'ಕೆಪಿಎಸ್ಸಿ ಅಧ್ಯಕ್ಷರಾಗಲು ಶ್ಯಾಂ ಭಟ್ ಅರ್ಹ ವ್ಯಕ್ತಿಯಲ್ಲ'
ಮೈಸೂರು, ಮೇ 20 : ಬಿಡಿಎ ಆಯುಕ್ತ ಶ್ಯಾಂ ಭಟ್ ಅವರನ್ನು ಕೆಪಿಎಸ್ಸಿ ಅಧ್ಯಕ್ಷರಾಗಿ ನೇಮಕ ಮಾಡುವುದಕ್ಕೆ ಎಸಿಐಸಿಎಂ ವಿರೋಧ ವ್ಯಕ್ತಪಡಿಸಿದೆ. ಶ್ಯಾಂ ಭಟ್ ನೇಮಕ ಮಾಡಿದರೆ ಸರ್ಕಾರಕ್ಕೆ ಮುಜುಗರ ಉಂಟಾಗಲಿದೆ ಎಂದು ವೇದಿಕೆ ಹೇಳಿದೆ.
ಮೈಸೂರಿನಲ್ಲಿ
ಶುಕ್ರವಾರ
ಪತ್ರಿಕಾಗೋಷ್ಠಿ
ನಡೆಸಿದ
ಪ್ರಜ್ಞಾವಂತ
ಮತ್ತು
ಕಾಳಜಿಯುಳ್ಳ
ನಾಗರಿಕರ
ವೇದಿಕೆಯ
(ಎಸಿಐಸಿಎಂ)
ಎಂ.
ಲಕ್ಷ್ಮಣ್
ಅವರು,
'ಕರ್ನಾಟಕ
ಲೋಕಸೇವಾ
ಆಯೋಗ
(ಕೆಪಿಎಸ್ಸಿ)
ಗೆ
ಶ್ಯಾಂ
ಭಟ್
ಅವರನ್ನು
ಅಧ್ಯಕ್ಷರನ್ನಾಗಿ
ಮಾಡಬಾರದು
ಎಂದು
ಒತ್ತಾಯಿಸಿದರು.
[KPSC
ಅಧ್ಯಕ್ಷ
ಹುದ್ದೆಗೆ
ಶ್ಯಾಂ
ಭಟ್
ಹೆಸರು]
'ಕೆಪಿಎಸ್ಸಿ ಅಧ್ಯಕ್ಷರಾಗಲು ಶ್ಯಾಂ ಭಟ್ ಅರ್ಹ ವ್ಯಕ್ತಿಯಲ್ಲ. ಅವರನ್ನು ಬಿಡಿಎ ಆಯುಕ್ತರನ್ನಾಗಿ ಮಾಡಿದ್ದರಿಂದಲೇ ಸರ್ಕಾರಕ್ಕೆ ಮುಜುಗರವಾಗಿದೆ. ಯಾರೋ ಸಿದ್ದರಾಮಯ್ಯ ಅವರ ದಾರಿ ತಪ್ಪಿಸಿ ಶ್ಯಾಂ ಭಟ್ ಅವರನ್ನು ನೇಮಕ ಮಾಡುವಂತೆ ಒತ್ತಡ ಹಾಕಿದ್ದಾರೆ' ಎಂದು ಲಕ್ಷ್ಮಣ್ ದೂರಿದರು. [ಸರ್ಕಾರ, ರಾಜಭವನದ ನಡುವೆ ಕೆಪಿಎಸ್ ಸಿ ಗುದ್ದಾಟ]
'ಶ್ಯಾಂ
ಭಟ್
ಅವರು
ವಿವಾದದಿಂದ
ಮುಕ್ತವಾಗಿಲ್ಲ.
ಅರ್ಕಾವತಿ
ಬಡಾವಣೆ
ಟಿನೋಟಿಫಿಕೇಶನ್
ವಿಚಾರದಲ್ಲಿ
ರಿಯಲ್
ಎಸ್ಟೆಟ್
ಕಂಪನಿಗಳ
ಪರವಾಗಿ
ಕೆಲಸ
ಮಾಡಿದ್ದಾರೆ
ಎಂಬ
ಆರೋಪವಿದೆ.
ಇಂತಹ
ವ್ಯಕ್ತಿಯನ್ನು
ಕೆಪಿಎಸ್ಸಿಗೆ
ನೇಮಕ
ಮಾಡಬಾರದು'
ಎಂದು
ಲಕ್ಷ್ಮಣ್
ಒತ್ತಾಯಿಸಿದರು.
ಸಿದ್ದರಾಮಯ್ಯಗೆ ಪತ್ರ : ಕೆಪಿಎಸ್ಸಿ ಅಧ್ಯಕ್ಷ ಹುದ್ದೆಗೆ ಸರ್ಕಾರ ಶ್ಯಾಂ ಭಟ್ ಅವರ ಹೆಸರನ್ನು ಅಂತಿಮಗೊಳಿಸಿದೆ. ಈ ಕುರಿತ ಶಿಫಾರಸು ಪತ್ರವನ್ನು ರಾಜ್ಯಪಾಲ ವಜುಭಾಯಿ ವಾಲಾ ಅವರ ಒಪ್ಪಿಗೆಗಾಗಿ ಕಳುಹಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ, ಎಸಿಐಸಿಎಂ ಶ್ಯಾಂ ಭಟ್ ಹೆಸರನ್ನು ಕೈಬಿಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದೆ.