ಶ್ರೀನಿವಾಸಪ್ರಸಾದ್ ರನ್ನು ಕೈಬಿಟ್ಟಿದ್ದಕ್ಕೆ ಮೈಸೂರಲ್ಲಿ ಆಕ್ರೋಶ
ಮೈಸೂರು, ಜೂನ್ 19: ನಂಜನಗೂಡು ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ, ಕಂದಾಯ ಸಚಿವರೂ ಆಗಿದ್ದ ಶ್ರೀನಿವಾಸ ಪ್ರಸಾದ್ ಅವರನ್ನು ಸಂಪುಟ ಪುನರ್ ರಚನೆ ಸಂದರ್ಭ ಕೈಬಿಟ್ಟಿದಕ್ಕೆ ಜಿಲ್ಲೆಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ.
ಈ ನಡುವೆ ಮಾಧ್ಯಮದ ಮುಂದೆ ಮಾತನಾಡಿದ ಶ್ರೀನಿವಾಸ ಪ್ರಸಾದ್ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಹರಿಹಾಯ್ದಿದ್ದಾರೆ. ಅಲ್ಲದೆ ಭಾವುಕರಾಗಿ ಕಣ್ಣೀರಿಟ್ಟ ಅವರು ಸಿದ್ದರಾಮಯ್ಯ ಎಲ್ಲವನ್ನು ಮರೆತಿದ್ದಾನೆ ಎಂದು ಏಕವಚನದಲ್ಲಿಯೇ ಹೇಳಿದ್ದಾರೆ.
ಜೆಡಿಎಸ್
ನಿಂದ
ಹೊರಬಂದಾಗ
ಅವರಿಗೆ
ಕಾಂಗ್ರೆಸ್ನಲ್ಲಿ
ಬೆಳೆಯಲು
ಸಹಾಯ
ಮಾಡಿದ್ದನ್ನು
ಮರೆತು
ಬಿಟ್ಟಿದ್ದಾರೆ.
ಯಾವ
ಕಾರಣಕ್ಕಾಗಿ
ನನ್ನನ್ನು
ಸಂಪುಟದಿಂದ
ಕೈಬಿಟ್ಟಿದ್ದಾರೆ
ಎಂಬುದೇ
ಅರ್ಥವಾಗಿಲ್ಲ.
ಆದರೆ
ಇದಕ್ಕೆಲ್ಲ
ಎಳ್ಳಷ್ಟೂ
ಹೆದರುವುದಿಲ್ಲ.
ಲಾಬಿ
ಮಾಡುವುದೂ
ಇಲ್ಲ.
ಸಿಎಂ
ಕ್ಷೇತ್ರದಲ್ಲಿ
ನನಗೆ
ಬೆಂಬಲಿಗರಿದ್ದಾರೆ.
ಅದನ್ನು
ಅವರು
ಮರೆತಿದ್ದಾರೆ.
ಮುಂದೆ ಸರ್ಕಾರದಿಂದ ದೂರವಿದ್ದು ತಕ್ಕ ಪಾಠ ಕಲಿಸುವ ಎಚ್ಚರಿಕೆಯನ್ನು ನೀಡಿದ್ದಾರೆ. ಮುಂದಿನ ನಿರ್ಧಾರದ ಬಗ್ಗೆ ನಾಳೆ ಪ್ರಕಟಿಸುವುದಾಗಿ ಹೇಳಿದರಲ್ಲದೆ ಕಾಂಗ್ರೆಸ್ ನವರು ಮುಂದೆ ಅನುಭವಿಸುತ್ತಾರೆ ಎಂದು ನೊಂದು ನುಡಿದಿದ್ದಾರೆ. ಇನ್ನೊಂದು ವರ್ಷದಲ್ಲಿ ಚುನಾವಣೆ ಬರುತಿದ್ದು ನಾನೇನು ಎಂಬುದನ್ನು ತಿಳಿಸುವುದಾಗಿಯೂ ಹೇಳಿದರು.
ಈ ನಡುವೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಅವರು ಪ್ರಧಾನಿ ನರೇಂದ್ರಮೋದಿ ಅವರ ಯೋಜನೆಯನ್ನು ಹೊಗಳುವ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದ್ದಾರೆ. ಒಟ್ಟಾರೆ ಶ್ರೀನಿವಾಸ ಪ್ರಸಾದ್ ಅವರು ಸಿದ್ದರಾಮಯ್ಯ ವಿರುದ್ಧ ಸಿಟ್ಟಾಗಿದ್ದು ಮುಂದಿನ ದಿನಗಳಲ್ಲಿ ಇದು ಯಾವ ರೀತಿಯ ಬೆಳವಣಿಗೆಗೆ ಕಾರಣವಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಈಗಾಗಲೇ ಸಿಎಂ ತವರು ಕ್ಷೇತ್ರದಲ್ಲಿ ಕಾಂಗ್ರೆಸ್ ನೆಲಕಚ್ಚಿದ್ದು ಮುಂದಿನ ದಿನಗಳಲ್ಲಿ ಭಾರೀ ಬೆಲೆ ತೆರಬೇಕಾದ ಪರಿಸ್ಥಿತಿ ಬರುವುದಂತು ಖಚಿತವಾಗಿದೆ.
ನಂಜನಗೂಡು, ಎಚ್.ಡಿ.ಕೋಟೆ, ಸೇರಿದಂತೆ ಹಲವೆಡೆ ಶ್ರೀನಿವಾಸಪ್ರಸಾದ್ ಬೆಂಬಲಿಗರು ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ. ದಲಿತ ಪರ ಸಂಘಟನೆಗಳು ಕೂಡ ಬೀದಿಗಿಳಿದಿವೆ. ಒಟ್ಟಾರೆ ಪರಿಸ್ಥಿತಿ ವಿಕೋಪಕ್ಕೆ ತೆರಳುತ್ತಿದ್ದು ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.