ಮಂಡ್ಯದಲ್ಲಿ ಮಗಳ ಮೇಲೆ ಅತ್ಯಾಚಾರ: ದೊಡ್ಡಪ್ಪ ಬಂಧನ
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಗೊಲ್ಲರ ದೊಡ್ಡಿ ಗ್ರಾಮದ ನಿವಾಸಿ ರಾಮಯ್ಯ (55) ತನ್ನ ಕಿರಿಯ ಸಹೋದರನ ಪುತ್ರಿಯ ಅತ್ಯಾಚಾರವೆಸಗಿ, ಆಕೆ ಗರ್ಭವತಿಯಾಗುವಂತೆ ಮಾಡಿದ್ದಾನೆ.
ಮೈಸೂರು, ಮಾರ್ಚ್ 27 : ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ದೊಡ್ಡಪ್ಪನೇ ಅತ್ಯಾಚಾರವೆಸಗಿ ಆಕೆ ಗರ್ಭವತಿಯಾಗಲು ಕಾರಣನಾಗಿದ್ದು, ಇದೀಗ ಆತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಲಗೂರು ಪೊಲೀಸ್ ಠಾಣಾ ವ್ಯಾಪ್ತಿಯ ಗೊಲ್ಲರ ದೊಡ್ಡಿ ಗ್ರಾಮದ ನಿವಾಸಿ ರಾಮಯ್ಯ (55) ಬಂಧಿತ ಆರೋಪಿ. ಈತ ತನ್ನ ಕಿರಿಯ ಸಹೋದರನ ಪುತ್ರಿಯನ್ನು ಪುಸಲಾಯಿಸಿ ಕರೆದುಕೊಂಡು ಹೋಗಿ ತನ್ನ ಮನೆಯಲ್ಲಿ ಅತ್ಯಾಚಾರ ನಡೆಸಿದ್ದ ಎಂಬ ಆರೋಪ ಕೇಳಿ ಬಂದಿತ್ತು.
ಇದರಿಂದ ಬಾಲಕಿ ಗರ್ಭವತಿಯಾಗಿದ್ದಳು. ಪೋಷಕರಿಗೆ ವಿಚಾರ ತಡವಾಗಿ ತಿಳಿದಿತ್ತು. ಬಾಲಕಿ ಗರ್ಭಿಣಿಯಾಗಿ 5 ತಿಂಗಳಾಗಿದ್ದು, ಮೊನ್ನೆಯಷ್ಟೇ ಹೊಟ್ಟೆನೋವು ಬಂದು ಗರ್ಭಪಾತವಾಗಿತ್ತು. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಯನ್ನೂ ನೀಡಲಾಗಿತ್ತು.[ಮೈಸೂರು: ಮಗಳನ್ನು ಅಪಹರಿಸುತ್ತೇವೆ ಎಂದಿದ್ದಕ್ಕೆ ತಂದೆ ಆತ್ಮಹತ್ಯೆ]
ತನ್ನ ಈ ಸ್ಥಿತಿಗೆ ದೊಡ್ಡಪ್ಪನೇ ಕಾರಣ ಎಂದು ಬಾಲಕಿ ಪೊಲೀಸರಿಗೆ ತಿಳಿಸಿದ್ದಳು. ಬಾಲಕಿಯ ಹೇಳಿಕೆಯನ್ನಾಧರಿಸಿ ಆರೋಪಿ ರಾಮಯ್ಯನನ್ನು ಹಲಗೂರು ಪೊಲೀಸರು ಪೋಸ್ಕೋ ಕಾಯಿದೆಯಡಿ ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಸಂಶಯಾಸ್ಪದವಾಗಿ
ಮಹಿಳೆ
ಸಾವು
ಮಹಿಳೆಯೋರ್ವಳು
ಸಂಶಯಾಸ್ಪದವಾಗಿ
ಸಾವನ್ನಪ್ಪಿದ್ದು,
ಆಕೆಯ
ಪತಿ
ಮನೆಯವರು
ಆಕೆ
ನೇಣಿಗೆ
ಶರಣಾಗಿದ್ದಾಳೆ
ಎಂದು
ದೂರು
ದಾಖಲಿಸಿದ
ಘಟನೆ
ಮೈಸೂರಿನಲ್ಲಿ
ನಡೆದಿದೆ.[ಹುಣಸೂರು
ಬಳಿ
ಭೀಕರ
ಅಪಘಾತ,
ಐವರ
ಸಾವು]
ಮೃತಳನ್ನು ಹಾರೋಹಳ್ಳಿ ನಿವಾಸಿ ಸೋಮು ಎಂಬವರ ಪತ್ನಿ ಮೇಘನ (21) ಎಂದು ಗುರುತಿಸಲಾಗಿದೆ. ಕಳೆದ 9 ತಿಂಗಳ ಹಿಂದೆ ಹಾರೋಹಳ್ಳಿ ಗ್ರಾಮಪಂಚಾಯತ್ ಅಧ್ಯಕ್ಷ ಮಹದೇವಸ್ವಾಮಿ ಅವರ ಪುತ್ರಿ ಮೇಘನ ಹಾಗೂ ಅದೇ ಗ್ರಾಮದ ಸುಧಾಮಣಿ ಈರಣ್ಣ ದಂಪತಿಯ ಪುತ್ರ ಸೋಮು ಪರಸ್ಪರ ಪ್ರೀತಿಸಿ ವಿವಾಹವಾಗಿದ್ದರು.
