'ಎತ್ತಿನಹೊಳೆ ಯೋಜನೆಯಿಂದ ನೇತ್ರಾವತಿ ಬರಿದಾಗುತ್ತೆ'
ಮಂಗಳೂರು,
ಆ.31
:
ಬಯಲುಸೀಮೆ
ಜಿಲ್ಲೆಗಳಿಗೆ
ಪಶ್ಚಿಮಘಟ್ಟದ
ನದಿಗಳಿಂದ
ನೀರು
ತರುವ
ಎತ್ತಿನಹೊಳೆ
ಯೋಜನೆ
ಜಾರಿಯಾದರೆ
ಜೀವನದಿ
ನೇತ್ರಾವತಿ
ನದಿ
ಬತ್ತುವ
ಜತೆಗೆ
ಕರಾವಳಿ
ಮೇಲೆ
ಭಾರೀ
ದುಷ್ಪರಿಣಾಮ
ಉಂಟಾಗಲಿದೆ
ಎಂದು
ಮಾಜಿ
ಕೇಂದ್ರ
ಸಚಿವ
ಜನಾರ್ದನ
ಪೂಜಾರಿ
ಆತಂಕ
ವ್ಯಕ್ತಪಡಿಸಿದ್ದಾರೆ.
ಮಂಗಳೂರಿನಲ್ಲಿ
ಪತ್ರಿಕಾಗೋಷ್ಠಿ
ನಡೆಸಿದ
ಜನಾರ್ದನ
ಪೂಜಾರಿ
ಅವರು,
'ಈ
ಯೋಜನೆ
ವಿರುದ್ಧ
ಬೆಳ್ತಂಗಡಿ,
ಪುತ್ತೂರು,
ಸುಳ್ಯ
ಶಾಸಕರನ್ನು
ಹೊರತುಪಡಿಸಿ
ಈ
ಭಾಗದ
ಸಂಸದರು
ಹಾಗೂ
ಶಾಸಕರು,
ಜನಪ್ರತಿನಿಧಿಗಳು
ಅಡ್ಡಗೋಡೆ
ಮೇಲೆ
ದೀಪವಿಟ್ಟಂತೆ
ಮಾತನಾಡುತ್ತಿದ್ದಾರೆ
ಎಂದು
ಆರೋಪಿಸಿದರು'.
[ಎತ್ತಿನಹೊಳೆ
ಯೋಜನೆ
ಕುಡಿಯುವ
ನೀರಿಗಾಗಿ
ಮಾತ್ರ]
'ಜನರ ಹಿತಕ್ಕಿಂತ ಅಧಿಕಾರವೇ ಮುಖ್ಯ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ದೂರಿದ ಪೂಜಾರಿ ಅವರು, ಕರಾವಳಿ ಜಿಲ್ಲೆಯ ಜೀವ ನದಿಯನ್ನು ಬತ್ತುವಂತೆ ಮಾಡುವ ಎತ್ತಿನಹೊಳೆ ಯೋಜನೆಯನ್ನು ಇದೇ ಭಾಗದ ಮಾಜಿ ಮುಖ್ಯಮಂತ್ರಿಗಳು ಮಾಡುತ್ತಿರುವುದು ದುರಾದೃಷ್ಟಕರ' ಎಂದರು.[ಎತ್ತಿನ ಹೊಳೆ ಯೋಜನೆ ಕುರಿತು ಓದಿ]
'ಯೋಜನೆ ಜಾರಿಯಾದರೆ ಅಡಿಕೆ ತೋಟ, ಗದ್ದೆ ಸೇರಿದಂತೆ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡು ರೈತರು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಲಿದೆ. ವಿದ್ಯುತ್ ಘಟಕಗಳಿಗೆ ನೀರಿಲ್ಲದ ಪರಿಸ್ಥಿತಿ, ಆಸ್ಪತ್ರೆಗಳಿಗೆ ನೀರು ಸರಬರಾಜು ಆಗದ ಪರಿಸ್ಥಿತಿ ನಿರ್ಮಾಣವಾಗಲಿದೆ' ಎಂದು ಹೇಳಿದರು.
'ಕಳಸ ಬಂಡೂರಿ ಯೋಜನೆ ಕುರಿತು ಸರ್ವಪಕ್ಷ ನಿಯೋಗ ಪ್ರಧಾನಿಯವರನ್ನು ಭೇಟಿ ಮಾಡಿದಾಗ ಅವರು ಉಡಾಫೆಯಾಗಿ ಮಾತನಾಡಿರುವುದು ಬೇಸರ ತಂದಿದೆ ಎಂದು ಹೇಳಿದ ಪೂಜಾರಿ ಅವರು, ಎಲ್ಲಾ ರಾಜ್ಯಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕಾದ ಪ್ರಧಾನಿಯವರು, ಗೋವಾ ಮತ್ತು ಮಹಾರಾಷ್ಟ್ರ ಬಿಜೆಪಿ ಸರ್ಕಾರದ ಪರವಾಗಿ ನಿಂತು ರಾಜಕೀಯ ಮಾಡಿದ್ದಾರೆ' ಎಂದು ದೂರಿದರು.
ಏನಿದು ಯೋಜನೆ? : ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಗಳಿಗೆ 24 ಟಿಎಂಸಿ ಕುಡಿಯುವ ನೀರು ಒದಗಿಸುವ ಯೋಜನೆ ಇದಾಗಿದೆ. 2014ರ ಮಾರ್ಚ್ 3ರಂದು ಈ ಯೋಜನೆಗೆ ಶಂಕುಸ್ಥಾಪನೆ ಮಾಡಲಾಗಿದೆ.