ಮೈಸೂರಿನಲ್ಲಿ ಸಿಕ್ಕ ಕುರಾನ್ ಜಮ್ಮುವಿನಲ್ಲಿ ಕಳುವಾಗಿದ್ದಲ್ಲ
ಮೈಸೂರು, ಆ.28 : ಮೈಸೂರಿನ ಕೆ.ಆರ್.ನಗರ ತಾಲೂಕಿನಲ್ಲಿ ಸಿಕ್ಕಿದ ಚಿನ್ನದ ಲೇಪನವಿರುವ ಹಾಳೆಗಳ ಕುರಾನ್ ಜಮ್ಮು ಮತ್ತು ಕಾಶ್ಮೀರದ ವಸ್ತು ಸಂಗ್ರಹಾಲಯದಲ್ಲಿ ಕಳುವಾಗಿದ್ದಲ್ಲ ಎಂದು ಸ್ಪಷ್ಟನೆ ಸಿಕ್ಕಿದೆ. ಕುರಾನ್ ಎಲ್ಲಿಯದಿರಬಹುದೆಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಜಮ್ಮು
ಮತ್ತು
ಕಾಶ್ಮೀರದ
ಪೊಲೀಸರು
ಮತ್ತು
ಪುರಾತತ್ವ
ಇಲಾಖೆಯ
5
ಜನರ
ತಂಡ
ಮೈಸೂರಿಗೆ
ಭೇಟಿ
ನೀಡಿ.
ಮೈಸೂರು
ಪೊಲೀಸರು
ವಶಪಡಿಸಿಕೊಂಡ
ಕುರಾನ್
ಪರಿಶೀಲನೆ
ನಡೆಸಿದೆ.
ಈ
ಕುರಾನ್
2003ರಲ್ಲಿ
ಕಾಶ್ಮೀರದಿಂದ
ಕಳುವಾಗಿದ್ದಲ್ಲ
ಎಂದು
ಸ್ಪಷ್ಟನೆ
ನೀಡಿದೆ.
[ಕುರಾನ್
ಜಮ್ಮುವಿನಲ್ಲಿ
ಕಳುವಾಗಿದ್ದು?]
ಆ.10ರಂದು ಕೆ.ಆರ್.ನಗರ ತಾಲೂಕಿನ ಹೊಸ ಅಗ್ರಹಾರ ಬಳಿ ಕುರಾನ್ ಮಾರಲು ಯತ್ನಿಸುತ್ತಿದ್ದ 10 ಮಂದಿಯ ತಂಡವನ್ನು ಪೊಲೀಸರು ಬಂಧಿಸಿದ್ದರು. ಇವರಿಂದ ವಶಪಡಿಸಿಕೊಂಡ ಚಿನ್ನದ ಲೇಪನವಿರುವ ಹಾಳೆಗಳ ಕುರಾನ್ ಅನ್ನು ವಶಪಡಿಸಿಕೊಳ್ಳಲಾಗಿತ್ತು.
ಈ ಕುರಾನ್ ಜಮ್ಮು-ಮತ್ತು ಕಾಶ್ಮೀರದ ಶ್ರೀನಗರದ ವಸ್ತು ಸಂಗ್ರಹಾಲಯದಿಂದ 2003ರಲ್ಲಿ ಕಳುವಾಗಿದ್ದು ಎಂಬ ಶಂಕೆ ವ್ಯಕ್ತವಾಗಿತ್ತು. ಪ್ರತಾಪ್ ಸಿಂಗ್ ವಸ್ತುಸಂಗ್ರಹಾಲಯದ ಸಿಬ್ಬಂದಿ ಈ ಕುರಿತು ಮೈಸೂರು ಪೊಲೀಸರಿಗೆ ಈ ಮೇಲ್ ಮೂಲಕ ಮಾಹಿತಿ ರವಾನಿಸಿದ್ದರು.
ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಮೈಸೂರಿಗೆ ಭೇಟಿ ನೀಡಿ ಕುರಾನ್ ಪರಿಶೀಲನೆ ನಡೆಸಿದ್ದು, ಇದು ಪ್ರತಾಪ್ ಸಿಂಗ್ ವಸ್ತು ಸಂಗ್ರಹಾಲಯದಲ್ಲಿ ಕಳುವಾಗಿದ್ದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈಗ ಪೊಲೀಸರು ಕುರಾನ್ ಎಲ್ಲಿಗೆ ಸೇರಿದ್ದು? ಎಂಬ ತನಿಖೆ ಮುಂದುವರೆಸಿದ್ದಾರೆ.