗುರುತಿಸಿದೆ. ರಾಷ್ಟ್ರೀಯ ಹೆದ್ದಾರಿ, ರೈಲ್ವೆ ನಿಲ್ದಾಣ, ಮಂಡಕಹಳ್ಳಿ ವಿಮಾನ ನಿಲ್ದಾಣಕ್ಕೆ ಈ ಜಾಗ ಹತ್ತಿರವಾಗಿದೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ. [ಐಐಟಿ : 3 ಜಿಲ್ಲೆಗಳತ್ತ ಬೊಟ್ಟು ತೋರಿಸಿದ ಸಿದ್ದರಾಮಯ್ಯ]
ಹಿಂದೆಯೂ ಮೈಸೂರಿನಲ್ಲಿ ಐಐಟಿ ಸ್ಥಾಪನೆ ಮಾಡುವಂತೆ ಪ್ರತಾಪ್ ಸಿಂಹ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರಿಗೆ ಪತ್ರ ಬರೆದಿದ್ದರು. ಈಗ ಮತ್ತೊಮ್ಮೆ ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವಿ ಪತ್ರ ನೀಡಿದ್ದಾರೆ.[ಐಐಟಿಗಾಗಿ ನಡೆಸಿದ ರಾಯಚೂರು ಬಂದ್ ಯಶಸ್ವಿ]
ಅಂದಹಾಗೆ ರಾಜ್ಯದಲ್ಲಿ ಐಐಟಿಯನ್ನು ಸ್ಥಾಪಿಸುವ ಸಂಬಂಧ ರಾಯಚೂರು, ಹುಬ್ಬಳ್ಳಿ-ಧಾರವಾಡ ಮತ್ತು ಮೈಸೂರು ಜಿಲ್ಲೆಗಳ ಹೆಸರನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ಈ ಮೂರು ಸ್ಥಳಗಳಲ್ಲಿ ಎಲ್ಲಿ ಐಐಟಿ ಸ್ಥಾಪನೆಯಾಗಲಿದೆ? ಎಂಬುದು ಇನ್ನೂ ಅಂತಿಮಗೊಂಡಿಲ್ಲ.
ಅತ್ತ ರಾಯಚೂರಿನಲ್ಲಿ ಐಐಟಿ ಸ್ಥಾಪನೆ ಮಾಡಬೇಕು ಎಂಬ ಕೂಗು ಹೆಚ್ಚಾಗಿದೆ. ಇದಕ್ಕಾಗಿ ಜುಲೈ ತಿಂಗಳಿನಲ್ಲಿ ಒಂದಿ ದಿನದ ರಾಯಚೂರು ಬಂದ್ಗೂ ಕರೆ ನೀಡಲಾಗಿತ್ತು. ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ಸಂಸದರು ರಾಯಚೂರಿನಲ್ಲಿ ಐಐಟಿ ಸ್ಥಾಪನೆ ಮಾಡುವ ಪರವಾಗಿದ್ದಾರೆ.