ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈಯಲ್ಲಿ ಸೈನಿಕನ ಆತ್ಮಹತ್ಯೆ: ಕಾರಣ ನಿಗೂಢ

|
Google Oneindia Kannada News

ಮುಂಬೈ, ಜೂನ್ 27: ಮಹಾರಾಷ್ಟ್ರದ ಪುಣೆಯ ಖಾರ್ಕಿ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿದ್ದ ಸೈನಿಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಮುಂಬೈಯ ನಾರಾಯಣ ಸೇವಾಶ್ರಮದಲ್ಲಿ, ಜೂನ್ 26 ರಂದು ನಡೆದಿದೆ.

ಉತ್ತರಪ್ರದೇಶದಲ್ಲಿ ಜಮ್ಮು ಮೂಲದ ಮೇಜರ್ ಆತ್ಮಹತ್ಯೆಉತ್ತರಪ್ರದೇಶದಲ್ಲಿ ಜಮ್ಮು ಮೂಲದ ಮೇಜರ್ ಆತ್ಮಹತ್ಯೆ

ಆಶ್ರಮದಲ್ಲೇ ವಾಸವಾಗಿದ್ದ ನೀರಜ್ ಕುಮಾರ್ ಯಾದವ್ ಎಂಬ ಸೈನಿಕನೇ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ಎಂದು ಗುರುತಿಸಲಾಗಿದೆ.

Indian Soldier commits suicide in Mumbai

ಇಲ್ಲಿನ ಗಾಂದೇವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಮೃತರ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ. ಆದರೆ ಆತ್ಮಹತ್ಯೆಗೆ ಕಾರಣ ಮಾತ್ರ ನಿಗೂಢವಾಗಿಯೇ ಇದೆ.

ಜಮ್ಮು -ಕಾಶ್ಮೀರದಲ್ಲಿ ಬೆಳಗಾವಿಯ ಯೋಧ ಆತ್ಮಹತ್ಯೆ ಜಮ್ಮು -ಕಾಶ್ಮೀರದಲ್ಲಿ ಬೆಳಗಾವಿಯ ಯೋಧ ಆತ್ಮಹತ್ಯೆ

ಇತ್ತೀಚೆಗೆ ಯೋಧರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿದ್ದು, ಮಾನಸಿಕ ಒತ್ತಡದಿಂದಾಗಿ ಜೂನ್ 1 ರಂದು ಜಮ್ಮು ಕಾಶ್ಮೀರ ಮೂಲದ ಮೇಜರ್ ಗುರ್ಜಿತ್ ಸೀಮಗ್ ಬಾಲಿ ಎಂಬ ಯೋಧ ಆತ್ಮಹತ್ಯೆಗೆ ಶರಣಾಗಿದ್ದರು.

ಹಾಗೆಯೇ ಮೇ 4 ರಂದು ಬೆಳಹಗಾವಿಯ ವಿಶಾಲ್ ಲೋಹಾರ್ ಎಂಬ ಯೋಧ ಸಹ ಜಮ್ಮು ಕಾಶ್ಮೀರದ ಗಡಿಯಲ್ಲಿ ತಮಗೆ ತಾವೇ ಗುಂಡುಹೊಡೆದುಕೊಂದು ಆತ್ಮಹತ್ಯೆ ಮಾಡಿಕೊಂದಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

English summary
A soldier posted in Pune's Kharki area committed Suicide in Narayana Sevashram at Mumbai, on June 26th, Monday. The reason is yet to be known.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X