ಅನ್ಯೋನ್ಯವಾಗಿಯೇ ಇದ್ದ ದಂಪತಿಗಳ ಸಂಸಾರದಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು ಎನ್ನಲಾಗಿದೆ. ಆಕೆ ತನ್ನ ಕೋಣೆಯಲ್ಲಿ ನೇಣಿಗೆ ಶರಣಾಗಿದ್ದಾಳೆ ಎಂದು ಆಕೆಯ ಪತಿ ತಿಳಿಸಿದ್ದಾರೆ. ಆದರೆ ಮೇಘನ ಪೋಷಕರು ಆಕೆಯ ಪತಿ ಹಾಗೂ ಕುಟುಂಬದವರು ಸೇರಿ ಹತ್ಯೆಗೈದಿದ್ದಾರೆ ಎಂದು ದೂರಿದ್ದಾರೆ.
ಜಯಪುರ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕೆ.ಆರ್.ಆಸ್ಪತ್ರೆಗೆ ರವಾನಿಸಲಾಗಿದೆ. ಜಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕೊಲೆ
ಸಂಚು
ಹಾಕಿದ್ದ
ನಾಲ್ವರ
ಬಂಧನ
ಮೈಸೂರು
ಮೇಟಗಳ್ಳಿ
ಇಂಡಸ್ಟ್ರಿಯಲ್
ಜಿ.ಟಿ.ಟಿ.ಸಿ
ಬಳಿ
ಇರುವ
ಅರಳಿಮರದ
ಬಳಿ
ಡಕಾಯಿತಿ
ಹಾಗೂ
ಕೊಲೆ
ಸಂಚು
ನಡೆಸಲು
ಹೊಂಚು
ಹಾಕಿ
ಕಾರಿನಲ್ಲಿ
ಕುಳಿತಿದ್ದ
ನಾಲ್ವರನ್ನು
ಮೈಸೂರು
ಸಿಸಿಬಿ
ಪೊಲೀಸರು
ಬಂಧಿಸುವಲ್ಲಿ
ಯಶಸ್ವಿಯಾಗಿದ್ದಾರೆ.[ಮೈಸೂರಿನಲ್ಲಿ
ಚಿಕನ್
ಸಾರಿನ
ಪಾತ್ರೆಯಲ್ಲಿ
ಬಿದ್ದು
ವ್ಯಕ್ತಿ
ಸಾವು]
ಬಂಧಿತರನ್ನು ಮಂಡ್ಯಜಿಲ್ಲೆ ಮಳವಳ್ಳಿ ತಾಲೂಕಿನ ನಾಗಲಿಂಗಸ್ವಾಮಿ(35), ತಿಪಟೂರಿನ ರಾಘವೇಂದ್ರ ( 32), ಕೆ.ಆರ್.ನಗರದ ಸುಬ್ರಮಣಿ (48), ಚಂದಗಾಲ ನಿವಾಸಿ ಬಸವರಾಜು(30) ಎಂದು ಗುರುತಿಸಲಾಗಿದೆ. ಬಂಧಿತರು ಬೆಂಗಳೂರಿನ ನವೀನ್ ಎಂಬವರನ್ನು ಕೊಲೆ ಮಾಡಲು ಮೈಸೂರಿನ ಕೇಂದ್ರ ಕಾರಾಗೃಹದಲ್ಲಿರುವ ಬಸವರಾಜು ಎಂಬವನಿಗೆ ಸುಫಾರಿ ನೀಡಿರುವುದು ತಿಳಿದುಬಂದಿದೆ.
ಬಸವರಾಜು ಈ ಹಿಂದೆಯೇ ಕೊಲೆ ಪ್ರಕರಣವೊಂದರ ಆರೋಪಿಯಾಗಿದ್ದು ಶಿಕ್ಷೆ ಅನುಭವಿಸುತ್ತಿದ್ದ. ಬಂಧಿತರಿಂದ 6ಮೊಬೈಲ್ ಫೋನ್ ಗಳು, ಕೆಲ ಮಾರಕಾಸ್ತ್ರಗಳು, ಖಾರದಪುಡಿ, 16,200ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ.