'ಬೀಫ್ ಬ್ಯಾನ್' ನಂತರ ಮುಸ್ಲಿಂ ಕೋಟಾ ರದ್ದು : 'ಮಹಾ' ಸರ್ಕಾರ
ಮುಂಬೈ, ಮಾ.5: ಗೋ ಹತ್ಯೆ ನಿಷೇಧ ಕಾನೂನು ಜಾರಿಗೊಳಿಸಿ ವಿವಾದ ಸೃಷ್ಟಿಸಿದ ಮಹಾರಾಷ್ಟ್ರದ ಬಿಜೆಪಿ-ಶಿವಸೇನೆ ಮೈತ್ರಿ ಸರ್ಕಾರ ಈಗ ಸರ್ಕಾರಿ ಸಂಸ್ಥೆಗಳಲ್ಲಿ ಮುಸ್ಲಿಮರಿಗೆ ನೀಡುತ್ತಿದ್ದ ಮೀಸಲಾತಿಯನ್ನು ರದ್ದುಗೊಳಿಸಿ ಅದೇಶ ಹೊರಡಿಸಿದೆ.
ಮಹಾರಾಷ್ಟ್ರದಲ್ಲಿ
ಸರ್ಕಾರಿ
ಉದ್ಯೋಗ,
ಶಿಕ್ಷಣ
ಸಂಸ್ಥೆಗಳು
ಹಾಗೂ
ಶಾಲಾ-ಕಾಲೇಜುಗಳಲ್ಲಿ
ಮುಸ್ಲಿಮರಿಗೆ
ಶೇ
5ರಷ್ಟು
ಮೀಸಲಾತಿಯನ್ನು
ನೀಡಲಾಗುತ್ತಿತ್ತು.
ಅದರೆ,
ಮಹಾರಾಷ್ಟ್ರದ
ಬಿಜೆಪಿ-ಶಿವಸೇನೆ
ಮೈತ್ರಿ
ಸರ್ಕಾರ
ಈ
ಮೀಸಲಾತಿಯನ್ನು
ರದ್ದು
ಮಾಡಿ
ಬುಧವಾರ
ಅಧಿಕೃತ
ಆದೇಶ
ಹೊರಡಿಸಿದೆ.
ಕಳೆದ
ರಾತ್ರಿ
ಮಹಾರಾಷ್ಟ್ರ
ಸರ್ಕಾರ
ಹೊರಡಿಸಿರುವ
ಅಧಿಸೂಚನೆಯಂತೆ
ಮುಸ್ಲಿಮರಿಗೆ
ನೀಡಲಾಗುತ್ತಿದ್ದ
ಮೀಸಲಾತಿಯನ್ನು
ಏಕಾಏಕಿ
ರದ್ದುಪಡಿಸಿ
ಸುಗ್ರೀವಾಜ್ಞೆ
ಹೊರಡಿಸಲಾಗಿದೆ.
[ಮಹಾರಾಷ್ಟ್ರದಲ್ಲಿ
ಗೋಹತ್ಯೆ
ನಿಷೇಧ
ಕಾನೂನು
ಜಾರಿ]
ಕಾಂಗ್ರೆಸ್
ಜಾರಿಗೆ
ತಂದಿದ್ದ
ಕಾಯ್ದೆ:
2014
ಜುಲೈ
11ರಂದು
ಅಂದಿನ
ಕಾಂಗ್ರೆಸ್-ಎನ್ಸಿಪಿ
ಸರ್ಕಾರ
ಹೊಸ
ಕಾಯ್ದೆಯೊಂದನ್ನು
ಜಾರಿ
ಮಾಡಿ
ಮರಾಠವಾಡರಿಗೆ
ಶೇ.16
ಹಾಗೂ
ಮುಸ್ಲಿಮರಿಗೆ
ಶೇ.5ರಷ್ಟು
ಮೀಸಲಾತಿಯನ್ನು
ಜಾರಿ
ಮಾಡಿತ್ತು.
ಈ
ಕಾಯ್ದೆಯಂತೆ
ಶಿಕ್ಷಣ
ಸಂಸ್ಥೆಗಳು,
ಸರ್ಕಾರಿ
ಉದ್ಯೋಗಿಗಳು
ಹಾಗೂ
ಕಾಲೇಜುಗಳಲ್ಲಿ
ಮುಸ್ಲಿಮರಿಗೆ
ಶೇ.5ರಷ್ಟು
ಮೀಸಲಾತಿ
ಒದಗಿಸುವುದು
ಈ
ಕಾಯ್ದೆಯ
ಉದ್ದೇಶವಾಗಿತ್ತು.
ವಿಶೇಷ ಹಿಂದುಳಿದ ಸಮುದಾಯದಲ್ಲಿರುವವರು ಈ ಮೀಸಲಾತಿ ಬಳಸಿಕೊಳ್ಳಲು ಅವಕಾಶವಿತ್ತು. ಆದರೆ, ಹಿಂದಿನ ಸರ್ಕಾರ ಜಾರಿ ಮಾಡಿದ್ದ ಕಾಯ್ದೆ ಮಹಾರಾಷ್ಟ್ರದಲ್ಲಿ ದೊಡ್ಡ ವಿವಾದವನ್ನೇ ಸೃಷ್ಟಿಸಿತ್ತು. ಬಿಜೆಪಿ, ಶಿವಸೇನೆ ಸರ್ಕಾರ ಇದಕ್ಕೆ ವಿರೋಧ ವ್ಯಕ್ತಪಡಿಸಿ ಮರಾಠರಿಗೆ ಮಾತ್ರ ಮೀಸಲಾತಿ ನೀಡಬೇಕು. ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಸಮುದಾಯಕ್ಕೆ ಈ ಮೀಸಲಾತಿ ಅಗತ್ಯವಿದೆ. ಮುಸ್ಲಿಮರಿಗೆ ನೀಡಬಾರದೆಂದು ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ಗೆ ಒತ್ತಾಯಿಸಿದ್ದರು.
2014 ಡಿಸೆಂಬರ್ 23ರ ಸುಗ್ರೀವಾಜ್ಞೆಯನ್ನು ನಮ್ಮ ಸರ್ಕಾರ ರದ್ದು ಮಾಡಲಿದೆ. ಯಾವ ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಇದನ್ನು ರದ್ದು ಮಾಡುತ್ತಿಲ್ಲ. ಎಲ್ಲರಿಗೂ ಸಂವಿಧಾನದ ಪ್ರಕಾರವೇ ಮೀಸಲಾತಿ ನೀಡಲು ಸರ್ಕಾರ ಬದ್ಧವಾಗಿದೆ. ಕಾಯ್ದೆಯಲ್ಲಿ ಸಾಕಷ್ಟು ಲೋಪದೋಷಗಳಿರುವುದರಿಂದ ಮೀಸಲಾತಿಯನ್ನು ರದ್ದುಪಡಿಸಲಾಗಿದೆ ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.
ಈ ಸಂಬಂಧ ಮುಂಬೈ ಹೈಕೋರ್ಟ್ ಸಮುದಾಯ ಶಿಕ್ಷಣ ಸಂಸ್ಥೆಗಳಿಗೆ ನೀಡುತ್ತಿರುವ ಮೀಸಲಾತಿಯನ್ನು ಮುಂದುವರಿಸಬೇಕೆಂಬ ಆದೇಶದ ಬಗ್ಗೆ ಸರ್ಕಾರ ಮನವರಿಕೆ ಮಾಡಿಕೊಡಲಿದೆ ಎಂದು ಸುತ್ತೋಲೆಯಲ್ಲಿ ಹೇಳಿದ್ದಾರೆ. ಮೀಸಲಾತಿ ರದ್ದುಗೊಂಡಿರುವುದರಿಂದ ಮುಸ್ಲಿಮ್ ಮುಖಂಡರು ಸಹಜವಾಗೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಕಾನೂನು ತಜ್ಞರ ಸಲಹೆ ಪಡೆದು ಮುಂದಿನ ನಡೆ ಇಡುವುದಾಗಿ ಹೇಳಿದ್ದಾರೆ
ಒನ್ ಇಂಡಿಯಾ ಸುದ್ದಿ