ಮೈಸೂರಿನಲ್ಲಿ ಮೇ 1ರಿಂದ ಸೇನಾ ನೇಮಕಾತಿ
ಮೈಸೂರು, ಏಪ್ರಿಲ್ 19 : ಮಂಗಳೂರು ಸೇನಾ ನೇಮಕಾತಿ ಕಾರ್ಯಾಲಯ ಮೇ 1 ರಿಂದ 10ರ ತನಕ ಮೈಸೂರಿನಲ್ಲಿ ಸೇನಾ ನೇಮಕಾತಿ ಹಮ್ಮಿಕೊಂಡಿದೆ. ಕೊಪ್ಪಳ ಹಾಗೂ ಬಾಗಲಕೋಟೆ ಜಿಲ್ಲೆಯ ಅಭ್ಯರ್ಥಿಗಳು ಇವುಗಳಲ್ಲಿ ಪಾಲ್ಗೊಳ್ಳಬಹುದಾಗಿದೆ.
ಮೈಸೂರಿನ
ಚಾಮುಂಡಿ
ವಿಹಾರ್
ಸ್ಟೇಡಿಯಂನಲ್ಲಿ
ನೇಮಕಾತಿ
ನಡೆಯಲಿದೆ.
ಸೈನಿಕ
ಸಾಮಾನ್ಯ
ಕರ್ತವ್ಯ,
ಸೈನಿಕ
ಲಿಪಿಕ/ಉಗ್ರಾಣ
ಪಾಲಕ
ತಾಂತ್ರಿಕ,
ಸೈನಿಕ
ತಾಂತ್ರಿಕ
(ರಾಜ್ಯದ
ಎಲ್ಲಾ
ಜಿಲ್ಲೆಯವರಿಗೆ)
ಸೈನಿಕ
ಟ್ರೇಡ್ಸ್ಮನ್
ಹುದ್ದೆಗಳಿಗೆ
ನೇಮಕಾತಿ
ಮಾಡಿಕೊಳ್ಳಲಾಗುತ್ತದೆ.
[806
ಹುದ್ದೆಗೆ
ಅರ್ಜಿ
ಆಹ್ವಾನಿಸಿದ
KPSC]
ಮಾರ್ಚ್ 7 ರಿಂದ ಏ.20 ರೊಳಗಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಮಾತ್ರ ನೇಮಕಾತಿಗೆ ಹಾಜರಾಗಬೇಕಾಗಿದೆ. ಹೆಚ್ಚಿನ ಮಾಹಿತಿಗೆ ಉಪನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಬಾಗಲಕೋಟೆ ಇವರನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ : 08354-235434. [72 ವಲಯ ಅರಣ್ಯಾಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನ]
ಕೊಪ್ಪಳದಲ್ಲಿ ಕೆಲಸ ಖಾಲಿ ಇದೆ : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಾಮಾಜಿಕ ಪರಿಶೋಧನಾ ನಿರ್ದೇಶನಾಲಯದ ವ್ಯಾಪ್ತಿಯ ಜಿಲ್ಲಾ ಮಟ್ಟದಲ್ಲಿ ಮಹಾತ್ಮಾಗಾಂಧಿ ನರೇಗಾ ಯೋಜನೆಯಡಿ ಜಿಲ್ಲಾ ಸಾಮಾಜಿಕ ಪರಿಶೋಧನಾ ಸಂಯೋಜಕರನ್ನು 1 ವರ್ಷದ ಅವಧಿಗೆ ಗುತ್ತಿಗೆ ಆಧಾರದಲ್ಲಿ ಸೇವೆ ಪಡೆಯಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. [ಬೆಂಗಳೂರು : ದೂರದರ್ಶನ ಕೇಂದ್ರದಲ್ಲಿ ಕೆಲಸ ಖಾಲಿ ಇದೆ]
ಕೊಪ್ಪಳ ಜಿಲ್ಲೆಗೆ ಜಿಲ್ಲಾ ಸಾಮಾಜಿಕ ಪರಿಶೋಧನಾ ಸಂಯೋಜಕರ 1 ಹುದ್ದೆ ಇದ್ದು, ವಯೋಮಿತಿ 18 ರಿಂದ 35 ವರ್ಷದೊಳಗಿರಬೇಕು. ಪದವಿಪೂರ್ವ ಶಿಕ್ಷಣ ಮತ್ತು ಕಂಪ್ಯೂಟರ್ ಬಳಕೆ ಬಗ್ಗೆ ಜ್ಞಾನವಿರಬೇಕು. ಸಾಮಾಜಿಕ ಪರಿಶಿಶೋಧನೆ ನಿರ್ವಹಿಸಿದ, ಸ್ವಯಂ ಸೇವಾ ಸಂಘ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದವರಿಗೆ ಆದ್ಯತೆ ಇರುತ್ತದೆ. ಪ.ಜಾತಿ, ಪ.ಪಂಗಡ, ಅಲ್ಪಸಂಖ್ಯಾತರು, ಅಂಗವಿಕಲರು, ಮಹಿಳೆಯರಿಗೆ ಆಯ್ಕೆಯಲ್ಲಿ ಆದ್ಯತೆ ಇರುತ್ತದೆ.
ಅಭ್ಯರ್ಥಿಗಳನ್ನು ಸಂದರ್ಶನದಲ್ಲಿ ಪಡೆಯುವ ಅಂಕಗಳು, ವಿದ್ಯಾರ್ಹತೆ, ಅನುಭವದ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ಸಂಭಾವನೆ ರೂ. 20000. ಅರ್ಜಿ ನಮೂನೆಯನ್ನು www.koppal.nic.in ವೆಬ್ಸೈಟ್ನಿಂದ ಡೌನ್ಲೋಡ್ ಮಾಡಿಕೊಂಡು, ಭರ್ತಿ ಮಾಡಿದ ಅರ್ಜಿ ಸಲ್ಲಿಸಲು ಮೇ. 10 ಕೊನೆಯ ದಿನವಾಗಿರುತ್ತದೆ.