ಜಾಹೀರಾತು: ಸಲಿಂಗಿ ಅಯ್ಯರ್ ಮದ್ವೆಗೆ ಗಂಡು ಬೇಕಿದೆ
ಮುಂಬೈ, ಮೇ.19: ಸಮಾಜದ ಕಟ್ಟುಪಾಡು, ಕಾನೂನಿನ ತೊಡರುಗಳ ನಡುವೆ "ಮದುವೆಯಾಗಲು ನನಗೊಂದು ಗಂಡು ಬೇಕು" ಎಂಬ ಜಾಹೀರಾತು ನೀಡುವಲ್ಲಿ ಹರೀಶ್ ಅಯ್ಯರ್ ಯಶಸ್ವಿಯಾಗಿದ್ದಾರೆ. ಅಂದ ಹಾಗೆ, ಹರೀಶ್ ಜನಪ್ರಿಯ ಸಲಿಂಗಿಪರ ಹೋರಾಟ ಹಾಗೂ ಎಲಿಜಬಲ್ ವರ.
ಈ
ವಿಶಿಷ್ಟ
'ಮ್ಯಾಟ್ರಿಮೊನಿ
ಜಾಹೀರಾತು'
ನೀಡುವುದು
ಭಾರತದಂಥ
ದೇಶದಲ್ಲಿ
ಸುಲಭವಲ್ಲ
ಎಂಬುದನ್ನು
ಬಿಡಿಸಿ
ಹೇಳಬೇಕಾಗಿಲ್ಲ.
ಹರೀಶ್
ಅವರು
ಕೂಡಾ
ಎಲ್
ಜಿಬಿಟಿ
ಸಮುದಾಯದ
ಸ್ನೇಹಿತರ
ಸಲಹೆ
ಪಡೆದು
ಮದುವೆಯಾಗಳು
ನಿರ್ಧರಿಸಿದ್ದಾರೆ.
'ನನ್ನ
ಮಗನಿಗೊಂದು
ಗಂಡು
ಬೇಕಿದೆ'
ಎಂದು
ಹರೀಶ್
ತಾಯಿ
ಅವರು
ಜಾಹೀರಾರು
ರೆಡಿ
ಮಾಡಿಕೊಂಡು
ಪ್ರಮುಖ
ದಿನಪತ್ರಿಕೆಗಳ
ಕಚೇರಿ
ಸುತ್ತಿದ್ದಾರೆ.
ಅದರೆ, ಹಲವೆಡೆ ಅಪಹಾಸ್ಯಕ್ಕೀಡಾದ ಹರೀಶ್ ಅವರ ತಾಯಿಗೆ ಕೊನೆಗೂ ಮಿಡ್ ಡೇ ಕಚೇರಿ ಬಾಗಿಲು ತೆಗೆದಿದೆ.
ಜಾಹೀರಾತು
ಹೀಗಿದೆ:
Seeking
25-40,
Well
Placed,
Animal-Loving,
Vegetarian
Groom
for
my
son
(36,
5'11'')
who
works
with
an
NGO,
Caste
No
Bar
(Though
Iyer
Preferred)
ಮದುವೆ ಎಂದರೆ ಮನಸು, ಆತ್ಮಗಳ ಸಮ್ಮಿಲನ, ಮಾನವರೆಂದ ಮೇಲೆ ಎಲ್ಲರಿಗೂ ಸಮಾನ ಹಕ್ಕು ಸಿಗಬೇಕು ಎಂಬುದು ನಮ್ಮ ಉದ್ದೇಶ ಹೀಗಾಗಿ ನಮ್ಮಲ್ಲಿ(ಮಿಡ್ ಡೇ) ಈ ಜಾಹೀರಾತು ಪ್ರಕಟಿಸಿದ್ದೇವೆ. ಇದು ಜಾತಿ, ಮತ, ಪಂಥ, ಲಿಂಗ ತಾರತಮ್ಯಗಳನ್ನು ಮೀರಿದ ಘಟನೆ ಎಂದು ಮಿಡ್ ಡೇ ಸಂಪಾದಕ ಸಚಿನ್ ಕಲ್ಬಾಗ್ ಪ್ರತಿಕ್ರಿಯಿಸಿದ್ದಾರೆ.