ಮೈಸೂರಲ್ಲಿ ಬಿಜೆಪಿ ಕಾರ್ಯಕರ್ತನ ಹತ್ಯೆ, ಇಂದು ಬಂದ್ ಕರೆ
ಮೈಸೂರು, ಮಾರ್ಚ್ 14 : ವಿಶ್ವ ಹಿಂದೂಪರಿಷತ್ ಮತ್ತು ಬಿಜೆಪಿ ಕಾರ್ಯಕರ್ತ ರಾಜು ಎಂಬುವವರನ್ನು ಮೈಸೂರಿನಲ್ಲಿ ಭೀಕರವಾಗಿ ಕೊಲೆ ಮಾಡಲಾಗಿದೆ. ರಾಜು ಅವರ ಹತ್ಯೆ ಖಂಡಿಸಿ ಹಿಂದೂ ಪರ ಸಂಘಟನೆಗಳು ಸೋಮವಾರ ಮೈಸೂರು ಬಂದ್ಗೆ ಕರೆ ನೀಡಿವೆ.
ಭಾನುವಾರ
ಸಂಜೆ
ಕ್ಯಾತಮಾರನಹಳ್ಳಿ
ನಿವಾಸಿ
ರಾಜು
(32)
ಅವರ
ಮೇಲೆ
ಎಂ.ಜಿ.ರಸ್ತೆಯ
ವಿನಾಯಕ
ಟೀ
ಸ್ಟಾಲ್
ಮುಂಭಾಗದಲ್ಲಿ
ಮಚ್ಚಿನಿಂದ
ಹಲ್ಲೆ
ನಡೆಸಲಾಗಿದೆ.
ಗಂಭೀರವಾಗಿ
ಗಾಯಗೊಂಡಿದ್ದ
ಅವರನ್ನು
ಕೆ.ಆರ್.ಆಸ್ಪತ್ರೆಗೆ
ದಾಖಲು
ಮಾಡಲಾಯಿತು.
ಆದರೆ,
ಚಿಕಿತ್ಸೆ
ಫಲಕಾರಿಯಾಗದೆ
ಅವರು
ಮೃತಪಟ್ಟಿದ್ದಾರೆ.
[ಮೂಡಬಿದಿರೆಯಲ್ಲಿ
ಹಿಂದೂ
ಸಂಘಟನೆ
ಮುಖಂಡನ
ಕೊಲೆ]
ವಿಶ್ವಹಿಂದೂ
ಪರಿಷತ್
ಕಾರ್ಯಕರ್ತರಾಗಿದ್ದ
ರಾಜು
ಅವರು
ಬಿಜೆಪಿಯ
ಸದಸ್ಯರೂ
ಆಗಿದ್ದರು.
ವಿದ್ಯುತ್
ಗುತ್ತಿಗೆದಾರರಾಗಿ
ಕೆಲಸ
ಮಾಡುತ್ತಿದ್ದ
ಅವರು,
ಸ್ನೇಹಿತರನ್ನು
ಭೇಟಿ
ಮಾಡಲು
ಜಯಕುಮಾರ್
ಅವರ
ಜೊತೆ
ಬಂದಿದ್ದರು.
ಸಂಜೆ
5
ಗಂಟೆ
ಸುಮಾರಿಗೆ
ಚಹಾ
ಸೇವಿಸುತ್ತಿದ್ದಾಗ
ದ್ವಿಚಕ್ರ
ವಾಹನದಲ್ಲಿ
ಬಂದ
ದುಷ್ಕರ್ಮಿಗಳು
ಅವರ
ಮೇಲೆ
ಹಲ್ಲೆ
ನಡೆಸಿ
ಪರಾರಿಯಾಗಿದ್ದಾರೆ.
[ಹಿಂದೂ
ಸಂಘಟನೆಯಲ್ಲಿ
ತೊಡಗಿಕೊಂಡಿದ್ದಕ್ಕೆ
ಪ್ರಶಾಂತ್
ಹತ್ಯೆ]
Today we lost our sincere worker Raju, who stopped the illegal construction of a masjid in Kyatamaranahalli (Mysuru) in a day light murder. Heading back to Mys. Support Mys bandh tmrw
Posted by Pratap Simha onSunday, March 13, 2016
ರಾಜು ಅವರ ಕೊಲೆ ವಿಚಾರ ತಿಳಿಯುತ್ತಿದ್ದಂತೆ ಉದಯಗಿರಿ, ಕ್ಯಾತಮಾರನಹಳ್ಳಿ ಸೇರಿದಂತೆ ನಗರದ ಕೆಲವು ಪ್ರದೇಶಗಳಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಕೆ.ಆರ್.ಆಸ್ಪತ್ರೆಯ ಶವಗಾರದ ಬಳಿ ಬಿಜೆಪಿ ಕಾರ್ಯಕರ್ತರು ದುಷ್ಕರ್ಮಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.['ಹಿಂದೂಗಳು ಆತ್ಮ ರಕ್ಷಣೆಗೆ ಶಸ್ತ್ರ ಹಿಡಿಯಬೇಕಾದೀತು']
ಉದಯಗಿರಿ ಠಾಣೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ದುಷ್ಕರ್ಮಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು ರಾಜು ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ.
ಇಂದು ಬಂದ್ ಕರೆ : ರಾಜು ಕೊಲೆ ಖಂಡಿಸಿ ಸೋಮವಾರ ಬಿಜೆಪಿ ಮತ್ತು ಹಿಂದೂ ಪರ ಸಂಘಟನೆಗಳು ಮೈಸೂರು ಬಂದ್ಗೆ ಕರೆ ನೀಡಿವೆ. ಬಂದ್ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಮೈಸೂರು ನಗರ ಪೊಲೀಸರು ಬೆಳಗ್ಗೆ 6 ಗಂಟೆಯಿಂದ ರಾತ್ರಿ 12 ಗಂಟೆಯ ತನಕ ಸೆಕ್ಷನ್ 144 ಅನ್ವಯ ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.