ಮೈಸೂರು : ಬಿಜೆಪಿ ಕಾರ್ಯಕರ್ತನ ಕೊಲೆ, ಕೋಮು ಗಲಭೆ ಎಚ್ಚರಿಕೆ
ಮೈಸೂರು, ಮಾರ್ಚ್ 14 : ಮೈಸೂರಿನಲ್ಲಿ ಕೋಮು ಗಲಭೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. ಇಂದು ಬಿಜೆಪಿ ಕರೆ ನೀಡಿರುವ ಮೈಸೂರು ಬಂದ್ ಹಿನ್ನಲೆಯಲ್ಲಿ ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಭಾನುವಾರ
ಸಂಜೆ
ವಿಶ್ವ
ಹಿಂದೂಪರಿಷತ್
ಮತ್ತು
ಬಿಜೆಪಿ
ಕಾರ್ಯಕರ್ತ
ರಾಜು
(32)
ಎಂಬುವವರನ್ನು
ಉದಯಗಿರಿ
ಪೊಲೀಸ್
ಠಾಣೆ
ವ್ಯಾಪ್ತಿಯ
ಎಂ.ಜಿ.ರಸ್ತೆಯ
ವಿನಾಯಕ
ಟೀ
ಸ್ಟಾಲ್
ಮುಂಭಾಗದಲ್ಲಿ
ಮಚ್ಚಿನಿಂದ
ಹಲ್ಲೆ
ನಡೆಸಿ
ಕೊಲೆ
ಮಾಡಲಾಗಿತ್ತು.
[ಮೈಸೂರು
:
ಬಿಜೆಪಿ
ಕಾರ್ಯಕರ್ತನ
ಹತ್ಯೆ]
ಬಿಜೆಪಿ ಮತ್ತು ಹಿಂದೂ ಪರ ಸಂಘಟನೆಗಳು ರಾಜು ಅವರ ಹತ್ಯೆ ಖಂಡಿಸಿ ಸೋಮವಾರ ಮೈಸೂರು ಬಂದ್ಗೆ ಕರೆ ನೀಡಲಾಗಿದೆ. ಹತ್ಯೆಯ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಕೋಮು ಗಲಭೆ ಉಂಟಾಗಬಹುದು ಎಂದು ಗುಪ್ತಚರ ಇಲಾಖೆ ನಗರ ಪೊಲೀಸರಿಗೆ ಎಚ್ಚರಿಕೆ ರವಾನಿಸಿದೆ. ['ಹಿಂದೂಗಳು ಆತ್ಮ ರಕ್ಷಣೆಗೆ ಶಸ್ತ್ರ ಹಿಡಿಯಬೇಕಾದೀತು']
ಇಂದು
ಕರೆ
ನೀಡಿರುವ
ಬಂದ್
ಹಿನ್ನಲೆಯಲ್ಲಿ
ಮೈಸೂರಿನ
ಕೆಲವು
ಭಾಗಗಳಲ್ಲಿ
ಮುಂಜಾನೆ
ಕಲ್ಲು
ತೂರಾಟ
ನಡೆದಿದೆ.
ನಗರದಲ್ಲಿ
ಹೆಚ್ಚುವರಿ
ಬಂದೋಬಸ್ತ್
ಏರ್ಪಡಿಸಬೇಕೆಂದು
ಗುಪ್ತಚರ
ಇಲಾಖೆ
ನಗರ
ಪೊಲೀಸರಿಗೆ
ಸೂಚನೆ
ರವಾನಿಸಿದೆ.
[ಶಿಸ್ತಿನ
ಚಡ್ಡಿಯಿಂದ
ಪ್ಯಾಂಟಿಗೆ
ಬದಲಾಯಿತು
RSS
ಗಣವೇಷ]
ಮೈಸೂರು ನಗರ ಪೊಲೀಸರು ಸೆಕ್ಷನ್ 144 ಅನ್ವಯ ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಇಂದು ಬೆಳಗ್ಗೆ 6 ಗಂಟೆಯಿಂದ ರಾತ್ರಿ 12 ಗಂಟೆಯ ತನಕ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಸದ್ಯಕ್ಕೆ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪೊಲೀಸರು ಹೇಳಿದ್ದಾರೆ.
ಸಿಬಿಐ ತನಿಖೆ ಒತ್ತಾಯ : ಸ್ಥಳೀಯ ಪೊಲೀಸರು ಮೇಲೆ ನಮಗೆ ನಂಬಿಕೆ ಇಲ್ಲ. ರಾಜು ಅವರ ಕೊಲೆ ಪ್ರಕರಣದ ಬಗ್ಗೆ ಸಿಬಿಐ ತನಿಖೆಯಾಗಬೇಕು ಎಂದು ವಿಶ್ವಹಿಂದೂ ಪರಿಷತ್ ಮುಖಂಡರು ಒತ್ತಾಯಿಸುತ್ತಿದ್ದಾರೆ. ಸದ್ಯ, ಉದಯಗಿರಿ ಠಾಣೆ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದು, ಕೊಲೆಗೆ ಕಾರಣ ಏನೆಂದು? ಪತ್ತೆ ಹಚ್ಚುತ್ತಿದ್ದಾರೆ.
ಶೀಘ್ರ ತನಿಖೆಗೆ ಒತ್ತಾಯ : ರಾಜು ಹತ್ಯೆ ಪ್ರಕರಣದ ತನಿಖೆಯನ್ನು ಚುರುಕಿನಿಂದ ನಡೆಸಿ, ಆರೋಪಿಗಳನ್ನು ಬಂಧಿಸಬೇಕು ಎಂದು ಕರ್ನಾಟಕ ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಶಿ ಅವರು ಒತ್ತಾಯಿಸಿದ್ದಾರೆ.