ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ವಿದ್ಯುತ್ ತಂತಿ ಹರಿದು ವ್ಯಕ್ತಿ ಸಾವು

ನಿರ್ಮಾಣದ ಹಂತದಲ್ಲಿರುವ ಮನೆಯೊಂದರ ಕಬ್ಬಿಣ ಕೆಲಸಕ್ಕೆ ಹೋಗಿದ್ದ ನವೀನ್ ಎಂಬ ವ್ಯಕ್ತಿ ಅಧಿಕ ವಿದ್ಯುತ್ ಪ್ರವಹಿಸುವ ತಂತಿ ತಗುಲಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ.

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮಾರ್ಚ್ 27: ನಿರ್ಮಾಣದ ಹಂತದಲ್ಲಿರುವ ಮನೆಯೊಂದರ ಕಬ್ಬಿಣ ಕೆಲಸಕ್ಕೆ ಹೋಗಿದ್ದ ನವೀನ್ ಎಂಬ ವ್ಯಕ್ತಿ ಅಧಿಕ ವಿದ್ಯುತ್ ಪ್ರವಹಿಸುವ ತಂತಿ ತಗುಲಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ.

ಈ ಸಂದರ್ಭದಲ್ಲಿ ನವೀನ್ ಅವರೊಂದಿಗಿದ್ದ ಚಂದ್ರು ಎಂಬ ಇನ್ನೋರ್ವ ವ್ಯಕ್ತಿಗೂ ಸುಟ್ಟ ಗಾಯಗಳಾಗಿದ್ದು, ಅವರೀಗ ಇಲ್ಲಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.[ಹುಣಸೂರು ಬಳಿ ಭೀಕರ ಅಪಘಾತ, ಐವರ ಸಾವು]

A man dies in Mysuru by electric wire

ಇವರಿಬ್ಬರೂ ಅಂಬೇಡ್ಕರ್ ಬೀದಿಯ ಚಿನ್ಮಯ್ ಎಂಬವರ ಮನೆಗೆ ಕಬ್ಬಿಣದ ಕೆಲಸ ಮಾಡಲು ತೆರಳಿದ್ದರು. ಈ ವೇಳೆ ಕಬ್ಬಿಣ ಹಿಡಿದು ಕೆಲಸ ಮಾಡುತ್ತಿರುವಾಗ ಅಧಿಕ ವಿದ್ಯುತ್ ಪ್ರವಹಿಸುವ ತಂತಿ ಇವರಿಗೆ ತಗುಲಿದೆ. ತಕ್ಷಣ ಜ್ಞಾನತಪ್ಪಿ ಬಿದ್ದ ಇಬ್ಬರಲ್ಲಿ ಚಂದ್ರು ಬದುಕಿದ್ದರೆ, ನವೀನ್ ಕೊನೆಯುಸಿರೆಳೆದಿದ್ದಾರೆ.[ಮೈಸೂರು: ಮಗಳನ್ನು ಅಪಹರಿಸುತ್ತೇವೆ ಎಂದಿದ್ದಕ್ಕೆ ತಂದೆ ಆತ್ಮಹತ್ಯೆ]

A man dies in Mysuru by electric wire

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವಿಜಯನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

English summary
A man dies in Mysuru by electric wire. He was working in a construction field. Another man also injured.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X