ಬಿಜೆಪಿ ಕಾರ್ಯಕರ್ತ ರಾಜು ಹತ್ಯೆ, ಸರ್ಕಾರಕ್ಕೆ 15 ದಿನದ ಗಡುವು
ಮೈಸೂರು, ಏಪ್ರಿಲ್ 04 : ವಿಶ್ವಹಿಂದೂ ಪರಿಷತ್ ಮತ್ತು ಬಿಜೆಪಿ ಕಾರ್ಯಕರ್ತ ರಾಜು ಹತ್ಯೆ ಪ್ರಕರಣದ ಆರೋಪಿಗಳನ್ನು 15 ದಿನಗಳಲ್ಲಿ ಬಂಧಿಸುವಂತೆ ಬಿಜೆಪಿ ಕರ್ನಾಟಕ ಸರ್ಕಾರಕ್ಕೆ ಗಡುವು ನೀಡಿದೆ. ರಾಜು ಕುಟುಂಬಕ್ಕೆ 25 ಲಕ್ಷ ಪರಿಹಾರವನ್ನು ನೀಡುವಂತೆ ಒತ್ತಾಯಿಸಿದೆ.
ರಾಜು
ಹತ್ಯೆ
ಪ್ರಕರಣ
ಖಂಡಿಸಿ
ಮೈಸೂರಿನಲ್ಲಿ
ಬಿಜೆಪಿ
ನಾಯಕರು
ಸೋಮವಾರ
ಬೃಹತ್
ಪ್ರತಿಭಟನೆ
ನಡೆಸಿದರು.
ಕೋಟೆ
ಆಂಜನೇಯ
ಸ್ವಾಮಿ
ದೇವಾಲಯದ
ಆವರಣದಲ್ಲಿ
ನಡೆದ
ಪ್ರತಿಭಟನೆಯಲ್ಲಿ
ಹಲವು
ಬಿಜೆಪಿ
ನಾಯಕರು
ಪಾಲ್ಗೊಂಡಿದ್ದರು.
['ರಾಜು
ಕೊಲೆ
ಪ್ರಕರಣ,
ನ್ಯಾಯಾಂಗ
ತನಿಖೆ
ಅಗತ್ಯವಿಲ್ಲ']
ಪ್ರತಿಭಟನೆಯಲ್ಲಿ
ಮಾತನಾಡಿದ
ಬಿಜೆಪಿ
ನಾಯಕರು
15
ದಿನಗಳಲ್ಲಿ
ರಾಜು
ಅವರ
ಹತ್ಯೆ
ಪ್ರಕರಣದ
ಆರೋಪಿಗಳನ್ನು
ಬಂಧಿಸಬೇಕು
ಎಂದು
ಗಡುವು
ನೀಡಿದರು.
ಇಲ್ಲವಾದಲ್ಲಿ
ಮುಂದಿನ
ದಿನಗಳಲ್ಲಿ
ಹೋರಾಟ
ತೀವ್ರಗೊಳಿಸಲಾಗುತ್ತದೆ
ಎಂದು
ಎಚ್ಚರಿಕೆ
ನೀಡಿದರು.
[ಕರ್ನಾಟಕದಲ್ಲಿ
ಹಿಂದೂಗಳು
ಸುರಕ್ಷಿತವಾಗಿಲ್ಲ:
ಪ್ರತಾಪ್
ಸಿಂಹ]
ಹಿಂದೂ ವಿರೋಧಿಗಳನ್ನು ರಕ್ಷಿಸುತ್ತಿದೆ : ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅವರು, 'ಮಡಿಕೇರಿಯ ಕುಟ್ಟಪ್ಪ ಕೊಲೆ ಪ್ರಕರಣದ ತನಿಖೆಯನ್ನು ಸರ್ಕಾರ ಬಹಿರಂಗಪಡಿಸಲಿಲ್ಲ. ಹಿಂದೂಗಳ ಹತ್ಯೆಯಾದಾಗ ಸರ್ಕಾರ ಮೌನವಾಗಿರುತ್ತದೆ. ಸರ್ಕಾರ ಹಿಂದೂ ವಿರೋಧಿಯಾಗಿದೆ' ಎಂದು ವಾಗ್ದಾಳಿ ನಡೆಸಿದರು. [ಮೈಸೂರಲ್ಲಿ ರಾಜು ಹತ್ಯೆ : ಯಾರು, ಏನು ಹೇಳಿದರು?]
ಪ್ರತಿಭಟನೆಯಲ್ಲಿ
ಮೈಸೂರು-ಕೊಡಗು
ಸಂಸದ
ಪ್ರತಾಪ್
ಸಿಂಹ,
ಮಾಜಿ
ಸಚಿವ
ಎಸ್.ಎ.ರಾಮದಾಸ್,
ಸಿ.ಟಿ.ರವಿ
ಮುಂತಾದವರು
ಪಾಲ್ಗೊಂಡಿದ್ದರು.
ಮಾರ್ಚ್ 13ರ ಭಾನುವಾರ ಸಂಜೆ ಉದಯಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿಶ್ವಹಿಂದೂಪರಿಷತ್, ಬಿಜೆಪಿ ಕಾರ್ಯಕರ್ತ ರಾಜು ಅವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ರಾಜು ಹತ್ಯೆ ಖಂಡಿಸಿ ಸೋಮವಾರ ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳು ಕರೆ ನೀಡಿದ್ದ ಬಂದ್ ವೇಳೆ ಹಿಂಸಾಚಾರ ನಡೆದಿತ್ತು.