ಮಹಾರಾಷ್ಟ್ರ ಕಟ್ಟಡ ಕುಸಿತ, ಐವರು ಕನ್ನಡಿಗರ ದುರ್ಮರಣ
ಮುಂಬೈ, ಆಗಸ್ಟ್ 4 : ಮಹಾರಾಷ್ಟ್ರದ ನೌಪಾಡದಲ್ಲಿ ಕುಸಿದ ಕಟ್ಟಡದ ಅವಶೇಷಗಳಡಿ ಸಿಲುಕಿ 5 ಕನ್ನಡಿಗರು ಮೃತಪಟ್ಟಿದ್ದಾರೆ. ಮೃತಪಟ್ಟರೆಲ್ಲಾ ಬಂಟ್ವಾಳದವರು ಎಂದು ತಿಳಿದುಬಂದಿದೆ. ಮೃತಪಟ್ಟವರನ್ನು ಪಾಂಡುರಂಗ ಭಟ್ (62), ಮೀರಾ ಪಾಂಡುರಂಗ ಭಟ್ (58), ಸುಬ್ರಾಯ್ ಭಟ್ (56), ರುಚಿತ ಭಟ್ (25), ರಶ್ಮಿ ರಾಮಚಂದ್ರ ಭಟ್ (25) ಎಂದು ಗುರುತಿಸಲಾಗಿದೆ.
ಕಟ್ಟಡ
ಕುಸಿತ
11
ಸಾವು
:
ಮಹಾರಾಷ್ಟ್ರದ
ನೌಪಾಡದಲ್ಲಿ
ಮೂರು
ಅಂತಸ್ತಿನ
ಕಟ್ಟಡ
ಕುಸಿದು
ಬಿದ್ದಿದ್ದು
11
ಜನರು
ಸಾವನ್ನಪ್ಪಿದ್ದಾರೆ.
ಅವಶೇಷಗಳ
ಅಡಿಯಿಂದ
8
ಜನರನ್ನು
ರಕ್ಷಣೆ
ಮಾಡಲಾಗಿದ್ದು,
ಇನ್ನೂ
9
ಜನರು
ಸಿಲುಕಿರುವ
ಸಾಧ್ಯತೆ
ಇದೆ.
ಮಂಗಳವಾರ ಮುಂಜಾನೆ 2.30ರ ಸುಮಾರಿಗೆ 50 ವರ್ಷಗಳಷ್ಟು ಹಳೆಯದಾದ ಮೂರು ಅಂತಸ್ತಿನ ಕಟ್ಟಡ ಕುಸಿದು ಬಿದ್ದಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ 8 ಜನರನ್ನು ರಕ್ಷಣೆ ಮಾಡಿದ್ದಾರೆ. [ಥಾಣೆ ದುರಂತ: ಮೃತ್ಯುಕೂಪವಾದ ಮಾತೃಛಾಯಾ ಕಟ್ಟಡ]
ಕಟ್ಟಡಗಳ ಅವಶೇಷಗಳನ್ನು ತೆರವುಗೊಳಿಸಿ ಸಿಲುಕಿಕೊಂಡವರನ್ನು ರಕ್ಷಣೆ ಮಾಡಲು ಅಗ್ನಿ ಶಾಮಕ ದಳದವರು ಕಾರ್ಯಾಚರಣೆ ಮುಂದುವರೆಸಿದ್ದಾರೆ. ಸುಮಾರು 9 ಜನರು ಅವಶೇಷಗಳ ಅಡಿ ಸಿಲುಕಿರಬಹುದು ಎಂದು ಶಂಕಿಸಲಾಗಿದೆ. [ಬೆಂಗಳೂರು : ಮೂವರ ಜೀವ ತಗೆದ 6 ಅಂತಸ್ತಿನ ಕಟ್ಟಡ]
ಕಟ್ಟಡ ಶಿಥಿಲಗೊಂಡಿದೆ ಎಂದು ಹಲವು ಬಾರಿ ಜಿಲ್ಲಾಡಳಿತ ಅಲ್ಲಿನ ನಿವಾಸಿಗಳಿಗೆ ಮಾಹಿತಿ ನೀಡಿತ್ತು. ಆದರೂ ಸಹ ನಿವಾಸಿಗಳು ಮನೆಗಳನ್ನು ತೆರವುಗೊಳಿಸಿರಲಿಲ್ಲ. ಇಂದು ಮುಂಜಾನೆ ಕಟ್ಟಡ ಕುಸಿದು ಬಿದ್ದಿದೆ.